ಧಾರವಾಡ : ಭಾರತದ 130 ಕೋಟಿ ಜನ ಜಾತಿ, ಮತ, ಪಂತ ಭೇದವಿಲ್ಲದೆ ಆಚರಿಸುವ ಹಬ್ಬ ಯೋಗ ಹಬ್ಬ ಎಂದು ಯೋಗ ಗುರು ಭವರಲಾಲ್ ಆರ್ಯ ಹೇಳಿದರು.
ನಗರದ ಪತಂಜಲಿ ಯೋಗ ಸಮಿತಿಯಿಂದ ಶುಕ್ರವಾರ ನಗರದ ಚರಂತಿಮಠ ಗಾರ್ಡನ್ನ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ವಿಶೇಷ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಬ್ಬದ ದಿನಗಳಲ್ಲಿ ಮಾಡಿದ ವಿವಿಧ ಭಕ್ಷ ಗಳನ್ನು ಸವಿಯಲು ಆರೋಗ್ಯ ಭಾಗ್ಯ ಅವಶ್ಯ. ಅದಕ್ಕಾಗಿ ಯೋಗ ಮಾಡಿ ಶರೀರ ಸ್ವಸ್ಥವಾಗಿಡಬೇಕು. ಒಂದು ವಾರ ನಡೆಯುವ ಶಿಬಿರದಲ್ಲಿ ಯೋಗ ತರಬೇತಿ ನಡೆಸಲಾಗುತ್ತದೆ ಎಂದರು.
ಜೂ.21 ರಂದು ಬೆಳಗ್ಗೆ 5.30ಕ್ಕೆ ಹುಬ್ಬಳ್ಳಿಯ ಕ್ಲಬ್ ರಸ್ತೆಯ ಜಿಮಖಾನಾ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಹಸ್ರ ಸಂಖ್ಯೆಯಲ್ಲಿ ಯೋಗ ಆಸಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಹರಿದ್ವಾರದಲ್ಲಿ 15 ದಿನ ತರಬೇತಿ ಮುಗಿಸಿದ 28 ಜನರಿಗೆ ಪ್ರಮಾಣ ಪತ್ರ ನೀಡಲಾಯಿತು. ನಂತರ ಸಾಮೂಹಿಕವಾಗಿ ಯೋಗ ತರಬೇತಿ ನೀಡಲಾಯಿತು.
ಎಂ.ಡಿ.ಪಾಟೀಲ, ಶಿವಾನಂದ ಲೂಲೆಣ್ಣವರ, ಶೈಲಜಾ ಮಾಡಿಕರ, ಉಮೇಶ ಕುಲಕರ್ಣಿ, ಬಸವರಾಜ ಮುಮ್ಮಿಗಟ್ಟಿ, ರಮೇಶ ಸುಲಾಖೆ, ಬಸವರಾಜ ಹಿರೇಮಠ, ವಂದನಾ ಹೂಂಮಕರ, ರೇಣುಕಾ ಲಿಂಬಣ್ಣದೇವರಮಠ ಸೇರಿದಂತೆ ಇತರರು ಇದ್ದರು.
ನಗರದ ಪತಂಜಲಿ ಯೋಗ ಸಮಿತಿಯಿಂದ ಶುಕ್ರವಾರ ನಗರದ ಚರಂತಿಮಠ ಗಾರ್ಡನ್ನ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ವಿಶೇಷ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಬ್ಬದ ದಿನಗಳಲ್ಲಿ ಮಾಡಿದ ವಿವಿಧ ಭಕ್ಷ ಗಳನ್ನು ಸವಿಯಲು ಆರೋಗ್ಯ ಭಾಗ್ಯ ಅವಶ್ಯ. ಅದಕ್ಕಾಗಿ ಯೋಗ ಮಾಡಿ ಶರೀರ ಸ್ವಸ್ಥವಾಗಿಡಬೇಕು. ಒಂದು ವಾರ ನಡೆಯುವ ಶಿಬಿರದಲ್ಲಿ ಯೋಗ ತರಬೇತಿ ನಡೆಸಲಾಗುತ್ತದೆ ಎಂದರು.
ಜೂ.21 ರಂದು ಬೆಳಗ್ಗೆ 5.30ಕ್ಕೆ ಹುಬ್ಬಳ್ಳಿಯ ಕ್ಲಬ್ ರಸ್ತೆಯ ಜಿಮಖಾನಾ ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಹಸ್ರ ಸಂಖ್ಯೆಯಲ್ಲಿ ಯೋಗ ಆಸಕ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಹರಿದ್ವಾರದಲ್ಲಿ 15 ದಿನ ತರಬೇತಿ ಮುಗಿಸಿದ 28 ಜನರಿಗೆ ಪ್ರಮಾಣ ಪತ್ರ ನೀಡಲಾಯಿತು. ನಂತರ ಸಾಮೂಹಿಕವಾಗಿ ಯೋಗ ತರಬೇತಿ ನೀಡಲಾಯಿತು.
ಎಂ.ಡಿ.ಪಾಟೀಲ, ಶಿವಾನಂದ ಲೂಲೆಣ್ಣವರ, ಶೈಲಜಾ ಮಾಡಿಕರ, ಉಮೇಶ ಕುಲಕರ್ಣಿ, ಬಸವರಾಜ ಮುಮ್ಮಿಗಟ್ಟಿ, ರಮೇಶ ಸುಲಾಖೆ, ಬಸವರಾಜ ಹಿರೇಮಠ, ವಂದನಾ ಹೂಂಮಕರ, ರೇಣುಕಾ ಲಿಂಬಣ್ಣದೇವರಮಠ ಸೇರಿದಂತೆ ಇತರರು ಇದ್ದರು.