ಆ್ಯಪ್ನಗರ

ಮತದಾನ ರಾಜಕೀಯ ಹಕ್ಕಲ್ಲ, ನೈಸರ್ಗಿಕ ಹಕ್ಕು

ಧಾರವಾಡ: ಮತದಾನ ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದ್ದು, ಇದು ರಾಜಕೀಯ ಹಕ್ಕಲ್ಲ, ನೈಸರ್ಗಿಕ ಹಕ್ಕು. ದೇಶದ ಭವಿಷ್ಯ ನಮ್ಮೆಲ್ಲರ ಬೆರಳಲ್ಲಿದ್ದು, ಪ್ರತಿಯೊಬ್ಬರೂ ಜಾಗೃತ ಮತದಾರರಾಗಬೇಕು ಎಂದು ಮಹಾಂತ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿ.ಕೆ. ಮಠ ಹೇಳಿದರು.

Vijaya Karnataka 3 Mar 2020, 5:00 am
ಧಾರವಾಡ: ಮತದಾನ ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದ್ದು, ಇದು ರಾಜಕೀಯ ಹಕ್ಕಲ್ಲ, ನೈಸರ್ಗಿಕ ಹಕ್ಕು. ದೇಶದ ಭವಿಷ್ಯ ನಮ್ಮೆಲ್ಲರ ಬೆರಳಲ್ಲಿದ್ದು, ಪ್ರತಿಯೊಬ್ಬರೂ ಜಾಗೃತ ಮತದಾರರಾಗಬೇಕು ಎಂದು ಮಹಾಂತ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿ.ಕೆ. ಮಠ ಹೇಳಿದರು.
Vijaya Karnataka Web voting is not a political right but a natural right
ಮತದಾನ ರಾಜಕೀಯ ಹಕ್ಕಲ್ಲ, ನೈಸರ್ಗಿಕ ಹಕ್ಕು


ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಇತ್ತೀಚೆಗೆ ಆಯೋಜಿಸಿದ್ದ ಮಹಾಂತ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರದ 2ನೇ ದಿನದ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಸಮರ್ಥ ಅಭ್ಯರ್ಥಿಗೆ ಮತ ನೀಡುವ ಮೂಲಕ ದೇಶದ ಭವಿಷ್ಯವನ್ನು ರೂಪಿಸುವ ಕಾರ್ಯ ಮಾಡಬೇಕು ಎಂದರು.

ಚಂದ್ರಶೇಖರ ಮನಗುಂಡಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿಪಾಲ್ಗೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸ ಮಾಡಬೇಕು. ಜೀವನದಲ್ಲಿನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯುವ ಮೂಲಕ ಆದರ್ಶ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದರು.

ಪ್ರೊ. ಎಸ್‌.ಸಿ. ಕೋಟಿ ಅವರು, ಮತದಾನದ ಮಹತ್ವ ಮತ್ತು ಮತ ಚಲಾವಣೆಯ ಪ್ರಕ್ರಿಯೆಯ ಕುರಿತು ಮಾತನಾಡಿದರು. ಪ್ರಾಚಾರ್ಯ ಡಾ. ಸಿ.ಎಂ. ಕಡಕೋಳ, ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಕೆ.ಎಸ್‌. ಮೇಲ್ಮಾಳಗಿ, ಸಿ.ಕೆ. ಹುಬ್ಬಳ್ಳಿ, ರಮೇಶ ಮಾಳಗಿ, ಪ್ರಕಾಶ ಗೊರವನಕೊಳ್ಳ, ಜಯಲಕ್ಷ್ಮೇ ಯಂಡಿಗೇರಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ