ಆ್ಯಪ್ನಗರ

ಮನಸ್ಸು-ದೇಹದ ವ್ಯಾಯಾಮ ಸಂಗಮವೇ ಯೋಗ

ನವಲಗುಂದ : ಭಾರತದಲ್ಲಿ ಪುರಾತನ ಕಾಲದಿಂದಲೂ ಯೋಗವು ಒಂದು ಜೀವನ ಕ್ರಮವಾಗಿದೆ. ಧ್ಯಾನ, ಮನಸ್ಸು ಮತ್ತು ದೇಹದ ವ್ಯಾಯಾಮಗಳ ಸಂಗಮವೇ ಯೋಗವಾಗಿದೆ ಎಂದು ಶಂಕರ ಕಾಲೇಜು ಪ್ರಾಚಾರ್ಯೆ ಡಾ.ಕಸ್ತೂರಿ ಬಿಕ್ಕಣ್ಣವರ ಹೇಳಿದರು.

Vijaya Karnataka 22 Jun 2019, 5:00 am
ನವಲಗುಂದ : ಭಾರತದಲ್ಲಿ ಪುರಾತನ ಕಾಲದಿಂದಲೂ ಯೋಗವು ಒಂದು ಜೀವನ ಕ್ರಮವಾಗಿದೆ. ಧ್ಯಾನ, ಮನಸ್ಸು ಮತ್ತು ದೇಹದ ವ್ಯಾಯಾಮಗಳ ಸಂಗಮವೇ ಯೋಗವಾಗಿದೆ ಎಂದು ಶಂಕರ ಕಾಲೇಜು ಪ್ರಾಚಾರ್ಯೆ ಡಾ.ಕಸ್ತೂರಿ ಬಿಕ್ಕಣ್ಣವರ ಹೇಳಿದರು.
Vijaya Karnataka Web DRW-21-NVL-1
ವಿಶ್ವ ಯೋಗ ದಿನಾಚರಣೆ ನಿಮಿತ್ತ ಶಂಕರ ಕಾಲೇಜಿನಲ್ಲಿ ಏರ್ಪಡಿಸಿದ್ದ್ದ ಯೋಗ ಶಿಬಿರದಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗದಲ್ಲಿ ಪಾಲ್ಗೊಂಡಿರುವುದು.


ಶುಕ್ರವಾರ ಸ್ಥಳೀಯ ಶ್ರೀ ಶಂಕರ ಕಾಲೇಜಿನಲ್ಲಿ ವಿಶ್ವ ಯೋಗ ದಿನದ ನಿಮಿತ್ತ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ ನಂತರ ಮಾತನಾಡಿದರು.

ಜೂ.21ರಂದು ಪ್ರಪಂಚದ 180ಕ್ಕೂ ಅಧಿಕ ದೇಶಗಳು ಯೋಗವನ್ನು ಒಪ್ಪಿಕೊಂಡು ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಿ ಜನರನ್ನು ಜಾಗೃತಗೊಳಿಸುವುದರೊಂದಿಗೆ ಭಾರತ ದೇಶದ ಪುರಾತನ ಯೋಗ ಪದ್ಧತಿ ಎಲ್ಲೆಡೆ ಅನುಸರಿಸುತ್ತಿರುವುದು ದೇಶದ ಹೆಮ್ಮೆ ಎಂದರು.

ಪ್ರೊ.ಎಸ್‌.ಎಸ್‌. ಕಾಡಮ್ಮನವರ ಮಾತನಾಡಿ, ಯೋಗಾಸನ ಅಳವಡಿಸಿಕೊಳ್ಳುವುದರ ಪ್ರಯೋಜನ ಹಾಗೂ ಇಂದಿನ ಬದುಕಿನಲ್ಲಿ ಯೋಗವು ಅವಿಭಾಜ್ಯವಾಗಿ ಆಚರಣೆಯಲ್ಲಿ ಬರಬೇಕು ಎಂದು ಅಭಿಪ್ರಾಯಪಟ್ಟರು.

ದೈಹಿಕ ಶಿಕ್ಷ ಣ ಬೋಧಕರಾದ ಎ.ಜಿ. ಜಕ್ಕನಗೌಡ್ರ ವಿವಿಧ ಯೋಗಾಸನಗಳನ್ನು ಹೇಳಿಕೊಟ್ಟರು. ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್‌, ಸ್ಕೌಟ್ಸ್‌, ಗೈಡ್ಸ್‌, ರೆಡ್‌ಕ್ರಾಸ್‌ ಘಟಕಗಳ ಅಧಿಕಾರಿಗಳು, ಸ್ವಯಂ ಸೇವಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಬಿ.ಎಚ್‌.ಹೂಗಾರ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ