ಆ್ಯಪ್ನಗರ

‘ವಿಕಾಸ ವರ್ಷ’ ವಿಶೇಷ ಕೃಷಿ ಸಾಲ ಅಭಿಯಾನ

ಧಾರವಾಡ: ಕೃಷಿಕರ ಆರ್ಥಿಕ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಯೋಜನಾ ಬದ್ಧವಾಗಿದ್ದು, ಈ ನಿಟ್ಟಿನಲ್ಲಿವಿಕಾಸ ವರ್ಷ ಎಂಬ ವಿಶೇಷ ಕೃಷಿ ಸಾಲ ಅಭಿಯಾನವನ್ನು ಆರಂಭಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ ತಿಳಿಸಿದರು.

Vijaya Karnataka 4 Jun 2020, 5:00 am
ಧಾರವಾಡ: ಕೃಷಿಕರ ಆರ್ಥಿಕ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಯೋಜನಾ ಬದ್ಧವಾಗಿದ್ದು, ಈ ನಿಟ್ಟಿನಲ್ಲಿವಿಕಾಸ ವರ್ಷ ಎಂಬ ವಿಶೇಷ ಕೃಷಿ ಸಾಲ ಅಭಿಯಾನವನ್ನು ಆರಂಭಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ ತಿಳಿಸಿದರು.
Vijaya Karnataka Web vishesh varsha special agricultural loan campaign
‘ವಿಕಾಸ ವರ್ಷ’ ವಿಶೇಷ ಕೃಷಿ ಸಾಲ ಅಭಿಯಾನ


ನಗರದಲ್ಲಿಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಇಲ್ಲಿಯವರೆಗೆ ಬ್ಯಾಂಕ್‌ ಸಾಲದಿಂದ ದೂರವಿರುವ ರೈತರ ಸಮೀಕ್ಷೆ ನಡೆದಿದ್ದು, ಈ ಸಂಬಂಧ ರೈತಕೂಟ, ಸ್ವಯಂ ಸೇವಾ ಸಂಸ್ಥೆ ಹಾಗೂ ಕೃಷಿ ಇಲಾಖೆಗಳ ಸಹಾಯ ಪಡೆಯಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಅಡಿಯಲ್ಲಿಕೃಷಿ ಸಾಲವಾಗಿ 3700 ಕೋಟಿ ರೂ. ವಿತರಿಸಲು ಬ್ಯಾಂಕ್‌ ಯೋಜನೆ ರೂಪಿಸಿದೆ. ಖಾತೆ ಇಲ್ಲಎಂಬ ಸಣ್ಣ ಕಾರಣಕ್ಕೆ ಸಾಲ ನಿರಾಕರಿಸಬಾರದು ಎಂದು ಎಲ್ಲ633 ಶಾಖೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.

ಮುಂಗಾರು ಪ್ರಾರಂಭದ ಎಲ್ಲಉತ್ತಮ ಲಕ್ಷಣಗಳಿದ್ದು, ಅರ್ಹ ರೈತರು ಹೊಸ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಈಗಾಗಲೆ ಬೆಳೆಸಾಲ ಪಡೆದು ತುಂಬದಿರುವ ರೈತರು ಕೂಡ ತಮ್ಮ ಬೆಳೆಸಾಲವನ್ನು ಮರುಪಾವತಿಸಿ ಹೆಚ್ಚಿನ ಮಿತಿಯಲ್ಲಿಸಾಲ ಸೌಲಭ್ಯ ಪಡೆಯಬಹುದಾಗಿದೆ. ಅವಧಿಯೊಳಗಡೆ ಪಾವತಿಸುವ ರೈತರಿಗೆ ಸಾಲದ ಮಿತಿ ಅನುಸರಿಸಿ ಶೇ.4ರಷ್ಟು ಬಡ್ಡಿ ಸಹಾಯಧನದ ಲಭ್ಯವಿದೆ. ಬಹಳಷ್ಟು ರೈತರು ಅವಧಿಯೊಳಗಡೆ ಮರುಪಾವತಿಸದೆ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದರು.

ಕೃಷಿರಂಗಕ್ಕೆ ಸಾಲ ಸೌಲಭ್ಯದ ಮೊತ್ತವನ್ನು ಹೆಚ್ಚಿಸಲು ಬ್ಯಾಂಕ್‌ ತನ್ನದೇ ಆದ ಕೃಷಿ ಸಾಲ ಯೋಜನೆಯನ್ನು ರೂಪಿಸಿದೆ. ಹಾಗೆಯೇ ಬೆಳೆ ಸಾಲ ವಿತರಣೆಗೆ ಚುರುಕು ನೀಡಲು ಮತ್ತು ಸಕಾಲಿಕ ಪರಾಮರ್ಶೆಗೆ ಬ್ಯಾಂಕ್‌ ಪ್ರತಿ ಪ್ರಾದೇಶಿಕ ಕಾರ್ಯಾಲಯದಲ್ಲೂಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ