ಆ್ಯಪ್ನಗರ

ಪುರಂದರ ದಾಸರ ಆರಾಧಾನಾ ಮಹೋತ್ಸವ

ಧಾರವಾಡ: ನಗರದ ದೇಸಾಯಿಗಲ್ಲಿವಿಠ್ಠಲಮಂದಿರದ ಪುರಂದರ ದಾಸರ ಆರಾಧಾನಾ ಮಹೋತ್ಸವದ ಅಂಗವಾಗಿ ಮಧ್ಯಾರಾಧನೆ ದಿವಸ ಲಕ್ಷಿತ್ರ್ಮೕ ವೆಂಕಟೇಶ ಭಜನಾ ಮಂಡಳಿಯ ನೇತೃತ್ವದಲ್ಲಿವಿಠ್ಠಲ ಮಂದಿರದ ವಿಶ್ವಸ್ಥ ಸಮಿತಿಯು ಪುರಂದರದಾಸರ ಭಾವಚಿತ್ರದೊಂದಿಗೆ ಯಾಯಿವಾರ ಕಾರ್ಯಕ್ರಮ ಬೆಳಗಿನ 7ರಿಂದ ನಗರದ ಪ್ರಮುಖದ ಬೀದಿಗಳಲ್ಲಿನಡೆಸಲಾಯಿತು.

Vijaya Karnataka 29 Jan 2020, 5:00 am
ಧಾರವಾಡ: ನಗರದ ದೇಸಾಯಿಗಲ್ಲಿವಿಠ್ಠಲಮಂದಿರದ ಪುರಂದರ ದಾಸರ ಆರಾಧಾನಾ ಮಹೋತ್ಸವದ ಅಂಗವಾಗಿ ಮಧ್ಯಾರಾಧನೆ ದಿವಸ ಲಕ್ಷಿತ್ರ್ಮೕ ವೆಂಕಟೇಶ ಭಜನಾ ಮಂಡಳಿಯ ನೇತೃತ್ವದಲ್ಲಿವಿಠ್ಠಲ ಮಂದಿರದ ವಿಶ್ವಸ್ಥ ಸಮಿತಿಯು ಪುರಂದರದಾಸರ ಭಾವಚಿತ್ರದೊಂದಿಗೆ ಯಾಯಿವಾರ ಕಾರ್ಯಕ್ರಮ ಬೆಳಗಿನ 7ರಿಂದ ನಗರದ ಪ್ರಮುಖದ ಬೀದಿಗಳಲ್ಲಿನಡೆಸಲಾಯಿತು.
Vijaya Karnataka Web worship festival of purandara dasara
ಪುರಂದರ ದಾಸರ ಆರಾಧಾನಾ ಮಹೋತ್ಸವ


ನಗರದ ವಿಠ್ಠಲ ಮಂದಿರದಿಂದ ಪ್ರಾರಂಭವಾದ ಯಾಯಿವಾರ ಕಾರ್ಯಕ್ರಮವು ದೇಸಾಯಿ ಓಣಿ, ಮಂಗಳವಾರಪೇಟೆ, ಹೆಬ್ಬಳ್ಳಿ ಅಗಸಿ, ಎಂ.ಆರ್‌. ನಗರ, ಮಟ್ಟಪರಪ್ಪನ ಕೂಟ, ಕಾಮನಕಟ್ಟಿ, ಗಾಂಧಿಚೌಕ ಮೂಲಕ ಸಂಚರಿಸಿ ಪುನಃ ವಿಠ್ಠಲ ಮಂದಿರಕ್ಕೆ ಬಂದು ತಲುಪಿತು. ಈ ವೇಳೆ ದವಸ ಧಾನ್ಯ ಸಂಗ್ರಹಿಸಿ, ಹರಿವಾಣ ಸ್ತೂತಿ ಹಾಗೂ ಸತ್ಯನಾರಾಯಣ ಪೂಜೆ ನಡೆಸಲಾಯಿತು.

ಮಧ್ಯಾಹ್ನ 3 ಗಂಟೆಗೆ ಹರಿದಾಸರು ಕಂಡ ವೆಂಕಟೇಶ ದೇವರ ಹಾಡುಗಳು ನಡೆದ ಸ್ಪರ್ಧೆಯಲ್ಲಿಭಾಗವಹಿಸಿದ ಸರಸ್ವತಿ ಭಜನಾ ಮಂಡಳಿ ಪ್ರಥಮ ಬಹುಮಾನ ಪಡೆದು ಗುರುಪುರಂದರ ವಿಠ್ಠಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಬಹುಮಾನ ಹವ್ಯಕ ಭಜನಾ ಮಂಡಳಿ ಹಾಗೂ ತೃತೀಯ ಬಹುಮಾನವನ್ನು ಗೀತಾ ಭಜನಾ ಮಂಡಳಿ ಪಡೆದವು. ಸಮಾಧಾನಕರ ಬಹುಮಾನವನ್ನು ಸ್ನೇಹ ಬಳಗ ಹಾಗೂ ಲಕ್ಷಿತ್ರ್ಮೕವೆಂಕಟೇಶ ಭಜನಾ ಮಂಡಳಿಗಳು ಪಡೆದುಕೊಂಡು ಸ್ಪರ್ಧೆಯ ಹಿರಿಮೆಯನ್ನು ಹೆಚ್ಚಿಸಿದವು. ಸ್ಪರ್ಧೆಯ ನಿರ್ಣಾಯಕತ್ವವನ್ನು ವಿದೂಷಿ ಶೃತಿ ಕುಲಕರ್ಣಿ ಹಾಗೂ ವತ್ಸಲಾ ಕುಸನೂರು ನಡೆಸಿಕೊಟ್ಟರು. ನಂತರ ಇಬ್ಬರನ್ನು ಮಂದಿರದ ಕಾರ್ಯದರ್ಶಿ ಕೆ.ಆರ್‌. ದೇಸಾಯಿ ಸನ್ಮಾನಿಸಿದರು.

ಡಾ. ಆನಂದ ಪಾಂಡುರಂಗಿ ಹಾಗೂ ಉಪನ್ಯಾಸಕರಾದ ಪಂಡಿತ ಭೀಮಸೇನ ಆಚಾರ್ಯ ಮಳಗಿ ಅವರು ಪ್ರಶಸ್ತಿ, ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು.

ಡಾ. ಆನಂದ ಪಾಂಡುರಂಗಿ ಮಾತನಾಡಿ, ದಾಸ ಸಾಹಿತ್ಯ ಮನುಕೂಲಕ್ಕೆ ನೆಮ್ಮದಿ ಕೊಡುವ ಸಾಹಿತ್ಯ ಅಲ್ಲದೇ ಸಮಾಜನದಲ್ಲಿರುವ ಅಂಕುಡೊಂಕುಗಳನ್ನು ಸುಧಾರಿಸುವ ಶಕ್ತಿ ಹರಿದಾಸರ ಹಾಡುಗಳಲ್ಲಿಇದೆ ಎಂದು ಹೇಳಿದರು.

ಪಂಡಿತ ಭೀಮಸೇನ ಆಚಾರ್ಯ ಮಳಗಿ ಅವರು, ಪುರಂದರ ದಾಸರ ಆತ್ಮಚರಿತೆಯನ್ನು ತಮ್ಮ ಉಪನ್ಯಾಸದಲ್ಲಿಪ್ರಸ್ತುತಪಡಿಸಿದರು.

ಉತ್ತಾರಾಧನೆಯ ನಿಮಿತ್ತ ಬೆಳಗಿನ 10ಕ್ಕೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಕುಸುಮಾ ಜೋಶಿ ಭಕ್ತಿ ಸಂಗೀತ ಹಾಗೂ ಪಂಡಿತ ಸುರೇಶ ಆಚಾರ್ಯ ರಾಯಚೂರು ಅವರು ಪುರಂದರ ದಾಸರ ಹಾಡುಗಳ ಹಾಗೂ ಸುಳಾದಿಗಳ ಬಗ್ಗೆ ವಿಶ್ಲೇಷನ ಮಾಡಿದರು. ನಂತರ ಭಜನಾ ಮಂಡಳಿಗಳಿಂದ ಮಂಗಳ ಹಾಡಿನೊಂದಿಗೆ ಮಂಗಳ ಕಾರ್ಯಕ್ರಮ ನಡೆಯಿತು. ಸರೋಜಾ ರಾವ್‌ ನಿರೂಪಿಸಿದರು. ಎಸ್‌.ಬಿ. ಗುತ್ತಲ ವಂದಿಸಿದರು.

ಬಿ.ಎನ್‌. ದೇಶಪಾಂಡೆ, ಡಾ. ಶ್ರೀಧರ ಕುಲಕರ್ಣಿ, ಪಂಡಿತ ನಟರಾಜ್‌ ಮಹಾಜನ್‌, ಎನ್‌.ಕೆ ಪಡಸಲಗಿ, ಪ್ರೇಮಾನಂದ ಹುಲಕೊಪ್ಪ, ವೆಂಕಟೇಶ ಕಲ್ಕೋಟಿ, ಪ್ರೊ.ಆರ್‌.ಬಿ.ಗುತ್ತಲ, ನರಸಿಂಹರಾಯರ್‌, ಅಂಬೇಕರ್‌, ಕಟ್ಟಿ, ಮೊರಬ, ಸಿದ್ದಾಂತಿ, ಮುಕುಂದ ದೇಸಾಯಿ, ವಾದಿರಾಜ ಆಚಾರ್ಯ, ಪ್ರೊ. ದುಮ್ಮವಾಡ, ಕಾಂಚಾಣ ಕಟ್ಟಿ, ರೇಖಾ ದೇಶಪಾಂಡೆ, ಭಾರತಿ ಮಾನವಿ, ಇಂದಿರಾ ದೇಸಾಯಿ ಹಾಗೂ ಅನೇಕ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ