ಹುಬ್ಬಳ್ಳಿ: ಕ್ವಾರಂಟೈನ್ನಲ್ಲಿಇರಬೇಕಾದ ಯುವಕರು ನಗರದ ಚೆನ್ನಮ್ಮ ವೃತ್ತದ ಬಳಿ ಕಾಣಿಸಿಕೊಂಡ ಘಟನೆ ಶನಿವಾರ ನಡೆದಿದೆ. ಚಿತ್ರದುರ್ಗದಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿ ಕೈಗೆ ಶುಕ್ರವಾರ ಕ್ವಾರಂಟೈನ್ ಸೀಲ್ ಹಾಕಲಾಗಿದೆ. ಹಾಸ್ಟೆಲ್ನಲ್ಲಿಇರುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಆದರೆ, ಈತ ಚೆನ್ನಮ್ಮ ವೃತ್ತದ ಬಳಿ ನಿಂತಿರುವುದನ್ನು ಕಂಡ ಪೊಲೀಸರು ಮತ್ತು ಅಲ್ಲಿನ ಸಾರ್ವಜನಿಕರು ವಿಚಾರಿಸಿದ್ದಾರೆ. ಈ ವೇಳೆ ಯುವಕರಿಬ್ಬರು ತಾವು ಹೊರ ರಾಜ್ಯದಿಂದ ಬಂದಿಲ್ಲ. ಎಲ್ಲಿಯೂ ತಿರುಗಾಡಿಲ್ಲ. ಕ್ವಾರಂಟೈನ್ನಲ್ಲಿಇರುವಂತೆ ನಮಗೆ ಸುಮ್ಮನೆ ಸೀಲ್ ಹಾಕಲಾಗಿದೆ ಎಂದು ಹೇಳಿ ನುಣುಚಿಕೊಂಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಾಗಿ ಜವಾಬ್ದಾರಿ ಮರೆತು ತಿರುಗಾಡಿದ್ದಾರೆ ಎಂದು ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಸೀಲ್ ಹಾಕಿಕೊಂಡವರ ಅಲೆದಾಟ
ಹುಬ್ಬಳ್ಳಿ: ಕ್ವಾರಂಟೈನ್ನಲ್ಲಿಇರಬೇಕಾದ ಯುವಕರು ನಗರದ ಚೆನ್ನಮ್ಮ ವೃತ್ತದ ಬಳಿ ಕಾಣಿಸಿಕೊಂಡ ಘಟನೆ ಶನಿವಾರ ನಡೆದಿದೆ. ಚಿತ್ರದುರ್ಗದಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿ ಕೈಗೆ ಶುಕ್ರವಾರ ಕ್ವಾರಂಟೈನ್ ಸೀಲ್ ಹಾಕಲಾಗಿದೆ. ಹಾಸ್ಟೆಲ್ನಲ್ಲಿಇರುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಆದರೆ, ಈತ ಚೆನ್ನಮ್ಮ
Vijaya Karnataka 31 May 2020, 5:00 am