ಪ್ರಥಮ ಬಾರಿಗೆ ಯಕ್ಷಗಾನ ಚಂಡೆನಾದಕ್ಕೆ ಮಹಿಳೆಯರ ಹೆಜ್ಜೆ..!
ಹುಬ್ಬಳ್ಳಿ : ಯಕ್ಷಗಾನ ಹೆಸರು ಕೇಳಿದರೆ ಅದೇನೋ ರೋಮಾಂಚನ... ಗಂಟಲು ಉಬ್ಬಿಸಿಕೊಂಡು ಉಸಿರು ಹೊರ ಹಾಕಿ ಏರಿಸಿ ಹಾಡುವ ಗಡಸು ಧ್ವನಿ ಕಿವಿಯಲ್ಲಿಮೊಳಗುವುದು...ಚಂಡೆ, ಮದ್ದಳೆಯ ಸದ್ದು ಹುಚ್ಚೆದ್ದು ಕುಣಿಯುಲು ಪ್ರೇರೆಪಣೆ...ಗಂಡು ಕಲೆಯಂದೇ ಪ್ರಸಿದ್ಧಿ ಪಡೆದ ಯಕ್ಷಗಾನ ಒಂದು ಸುಂದರ, ಅಭೂತ ಪೂರ್ವ ಕಲೆ.. ಇದು ಕೇವಲ ಪುರಷರಿಗಷ್ಟೇ ಸೀಮಿತವಾಗಿಲ್ಲ. ಮಹಿಳೆಯರು ಸಹ ಯಕ್ಷಗಾನ ಪಾತ್ರದಾರಿಗಳಾಗಿ ಸೈ ಎನಿಸಿಕೊಳ್ಳಲು ಸಜ್ಜಾಗಿದ್ದಾರೆ.
Vijaya Karnataka 24 Jan 2020, 5:00 am
ಹುಬ್ಬಳ್ಳಿ : ಯಕ್ಷಗಾನ ಹೆಸರು ಕೇಳಿದರೆ ಅದೇನೋ ರೋಮಾಂಚನ... ಗಂಟಲು ಉಬ್ಬಿಸಿಕೊಂಡು ಉಸಿರು ಹೊರ ಹಾಕಿ ಏರಿಸಿ ಹಾಡುವ ಗಡಸು ಧ್ವನಿ ಕಿವಿಯಲ್ಲಿಮೊಳಗುವುದು...ಚಂಡೆ, ಮದ್ದಳೆಯ ಸದ್ದು ಹುಚ್ಚೆದ್ದು ಕುಣಿಯುಲು ಪ್ರೇರೆಪಣೆ...ಗಂಡು ಕಲೆಯಂದೇ ಪ್ರಸಿದ್ಧಿ ಪಡೆದ ಯಕ್ಷಗಾನ ಒಂದು ಸುಂದರ, ಅಭೂತ ಪೂರ್ವ ಕಲೆ.. ಇದು ಕೇವಲ ಪುರಷರಿಗಷ್ಟೇ ಸೀಮಿತವಾಗಿಲ್ಲ. ಮಹಿಳೆಯರು ಸಹ ಯಕ್ಷಗಾನ ಪಾತ್ರದಾರಿಗಳಾಗಿ ಸೈ ಎನಿಸಿಕೊಳ್ಳಲು ಸಜ್ಜಾಗಿದ್ದಾರೆ.
ಹುಬ್ಬಳ್ಳಿಯಲ್ಲಿಜ.25ರಂದು ಮಹಿಳೆಯರೇ ಪಾತ್ರದಾರಿಗಳಾದ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದೆ. ಇಲ್ಲಿನ ದೇಶಪಾಂಡೆನಗರದ ಕಾಮಾಕ್ಷಿ ಮಹಿಳಾ ಮಂಡಳದ ಸದಸ್ಯರು ಇಂತಹ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಮಂಡಳದ ರಜತಮಹೋತ್ಸವದ ಅಂಗವಾಗಿ ಯಾವುದಾದರೂ ಒಂದು ಹೊಸ ಕಲೆ ಕಲಿತು ಈ ಭಾಗದ ಜನರಿಗೆ ಉಣಬಡಿಸಬೇಕೆಂಬ ಉದ್ದೇಶದಿಂದ 'ಧಮಾಂರ್ಗದ ದಿಗ್ವಿಜಯ' ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.
ಮೊದಲ ಬಾರಿಗೆ ಯಕ್ಷಗಾನ : ಪ್ರತಿ ವರ್ಷ ಮಂಡಳದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿಜನಪದ, ಸಂಗೀತ, ನೃತ್ಯ ಸೇರಿದಂತೆ ಉತ್ತರ ಕರ್ನಾಟಕದ ಕಲೆಗಳಿಗೆ ಆದ್ಯತೆ ನೀಡುತ್ತಿದ್ದರು. ಆದರೆ, ಈ ಬಾರಿ ಪ್ರಥಮ ಬಾರಿಗೆ ಯಕ್ಷಗಾನ ಪ್ರದರ್ಶನಕ್ಕೆ ನಿರ್ಧರಿಸಿ ಆರು ತಿಂಗಳಿಂದ ನಿತ್ಯ ಯಕ್ಷಗಾನ ಕಲಿತಿದಿದ್ದಾರೆ. ಯಕ್ಷಗಾನ ವೇಷದಲ್ಲಿಚಂಡೆನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಮಹಿಳೆಯರು ಸಜ್ಜಾಗಿದ್ದಾರೆ. ಹಿಮ್ಮೇಳದಲ್ಲಿಮಾತ್ರ ಪುರುಷರಿದ್ದು, ಮುಮ್ಮೇಳದಲ್ಲಿ40 ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಧರ್ಮಾಂಗದ ದಿಗ್ವಿಜಯ.. : ಸೂರ್ಯವಂಶದ ಚಕ್ರವರ್ತಿ ರುಕ್ಮಾಂಗದ ರಾಜನ ಪುತ್ರ ಧರ್ಮಾಂಗದ ದಿಗ್ವಿಜಯಕ್ಕಾಗಿ ಭರತ ಮತ್ತು ಬಲಿ ಚಕ್ರವರ್ತಿಗಳೊಂದಿಗೆ ಯುದ್ದ ಕೈಗೊಳ್ಳುವುದೇ ಈ ಯಕ್ಷಗಾನದ ಕಥೆಯಾಗಿದೆ. ಧರ್ಮಾಂಗದ, ರುಕ್ಮಾಂಗದ ಪಾತ್ರವನ್ನು ಮಹಿಳೆಯರು ಅಭಿನಯಿಸುವ ಮೂಲಕ ಮೆರಗು ತರಲು ಸಜ್ಜಾಗಿದ್ದಾರೆ.
9 ಮಹಿಳೆಯರ ತಂಡ.. : ಯಕ್ಷಗಾನದಲ್ಲಿಧ್ವನಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಇಲ್ಲಿಮಹಿಳೆಯರ ಯಕ್ಷಗಾನ ಪ್ರದರ್ಶನ ನೀಡಬೇಕಿದ್ದರಿಂದ ಧ್ವನಿಯದ್ದೇ ಸಮಸ್ಯೆಯಾಗಿತ್ತು. ಯಕ್ಷಗಾನ ನೋಡಿದ್ದ ಈ ಮಹಿಳೆಯರಿಗೆ ಯಾವ ರೀತಿ ಧ್ವನಿಯಲ್ಲಿಏರಿಳಿತ ಇರಬೇಕು ಎಂಬ ಗೊಂದಲವಿತ್ತು. ಧಾರವಾಡದ ಮಂಜುನಾಥ ಹೆಗಡೆ ನಿತ್ಯ ನಾಲ್ಕು ಗಂಟೆ ಯಕ್ಷಗಾನ ತರಬೇತಿ ಕಲಿಸುತ್ತಿದ್ದಾರೆ. ಇದೀಗ ಮಹಿಳೆಯರ ಧ್ವನಿ ಯಕ್ಷಗಾನಕ್ಕೆ ಹೊಂದಿಕೊಂಡಿದೆ. ಅಂತಿಮ ತಾಲೀಮು ಮುಗಿಸಿದ ಮಂಡಳದ 9 ಸದಸ್ಯೆಯರು ಸೇರಿ 'ಧರ್ಮಾಂಗದ ದಿಗ್ವಿಜಯ' ಕಥೆಯಲ್ಲಿವಿಜಯ ಸಾಧಿಸಲು ಮುಂದಾಗಿದ್ದಾರೆ.
ಪಾತ್ರಗಳ : ಹಿಮ್ಮೇಳನದಲ್ಲಿಮಂಜುನಾಥ ಹೆಗಡೆ ಭಾಗವತರು, ಮದ್ದಳೆ ಶ್ರೀಪಾದ ಭಟ್ ಮೂಡಗಾರ, ಚಂಡೆ ನಾರಾಯಣ ಕೊಮಾರ ಯಲ್ಲಾಪುರ, ನಿರ್ದೇಶನ ಪ್ರವೀಣ ಹೆಗಡೆ ತಟ್ಟಿಸರ, ವೇಷಭೂಷನ ಉಮೇಶ ಹೆಗಡೆ ಮತ್ತು ಸಂಗಡಿಗರು ಇದ್ದಾರೆ.
ಮುಮ್ಮೇಳದಲ್ಲಿಪದ್ಮಾವತಿ ಬಾಗಲಕೋಟ (ಬಲಿಚಕ್ರವರ್ತಿ),ಅಪರ್ಣಾ ಹೆಬಸೂರ (ಭರತ), ಪ್ರತಿಮಾ ರಾವ್ (ಧರ್ಮಾಂಗದ ಮೂರನೇ ಪಾತ್ರ, ಕವಿತಾ ಸಾವಳಗಿ (ಧರ್ಮಾಂಗದ ಒಂದೇ ಪಾತ್ರ ಮತ್ತು ನಾರದ), ಸರಸ್ವತಿ ದೊಡ್ಡಮನಿ (ಚಾರಕ), ಗೀತಾ ಕಲಬುರಗಿ (ಕಂಬಾಳಸೂರ), ವಾಣಿತಿಳಿವಳ್ಳಿ(ರುಕ್ಮಾಂಗದ ರಾಜ), ಶ್ವೇತಾಲಿ ಸವಣೂರ (ಧರ್ಮಾಂಗದ ಎರಡನೇ ಪಾತ್ರ ಮತ್ತು ವಿಷ್ಣು), ಆಶಾ ನಾಯಕ ಮಂತ್ರಿ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿಜ.25ರಂದು ಮಹಿಳೆಯರೇ ಪಾತ್ರದಾರಿಗಳಾದ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದೆ. ಇಲ್ಲಿನ ದೇಶಪಾಂಡೆನಗರದ ಕಾಮಾಕ್ಷಿ ಮಹಿಳಾ ಮಂಡಳದ ಸದಸ್ಯರು ಇಂತಹ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಮಂಡಳದ ರಜತಮಹೋತ್ಸವದ ಅಂಗವಾಗಿ ಯಾವುದಾದರೂ ಒಂದು ಹೊಸ ಕಲೆ ಕಲಿತು ಈ ಭಾಗದ ಜನರಿಗೆ ಉಣಬಡಿಸಬೇಕೆಂಬ ಉದ್ದೇಶದಿಂದ 'ಧಮಾಂರ್ಗದ ದಿಗ್ವಿಜಯ' ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.
ಮೊದಲ ಬಾರಿಗೆ ಯಕ್ಷಗಾನ : ಪ್ರತಿ ವರ್ಷ ಮಂಡಳದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿಜನಪದ, ಸಂಗೀತ, ನೃತ್ಯ ಸೇರಿದಂತೆ ಉತ್ತರ ಕರ್ನಾಟಕದ ಕಲೆಗಳಿಗೆ ಆದ್ಯತೆ ನೀಡುತ್ತಿದ್ದರು. ಆದರೆ, ಈ ಬಾರಿ ಪ್ರಥಮ ಬಾರಿಗೆ ಯಕ್ಷಗಾನ ಪ್ರದರ್ಶನಕ್ಕೆ ನಿರ್ಧರಿಸಿ ಆರು ತಿಂಗಳಿಂದ ನಿತ್ಯ ಯಕ್ಷಗಾನ ಕಲಿತಿದಿದ್ದಾರೆ. ಯಕ್ಷಗಾನ ವೇಷದಲ್ಲಿಚಂಡೆನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಮಹಿಳೆಯರು ಸಜ್ಜಾಗಿದ್ದಾರೆ. ಹಿಮ್ಮೇಳದಲ್ಲಿಮಾತ್ರ ಪುರುಷರಿದ್ದು, ಮುಮ್ಮೇಳದಲ್ಲಿ40 ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಧರ್ಮಾಂಗದ ದಿಗ್ವಿಜಯ.. : ಸೂರ್ಯವಂಶದ ಚಕ್ರವರ್ತಿ ರುಕ್ಮಾಂಗದ ರಾಜನ ಪುತ್ರ ಧರ್ಮಾಂಗದ ದಿಗ್ವಿಜಯಕ್ಕಾಗಿ ಭರತ ಮತ್ತು ಬಲಿ ಚಕ್ರವರ್ತಿಗಳೊಂದಿಗೆ ಯುದ್ದ ಕೈಗೊಳ್ಳುವುದೇ ಈ ಯಕ್ಷಗಾನದ ಕಥೆಯಾಗಿದೆ. ಧರ್ಮಾಂಗದ, ರುಕ್ಮಾಂಗದ ಪಾತ್ರವನ್ನು ಮಹಿಳೆಯರು ಅಭಿನಯಿಸುವ ಮೂಲಕ ಮೆರಗು ತರಲು ಸಜ್ಜಾಗಿದ್ದಾರೆ.
9 ಮಹಿಳೆಯರ ತಂಡ.. : ಯಕ್ಷಗಾನದಲ್ಲಿಧ್ವನಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಇಲ್ಲಿಮಹಿಳೆಯರ ಯಕ್ಷಗಾನ ಪ್ರದರ್ಶನ ನೀಡಬೇಕಿದ್ದರಿಂದ ಧ್ವನಿಯದ್ದೇ ಸಮಸ್ಯೆಯಾಗಿತ್ತು. ಯಕ್ಷಗಾನ ನೋಡಿದ್ದ ಈ ಮಹಿಳೆಯರಿಗೆ ಯಾವ ರೀತಿ ಧ್ವನಿಯಲ್ಲಿಏರಿಳಿತ ಇರಬೇಕು ಎಂಬ ಗೊಂದಲವಿತ್ತು. ಧಾರವಾಡದ ಮಂಜುನಾಥ ಹೆಗಡೆ ನಿತ್ಯ ನಾಲ್ಕು ಗಂಟೆ ಯಕ್ಷಗಾನ ತರಬೇತಿ ಕಲಿಸುತ್ತಿದ್ದಾರೆ. ಇದೀಗ ಮಹಿಳೆಯರ ಧ್ವನಿ ಯಕ್ಷಗಾನಕ್ಕೆ ಹೊಂದಿಕೊಂಡಿದೆ. ಅಂತಿಮ ತಾಲೀಮು ಮುಗಿಸಿದ ಮಂಡಳದ 9 ಸದಸ್ಯೆಯರು ಸೇರಿ 'ಧರ್ಮಾಂಗದ ದಿಗ್ವಿಜಯ' ಕಥೆಯಲ್ಲಿವಿಜಯ ಸಾಧಿಸಲು ಮುಂದಾಗಿದ್ದಾರೆ.
ಪಾತ್ರಗಳ : ಹಿಮ್ಮೇಳನದಲ್ಲಿಮಂಜುನಾಥ ಹೆಗಡೆ ಭಾಗವತರು, ಮದ್ದಳೆ ಶ್ರೀಪಾದ ಭಟ್ ಮೂಡಗಾರ, ಚಂಡೆ ನಾರಾಯಣ ಕೊಮಾರ ಯಲ್ಲಾಪುರ, ನಿರ್ದೇಶನ ಪ್ರವೀಣ ಹೆಗಡೆ ತಟ್ಟಿಸರ, ವೇಷಭೂಷನ ಉಮೇಶ ಹೆಗಡೆ ಮತ್ತು ಸಂಗಡಿಗರು ಇದ್ದಾರೆ.
ಮುಮ್ಮೇಳದಲ್ಲಿಪದ್ಮಾವತಿ ಬಾಗಲಕೋಟ (ಬಲಿಚಕ್ರವರ್ತಿ),ಅಪರ್ಣಾ ಹೆಬಸೂರ (ಭರತ), ಪ್ರತಿಮಾ ರಾವ್ (ಧರ್ಮಾಂಗದ ಮೂರನೇ ಪಾತ್ರ, ಕವಿತಾ ಸಾವಳಗಿ (ಧರ್ಮಾಂಗದ ಒಂದೇ ಪಾತ್ರ ಮತ್ತು ನಾರದ), ಸರಸ್ವತಿ ದೊಡ್ಡಮನಿ (ಚಾರಕ), ಗೀತಾ ಕಲಬುರಗಿ (ಕಂಬಾಳಸೂರ), ವಾಣಿತಿಳಿವಳ್ಳಿ(ರುಕ್ಮಾಂಗದ ರಾಜ), ಶ್ವೇತಾಲಿ ಸವಣೂರ (ಧರ್ಮಾಂಗದ ಎರಡನೇ ಪಾತ್ರ ಮತ್ತು ವಿಷ್ಣು), ಆಶಾ ನಾಯಕ ಮಂತ್ರಿ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ.