ಆ್ಯಪ್ನಗರ

ಕುಂದಗೋಳ ಉಪಚುನಾವಣೆ ಹೊಣೆ ಡಿಕೆಶಿಗೆ ಏಕೆ: ಶೆಟ್ಟರ್‌ ಗೇಲಿ

ಹುಬ್ಬಳ್ಳಿ : ಕುಂದಗೋಳ ಉಪಚುನಾವಣೆಗೆ ಕಾಂಗ್ರೆಸ್‌ ಹೈಕಮಾಂಡ್‌ ಡಿ.ಕೆ. ಶಿವಕುಮಾರ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದೆ. ಉತ್ತರ ಕರ್ನಾಟಕದಲ್ಲಿ ನಾಯಕರೇ ಇಲ್ಲವೆ? ಕನಕಪುರದವರು ಇಲ್ಲಿ ಉಸ್ತುವಾರಿ ವಹಿಸಿಕೊಳ್ಳಬೇಕೆ? ಕಾಂಗ್ರೆಸ್‌ನ ಪರಿಸ್ಥಿತಿ ನೋಡಿದರೆ ಕನಿಕರ ಬರುತ್ತದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಲೇವಡಿ ಮಾಡಿದ್ದಾರೆ.

Vijaya Karnataka 29 Apr 2019, 5:00 am
ಹುಬ್ಬಳ್ಳಿ : ಕುಂದಗೋಳ ಉಪಚುನಾವಣೆಗೆ ಕಾಂಗ್ರೆಸ್‌ ಹೈಕಮಾಂಡ್‌ ಡಿ.ಕೆ. ಶಿವಕುಮಾರ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದೆ. ಉತ್ತರ ಕರ್ನಾಟಕದಲ್ಲಿ ನಾಯಕರೇ ಇಲ್ಲವೆ? ಕನಕಪುರದವರು ಇಲ್ಲಿ ಉಸ್ತುವಾರಿ ವಹಿಸಿಕೊಳ್ಳಬೇಕೆ? ಕಾಂಗ್ರೆಸ್‌ನ ಪರಿಸ್ಥಿತಿ ನೋಡಿದರೆ ಕನಿಕರ ಬರುತ್ತದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಲೇವಡಿ ಮಾಡಿದ್ದಾರೆ.
Vijaya Karnataka Web why dk shivukumar is responsible for the undertakers election shettar joked
ಕುಂದಗೋಳ ಉಪಚುನಾವಣೆ ಹೊಣೆ ಡಿಕೆಶಿಗೆ ಏಕೆ: ಶೆಟ್ಟರ್‌ ಗೇಲಿ


ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಅವರನ್ನು ಕಾಂಗ್ರೆಸ್‌ನಲ್ಲಿ ಟ್ರಬಲ್‌ ಶೂಟರ್‌ ಎನ್ನುತ್ತಾರೆ. ಆದರೆ ಮೇ 23ರ ನಂತರ ಅವರು ಟ್ರಬಲ್ಸ್‌ ಮ್ಯಾನ್‌ ಆಗಲಿದ್ದಾರೆ ಎಂದು ಗೇಲಿ ಮಾಡಿದರು.

ಕುಂದಗೋಳ ಕ್ಷೇತ್ರಕ್ಕೆ ಡಿ.ಕೆ. ಶಿವಕುಮಾರ ಅವರಲ್ಲ. ಅವರಂಥ ನೂರು ಜನ ಬಂದರೂ ಬಿಜೆಪಿಗೇನೂ ಸಮಸ್ಯೆಯಿಲ್ಲ. ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆಸಿ-ಪಾಟೀಲ ಸ್ಪಷ್ಟೀಕರಣ ನೀಡಲಿ:

ಲಿಂಗಾಯತದ ಧರ್ಮದ ವಿಷಯವಾಗಿ ಪರಸ್ಪರ ಕಚ್ಚಾಡಿಕೊಂಡಿದ್ದ ಸಚಿವರಾದ ಡಿ.ಕೆ. ಶಿವಕುಮಾರ ಹಾಗೂ ಎಂ.ಬಿ.ಪಾಟೀಲ ಇಬ್ಬರು ಕುಂದಗೋಳ ಕ್ಷೇತ್ರದಲ್ಲಿ ಠಿಕಾಣಿ ಹೂಡಲಿದ್ದಾರೆ. ಹೀಗಾಗಿ ಕುಂದಗೋಳ ಉಪಚುನಾವಣೆ ರಂಗೇರಲಿದೆ. ಇಬ್ಬರು ಸೇರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಲಿಂಗಾಯತ ಧರ್ಮದ ವಿಷಯವಾಗಿ ಉಂಟು ಮಾಡಿರುವ ಗೊಂದಲಕ್ಕೆ ಸಂಬಂಧಪಟ್ಟಂತೆ ಸ್ಪಷ್ಟಿಕರಣ ನೀಡಲಿ ಎಂದು ಶೆಟ್ಟರ್‌ ಆಗ್ರಹಿಸಿದರು.

ಶಾಸಕ ಸ್ಥಾನಕ್ಕೆ ಉಮೇಶ ಜಾಧವ ರಾಜೀನಾಮೆ ನೀಡಿ ಲೋಕಸಭೆಗೆ ಸ್ಪರ್ಧಿಸಿದ್ದರು. ಅವರು ಹೇಳಿದ ವ್ಯಕ್ತಿಗೆ ಟಿಕೆಟ್‌ ನೀಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಅದರಂತೆ ಚಿಂಚೋಳಿ ಕ್ಷೇತ್ರಕ್ಕೆ ಅವರ ಪುತ್ರನಿಗೆ ಟಿಕೆಟ್‌ ನೀಡಿಲಾಗಿದೆ. ಇದರಿಂದ ಅಲ್ಲಿನ ಮುಖಂಡ ಸುನಿಲ್‌ ವಲ್ಯಾಪುರೆ ಅವರಲ್ಲಿ ಕೊಂಚ ಅಸಮಾಧಾನ ಉಂಟಾಗಿದೆ. ಅದೆಲ್ಲವನ್ನು ಪಕ್ಷದ ಮುಖಂಡರು ಬಗೆಹರಿಸುತ್ತಾರೆ. ಚಿಂಚೋಳಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ