ಆ್ಯಪ್ನಗರ

ಅಂಗಡಿಯೊಳಗೆ ಉಕ್ಕಿದ ನೀರು: ಮಾಲೀಕರ ಆತಂಕ

ಧಾರವಾಡ : ಪ್ರತಿ ಮಳೆಗಾಲದಲ್ಲೂ ಸೂಪರ್‌ ಮಾರುಕಟ್ಟೆ ವ್ಯಾಪಾರಸ್ಥರು, ಗ್ರಾಹಕರನ್ನು ಸಮಸ್ಯೆಗೆ ದೂಡುವ ಅಲ್ಲಿನ ಅವ್ಯವಸ್ಥೆ ಬಗೆಬಗೆಯಾಗಿ ಜೀವ ಹಿಂಡುತ್ತಿದೆ. ಮಾತ್ರವಲ್ಲ ಇದೀಗ ಅಲ್ಲಿನ ಕೆಲ ಅಂಗಡಿಗಳಲ್ಲಿ ಅಂತರ್ಜಲ ಉಕ್ಕಲಾರಂಭಿಸಿದೆ .

Vijaya Karnataka 4 Aug 2019, 5:00 am
ಧಾರವಾಡ : ಪ್ರತಿ ಮಳೆಗಾಲದಲ್ಲೂ ಸೂಪರ್‌ ಮಾರುಕಟ್ಟೆ ವ್ಯಾಪಾರಸ್ಥರು, ಗ್ರಾಹಕರನ್ನು ಸಮಸ್ಯೆಗೆ ದೂಡುವ ಅಲ್ಲಿನ ಅವ್ಯವಸ್ಥೆ ಬಗೆಬಗೆಯಾಗಿ ಜೀವ ಹಿಂಡುತ್ತಿದೆ. ಮಾತ್ರವಲ್ಲ ಇದೀಗ ಅಲ್ಲಿನ ಕೆಲ ಅಂಗಡಿಗಳಲ್ಲಿ ಅಂತರ್ಜಲ ಉಕ್ಕಲಾರಂಭಿಸಿದೆ .
Vijaya Karnataka Web DRW-3NIJAGUNI8
ಧಾರವಾಡ ಸೂಪರ್‌ ಮಾರುಕಟ್ಟೆಯ ಶಾಂತಿನಾಥ ಮೆಟಲ್ಸ್‌ ಅಂಗಡಿಯೊಳಗೆ ಉಕ್ಕಿದ ನೀರನ್ನು ಹೊರತೆಗೆಯುತ್ತಿರುವ ಮಾಲೀಕರು ಹಾಗೂ ಕಾರ್ಮಿಕರು.


ಬೃಹತ್‌ ಕೆರೆ ಪ್ರದೇಶದಲ್ಲಿಯೇ ನಿರ್ಮಾಣಗೊಂಡಿರುವ ಧಾರವಾಡ ಸೂಪರ್‌ ಮಾರುಕಟ್ಟೆ ಅತ್ಯಂತ ತಗ್ಗು ಪ್ರದೇಶದಲ್ಲಿದೆ. ಹೀಗಾಗಿ ಮಳೆಗಾಲದಲ್ಲಿ ಅಲ್ಲಿ ನೀರು ಜಿನುಗುತ್ತಲೇ ಇದ್ದು, ಪ್ರತಿ ವರ್ಷ ನಾನಾ ಅಂಗಡಿಗಳ ಒಳಗಡೆಯೇ ಅಂತರ್ಜಲ ಉಕ್ಕುತ್ತಲೇ ಇದೆ. ಇದೀಗ ಶಾಂತಿನಾಥ ಮೆಟಲ್ಸ್‌ ಅಂಗಡಿಯೊಳಗೆ ಗಂಗೆ ಉದ್ಭವವಾಗಿದ್ದು, ಕ್ರಮೇಣ ಸುತ್ತಲಿನ ಅಂಗಡಿಗಳಲ್ಲೂ ಇದು ಕಾಣುವ ಆತಂಕ ಎದುರಾಗಿದೆ.

ಕಳೆದವರ್ಷ ಶಾಂತಿನಾಥ ಮೆಟಲ್ಸ್‌, ಸಿ.ಎಚ್‌. ರಾಠೋಡ್‌ ಎಂಬುವವರ ಮಾಲೀಕತ್ವದ ಅಂಗಡಿಗಳಲ್ಲಿ ಕಾಣಿಸಿದ ಅಂತರ್ಜಲ ಈ ಬಾರಿ ಮತ್ತೆ ಪುನರಾವರ್ತನೆಗೊಂಡಿದೆ. ಮೂರು ದಿನಗಳಿಂದ ಅಂಗಡಿಯೊಳಗಡೆ ನೀರು ನಿಲ್ಲುತ್ತಿದ್ದು, ಅಂಗಡಿ ಮಾಲೀಕರು ನಷ್ಟದ ಭೀತಿ ಎದುರಿಸುತ್ತಿದ್ದಾರೆ.

ಕಳೆದೊಂದು ವಾರದಿಂದ ಮಳೆ ಪ್ರಮಾಣ ಹೆಚ್ಚಿದ್ದರಿಂದ ನೀರಿನ ಹರಿವು ಹೆಚ್ಚಿದಂತೆ ಸೂಪರ್‌ ಮಾರ್ಕೆಟ್‌ನಲ್ಲೂ ಅದೇ ರೀತಿ ಆಗಿದೆ. ಈಗ ಅಂಗಡಿ ಮಾಲೀಕರು ನಿಂತ ನೀರು ಹೊರ ಹಾಕಲು ಪರದಾಡುತ್ತಿದ್ದಾರೆ. ಒಬ್ಬ ಹುಡುಗನನ್ನು ಅದಕ್ಕಾಗಿಯೇ ನಿಯೋಜಿಸುವ ಅನಿವಾರ್ಯತೆ ಎದುರಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುಪರ್‌ ಮಾರ್ಕೆಟ್‌ ವ್ಯಾಪಾರಸ್ಥ ಉದಯ ಯಂಡಿಗೇರಿ '' ಪ್ರತಿ ವರ್ಷ ಮಾರುಕಟ್ಟೆಯಲ್ಲಿನ ಅಂಗಡಿಗಳೊಳಗೆ ನೀರು ಉಕ್ಕುತ್ತಿದೆ. ಇದು ಎಲ್ಲಿ ಅಪಾಯ ಸೃಷಿಸುವುದೋ ಎಂಬ ಆತಂಕವನ್ನೂ ಹುಟ್ಟಿಸಿದೆ ''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ