ಆ್ಯಪ್ನಗರ

ವಿಶ್ವ ತಂಬಾಕು ಸೇವನಾ ರಹಿತ ದಿನ ಆಚರಣೆ

ಧಾರವಾಡ : ನಗರದ ಡಾ.ಮಹಾಂತಸ್ವಾಮಿ ಹಿರೇಮಠ ಆಯುರ್ಧಾಮದಲ್ಲಿ ವಿಶ್ವ ತಂಬಾಕು ಸೇವನಾ ರಹಿತ ದಿನವನ್ನು ಶುಕ್ರವಾರ ಆಚರಿಸಲಾಯಿತು. ಬಳಿಕ ಮಾತನಾಡಿದ ಡಾ.ಮಹಾಂತಸ್ವಾಮಿ ಹಿರೇಮಠ ಅವರು, ತಂಬಾಕು ಸೇವನೆ ಮಾಡುವುದರಿಂದ ಮೆದುಳು ಹಾಗೂ ಮಾನವನ ಶರೀರವನ್ನ ಹಾಳುಮಾಡುವ

Vijaya Karnataka 1 Jun 2019, 5:00 am
ಧಾರವಾಡ : ನಗರದ ಡಾ.ಮಹಾಂತಸ್ವಾಮಿ ಹಿರೇಮಠ ಆಯುರ್ಧಾಮದಲ್ಲಿ ವಿಶ್ವ ತಂಬಾಕು ಸೇವನಾ ರಹಿತ ದಿನವನ್ನು ಶುಕ್ರವಾರ ಆಚರಿಸಲಾಯಿತು.
Vijaya Karnataka Web DRW-31MAILAR02
ಧಾರವಾಡದ ಡಾ.ಮಹಾಂತಸ್ವಾಮಿ ಹಿರೇಮಠ ಅವರ ಆಯುರ್ಧಾಮದಲ್ಲಿ ವಿಶ್ವ ತಂಬಾಕು ಸೇವನಾ ರಹಿತ ದಿನ ಆಚರಿಸಲಾಯಿತು.

ಬಳಿಕ ಮಾತನಾಡಿದ ಡಾ.ಮಹಾಂತಸ್ವಾಮಿ ಹಿರೇಮಠ ಅವರು, ತಂಬಾಕು ಸೇವನೆ ಮಾಡುವುದರಿಂದ ಮೆದುಳು ಹಾಗೂ ಮಾನವನ ಶರೀರವನ್ನ ಹಾಳುಮಾಡುವ 600ಕ್ಕಿಂತ ಹೆಚ್ಚಿನ ರಸಾಯನಿಕಗಳಿವೆ. ಅಲ್ಲದೆ ತಂಬಾಕಿನಲ್ಲಿ ಕ್ಯಾನ್ಸರಕಾರಕ, ನರದೌರ್ಭಲ್ಯ ತರುವ ವಿಷಕಾರಕ ವಸ್ತುಗಳಿವೆ. ಜತೆಗೆ ಗುಟಕಾದಲ್ಲಿ ಹಾನಿಕಾರಕ ಕಾರ್ಬನ್‌ಮೋನಾಕ್ಸೈಡ್‌ನಂತಹ ರಸಾಯನಿಕಗಳು ಇರುವುದರಿಂದ ಯುವಕರು ತಂಬಾಕು ಪದಾರ್ಥಗಳಾದ ಗುಟಕಾ, ಸಿಗರೇಟ್‌ ಸೇವನೆಯಿಂದ ದೂರವಿರಬೇಕು ಎಂದರು.

ಇದೇ ವೇಳೆ 18 ಜನರಿಗೆ ತಂಬಾಕು ಬಿಡಲು ಉಚಿತ ಔಷಧ ವಿತರಿಸಿದರು. 30 ಜನ ಬಾಯಿ ನೋವು ಹಾಗೂ ನರದೌರ್ಭಲ್ಯ ಹೊಂದಿರುವ ರೋಗಿಗಳಿಗೆ ಉಚಿತ ತಪಾಸಣೆ ಮಾಡಲಾಯಿತು. ವೀರಣ್ಣ ವಂದಗನೂರ, ರಾಚಯ್ಯ, ನವೀನ, ಮಂಜುನಾಥ, ನೀಲಲೋಚನಾ ಹಿರೇಮಠ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ