ಆ್ಯಪ್ನಗರ

ಕೀಳುಮಟ್ಟದ ಹೇಳಿಕೆ ಬಿಎಸ್‌ವೈಗೆ ಶೋಭೆ ತರುವಂತದಲ್ಲ: ಜಿ.ಪರಮೇಶ್ವರ

ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಅವರ ಈ‌ ಕೀಳುಮಟ್ಟದ ಹೇಳಿಕೆ ಶೋಭೆ ತರುವಂತಹದಲ್ಲ ಎಂದು ಕಿಡಿಕಾರಿದ್ದಾರೆ.

Vijaya Karnataka Web 22 Feb 2018, 10:33 pm
ಹುಬ್ಬಳ್ಳಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಬಚ್ಚಾ ಎಂದು ಕರೆದಿದ್ದ ಬಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಅವರ ಈ‌ ಕೀಳುಮಟ್ಟದ ಹೇಳಿಕೆ ಶೋಭೆ ತರುವಂತಹದಲ್ಲ ಎಂದು ಕಿಡಿಕಾರಿದ್ದಾರೆ.
Vijaya Karnataka Web yeddyurappa should know how to speak says g parameshwar
ಕೀಳುಮಟ್ಟದ ಹೇಳಿಕೆ ಬಿಎಸ್‌ವೈಗೆ ಶೋಭೆ ತರುವಂತದಲ್ಲ: ಜಿ.ಪರಮೇಶ್ವರ


ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ವೈ ಘನತೆಗೆ ತಕ್ಕ ಮಾತನಾಡಬೇಕು. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಬಗ್ಗೆ ಹಗುರ ಮಾತು ಒಳ್ಳೆಯದಲ್ಲ. ಇನ್ನು ಪರಿಶಿಷ್ಟರಿಗೆ ಮೀಸಲಿಟ್ಟ 929 ಕೋಟಿ ಹಣವನ್ನು ಸಾಲಮನ್ನಕ್ಕೆ ಬಳಸಿಲ್ಲ, ಹಾಗೆ ಬಳಸಲು ಕಾನೂನು ಚೌಕಟ್ಟಿನಲ್ಲಿ ಅವಕಾಶವಿಲ್ಲ. ಬಳಕೆಯಾಗದೆ ಉಳಿದರೆ ಅದೇ ಹಣವನ್ನ, ಮುಂದಿನ ವರ್ಷ ಬಳಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದೇ ವೇಳೆ ಮಹದಾಯಿ ವಿಚಾರವಾಗಿ ಮಾತನಾಡಿ, ತಮಿಳುನಾಡಿನ ವಿಚಾರದಲ್ಲಿ ಇಂದಿರಾಗಾಂಧಿ ಮಧ್ಯೆ ಪ್ರವೇಶ ಮಾಡಿದ್ದರು. ಈಗ ಮಹಾದಾಯಿ ವಿಚಾರದಲ್ಲಿ ಮೋದಿ ಮಧ್ಯೆ ಪ್ರವೇಶ ಮಾಡಬೇಕು. ನಮ್ಮ ಪ್ರಯತ್ನವೂ ಜಾರಿಯಲ್ಲಿದ್ದು, ಪ್ರಧಾನಿ ಮಧ್ಯಸ್ಥಿಕೆ ವಹಿಸಿದ್ರೆ ಮಾತ್ರ ಯೋಜನೆ ಅನುಷ್ಟಾನಗೊಳ್ಳಲು ಸಾಧ್ಯ ಎಂದು ನುಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ