ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು, ಶ್ರೀಮತಿ ಗೌರಮ್ಮ ಚೆನ್ನಪ್ಪ ಹಲಗತ್ತಿ ದತ್ತಿ ಅಂಗವಾಗಿ ಮಾ. 8 ರಂದು ಸಂಜೆ 6ಕ್ಕೆ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಿದೆ.
ಅಧ್ಯಕ್ಷ ತೆಯನ್ನು ಡಾ. ಸಿದ್ಧನಗೌಡ ಪಾಟೀಲ ವಹಿಸುವರು. ಶ್ರಮಿಕ ಮಹಿಳೆ ದತ್ತಿ ಪ್ರಶಸ್ತಿಯನ್ನು ಚಿಂತಕರಾದ ಬರೋಡಾದ ಪ್ರೊ. ಸುರೇಖಾ ಜಿ. ದೇವಿ ಅವರು ಪೌರ ಕಾರ್ಮಿಕರಾದ ಬಸಮ್ಮ ಚುರಮರಿ ಅವರಿಗೆ ಪ್ರದಾನ ಮಾಡುವರು.
ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹನುಮಾಕ್ಷಿ ಗೋಗಿ ಆಗಮಿಸುವರು.ನಂತರ ಚಿಲಿಪಿಲಿ ಸಂಗೀತ ಕಲಾ ಸಂಸ್ಕೃತಿ ಅಕಾಡೆಮಿ ಮಕ್ಕಳಿಂದ ಹಾಡುಗಳು ಹಾಗೂ ಶಂಭಯ್ಯ ಹಿರೇಮಠ, ವಿರೇಶ ಬಡಿಗೇರ, ಬಸವರಾಜ ಶಿಗ್ಗಾಂವ, ಚಂದ್ರಶೇಖರ ಕಾಳೆ, ಶಂಕರಣ್ಣ ಕೊತಬಾಳ ಇವರು ಮಹಿಳಾ ಹೋರಾಟದ ಹಾಡುಗಳನ್ನು ಪ್ರಸ್ತುತಪಡಿಸುವರು .