ಆ್ಯಪ್ನಗರ

ಜುಲೈನಲ್ಲಿ ನೀರು, ಸ್ವಚ್ಛತೆ, ವಸತಿ ಸರ್ವೆ

ಹುಬ್ಬಳ್ಳಿ :ಉತ್ತರ ಕರ್ನಾಟಕ ಭಾಗದಲ್ಲಿನ ಕುಡಿಯುವ ನೀರು, ಸ್ವಚ್ಛತೆ, ವಸತಿ, ವಿಶೇಷಚೇತನರ ಕುರಿತು ಜುಲೈನಿಂದ ಎನ್‌ಎಸ್‌ಎಸ್‌ಒ (ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌) ಅಧಿಕಾರಿಗಳು ಸರ್ವೆ ಆರಂಭಿಸಲಿದ್ದಾರೆ ಎಂದು ಎನ್‌ಎಸ್‌ಎಸ್‌ಓ ಮಹಾನಿರ್ದೇಶಕ ಕೃಷ್ಣಮೂರ್ತಿ ಮಯ್ಯಾ ತಿಳಿಸಿದರು.

Vijaya Karnataka 20 Jun 2018, 5:00 am
ಹುಬ್ಬಳ್ಳಿ :ಉತ್ತರ ಕರ್ನಾಟಕ ಭಾಗದಲ್ಲಿನ ಕುಡಿಯುವ ನೀರು, ಸ್ವಚ್ಛತೆ, ವಸತಿ, ವಿಶೇಷಚೇತನರ ಕುರಿತು ಜುಲೈನಿಂದ ಎನ್‌ಎಸ್‌ಎಸ್‌ಒ (ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌) ಅಧಿಕಾರಿಗಳು ಸರ್ವೆ ಆರಂಭಿಸಲಿದ್ದಾರೆ ಎಂದು ಎನ್‌ಎಸ್‌ಎಸ್‌ಓ ಮಹಾನಿರ್ದೇಶಕ ಕೃಷ್ಣಮೂರ್ತಿ ಮಯ್ಯಾ ತಿಳಿಸಿದರು.
Vijaya Karnataka Web water cleanliness and housing survey in july
ಜುಲೈನಲ್ಲಿ ನೀರು, ಸ್ವಚ್ಛತೆ, ವಸತಿ ಸರ್ವೆ


ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ನಡೆದ ಎನ್‌ಎಸ್‌ಎಸ್‌ಒ ಪ್ರಾದೇಶಿಕ ಅಧಿಕಾರಿಗಳ ನಾಲ್ಕು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಎಸ್‌ಎಸ್‌ಓ ನಡೆಸುತ್ತಿರುವ 76ನೇ ಈ ಸರ್ವೆಯಲ್ಲಿ ವಿಶೇಷವಾಗಿ ವಿಶೇಷಚೇತನರ ಬಗ್ಗೆಯೂ ಸರ್ವೆ ಮಾಡಲಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಮನೆ ಮನೆಗೆ ತೆರಳಿ ವಿಶೇಷಚೇತನರು ಮತ್ತು ಮಾನಸಿಕ ಅಸ್ವಸ್ಥರನ್ನು ವಿಶ್ವಾಸಕ್ಕೆ ಪಡೆದು ಅವರಲ್ಲಿ ಜಾಗೃತಿ ಮೂಡಿಸಿ ಸೂಕ್ತ ಮಾಹಿತಿ ಕಲೆ ಹಾಕಬೇಕು ಎಂದರು.

ಎನ್‌ಎಸ್‌ಎಸ್‌ಓ ಜಂಟಿ ನಿರ್ದೇಶಕ ಎನ್‌. ಸುಶೀಂದ್ರಬಾಬು ಮಾತನಾಡಿ, ಎನ್‌ಎಸ್‌ಎಸ್‌ಒ ಅಧಿಕಾರಿಗಳು ಮಾಡುವ ಸರ್ವೆ ಆಧರಿಸಿ ಸರಕಾರದ ವಸತಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ನೀತಿ ಆಯೋಗ ಯೋಜನೆಗಳನ್ನು ರೂಪಿಸುತ್ತವೆ. ಆದ್ದರಿಂದ ಅಧಿಕಾರಿಗಳ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಅಧಿಕಾರಿ ಪ್ರಮೋದ ಪಂಡಿತ್‌ ಮಾತನಾಡಿ, ಎನ್‌ಎಸ್‌ಎಸ್‌ಓ ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 15 ಜಿಲ್ಲೆಗಳು ಬರುತ್ತವೆ. ಒಟ್ಟು 90 ಸಿಬ್ಬಂದಿ ಜುಲೈ 1 ರಿಂದ 6 ತಿಂಗಳಗಳ ಕಾಲ ಸರ್ವೆ ನಡೆಸುತ್ತಿದ್ದು, ಜನರು ಸಹಕಾರ ನೀಡಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಎ.ವಿ. ಕಾಖಡಂಕಿ, ಸುಗಂಧ ಶ್ರೀವತ್ಸವ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ