ಆ್ಯಪ್ನಗರ

ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಡಿಗೆ ಅಭಿಯಾನ

ಹುಬ್ಬಳ್ಳಿ : ಸಕ್ಷಮ, ಆಶಾಕಿರಣ ಕಿಮ್ಸ್‌, ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಸಂಸ್ಥೆ ವತಿಯಿಂದ ಶುಕ್ರವಾರ ಬಿವಿಬಿ ಕಾಲೇಜ್‌ ಆವರಣದಲ್ಲಿ ನಡೆದ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಡಿಗೆ ಅಭಿಯಾನ ನಡೆಯಿತು.

Vijaya Karnataka 9 Sep 2019, 5:00 am
ಹುಬ್ಬಳ್ಳಿ : ಸಕ್ಷಮ, ಆಶಾಕಿರಣ ಕಿಮ್ಸ್‌, ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಸಂಸ್ಥೆ ವತಿಯಿಂದ ಶುಕ್ರವಾರ ಬಿವಿಬಿ ಕಾಲೇಜ್‌ ಆವರಣದಲ್ಲಿ ನಡೆದ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಡಿಗೆ ಅಭಿಯಾನ ನಡೆಯಿತು.
Vijaya Karnataka Web DRW-6MANJU1
ಹುಬ್ಬಳ್ಳಿಯಲ್ಲಿ ಸಕ್ಷಮ, ಆಶಾಕಿರಣ ಕಿಮ್ಸ್‌, ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಸಂಸ್ಥೆ ವತಿಯಿಂದ ಬಿವಿಬಿ ಕಾಲೇಜ್‌ ಆವರಣದಲ್ಲಿ ನಡೆದ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಡಿಗೆ ಅಭಿಯಾನ ನಡೆಯಿತು.


ಕೈಯಲ್ಲಿ ನೇತ್ರದಾನ ಶ್ರೇಷ್ಠದಾನ ಮತ್ತು ದೃಷ್ಟಿ ಮಹತ್ವ ಸಾರುವ ಬಿತ್ತಿಪತ್ರ ಹಿಡಿದ ನೂರಾರು ವೈದ್ಯ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು. ಬಿವಿಬಿ ಕಾಲೇಜಿನಿಂದ ಆರಂಭವಾದ ಅಭಿಯಾನ ಕಿಮ್ಸ್‌ವರೆಗೆ ಬಂದು ತಲುಪಿತು.

ಡಾ.ಕೆ.ಎಫ್‌. ಕಮ್ಮಾರ ಮಾತನಾಡಿ, ಮನುಷ್ಯನಿಗೆ ನೇತ್ರ ಅಮೂಲ್ಯ ಅಂಗ. ಮನುಷ್ಯ ನಿಧನವಾದ ನಂತರ ಆತನ ಕಣ್ಣನ್ನು ಮಣ್ಣಲ್ಲಿ ಮಣ್ಣು ಮಾಡುವ ಬದಲು ದೃಷ್ಟಿ ಇಲ್ಲದವರಿಗೆ ನೇತ್ರದಾನ ಮಾಡಿ ಆತನ ಜೀವನಕ್ಕೆ ಬೆಳಕು ನೀಡಬೇಕು ಎಂದರು.

ಅಕ್ಷಮ ಸಂಸ್ಥೆ ಉಪಾಧ್ಯಕ್ಷ ಡಾ.ಸುನೀಲ ಗೋಕಾಕ ಮಾತನಾಡಿದರು.ಡಾ. ಶೋಭಾ ಕಟಕೋಳ, ಡಾ.ರಮೇಶ ಬಾಬು, ಡಾ.ಕೃಷ್ಣ ಪ್ರಸಾದ, ಡಾ.ಗುರು ಪ್ರಸಾದ, ಅಚ್ಯುತ ಲಿಮೆ, ಜಿತೇಂದ್ರ ಮಜೇಥಿಯಾ, ಶೀಧರ ನಾಡಗೇರ, ಪ್ರಶಾಂತ ಅಗರವಾಲ, ಶ್ರೀನಿವಾಸ್‌ ರಾವ, ಜಯಲಾಲ್‌ ಪಟೇಲ್‌, ಅಮೃತ್‌ಲಾಲ್‌ ಪಟೇಲ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ