ಆ್ಯಪ್ನಗರ

ಯಮನೂರ ಚಾಂಗದೇವರ ಉರುಸು ಇಂದು

ನವಲಗುಂದ : ತಾಲೂಕಿನ ಯಮನೂರು ಗ್ರಾಮದಲ್ಲಿ ಚಾಂಗದೇವರ ಊರ್ಫ ರಾಜಾ ಬಾಗಸವಾರರ ಉರುಸು ಮಾ.25ರಿಂದ ತಿಂಗಳು ಕಾಲ ನಡೆಯಲಿದೆ. ಮಾ.24ರಂದು ಗಂಧಾಭಿಷೇಕ (ಸಂದಲ್‌), 25ರಂದು ಉರುಸು ನಡೆಯಲಿದ್ದು, ತಿಂಗಳವರೆಗೆ ನಡೆಯುವ ಬೃಹತ್‌ ಜಾತ್ರಾ ಮಹೋತ್ಸವ ಎಂಬ ಖ್ಯಾತಿ ಪಡೆದಿದೆ.

Vijaya Karnataka 25 Mar 2019, 5:00 am
ನವಲಗುಂದ : ತಾಲೂಕಿನ ಯಮನೂರು ಗ್ರಾಮದಲ್ಲಿ ಚಾಂಗದೇವರ ಊರ್ಫ ರಾಜಾ ಬಾಗಸವಾರರ ಉರುಸು ಮಾ.25ರಿಂದ ತಿಂಗಳು ಕಾಲ ನಡೆಯಲಿದೆ. ಮಾ.24ರಂದು ಗಂಧಾಭಿಷೇಕ (ಸಂದಲ್‌), 25ರಂದು ಉರುಸು ನಡೆಯಲಿದ್ದು, ತಿಂಗಳವರೆಗೆ ನಡೆಯುವ ಬೃಹತ್‌ ಜಾತ್ರಾ ಮಹೋತ್ಸವ ಎಂಬ ಖ್ಯಾತಿ ಪಡೆದಿದೆ.
Vijaya Karnataka Web DRW-24-NVL-2B
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಚಾಂಗದೇವರ ದರ್ಶನ ಪಡೆದು ಸನ್ಮಾನ ಸ್ವೀಕರಿದರು.


ಭಾನುವಾರ ನಡೆದ ಗಂಧಾಭಿಷೇಕ (ಸಂದಲ) ಸಂಬಂಧಿಸಿದಂತೆ ಬರ್ಗೆ ಮನೆತನ ಸಂತರು ಚಾಂಗದೇವನಿಗೆ ದೀಪ ಹಚ್ಚಲು ಬೆಣ್ಣಿಹಳ್ಳದಿಂದ ತಂದ ನೀರು ತರಲಾಯಿತು. ಚಾಂಗದೇವರ ದೇವಸ್ಥಾನಲ್ಲಿ ಪೂಜೆ ಹಾಗೂ ಪಾತಿಹಾ (ಓದಿಕೆ) ಏಕಕಾಲಕ್ಕೆ ನಡೆಯಿತು.

ದೇವರ ದರ್ಶಕ್ಕೆ ಮೊದಲು ಬೆಣ್ಣಿಹಳ್ಳದಲ್ಲಿ ಸ್ಥಾನಮಾಡುವುದು ವಾಡಿಕೆ. ಆದರೆ ಕಳೆದ ಬಾರಿ ನೀರಿಲ್ಲದೆ ಭಕ್ತರು ಪರದಾಡಿದ್ದರು. ಈ ಬಾರಿ ಮಲಪ್ರಭಾ ಕಾಲುವೆ ನೀರು ಹರಿಯುತ್ತಿರುವುದರಿಂದ ನೀರಿನ ಸಮಸ್ಯೆ ಕಂಡು ಬರಲಿಲ್ಲ.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌.ಕೋನರಡ್ಡಿ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ ಅಸೂಟಿ ಗಂಧಾಭಿಷೇಕದಲ್ಲಿ ಪಾಲ್ಗೊಂಡು ದೇವರ ಆರ್ಶೀವಾದ ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ