ಆ್ಯಪ್ನಗರ

ಒತ್ತಡ ಬದುಕಿಗೆ ಯೋಗ ಅವಶ್ಯ

ಅಳ್ನಾವರ: ಅಧುನಿಕ ಪ್ರಪಂಚದ ಒತ್ತಡದ ಬದುಕಿನಿಂದ ದೂರ ಉಳಿಯಲು ನಿತ್ಯ ಸಹಜ ಯೋಗ ಮಾಡಬೇಕು. ಸಹಜ ಯೋಗ ಮಾಡುವದರಿಂದ ದೇಹದ ಆಲಸ್ಯತನ ದೂರವಾಗಿ ಚಿತ್ತದ ಬಲವರ್ಧನೆಯ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಚೈತನ್ಯಪೂರ್ವ ಬದುಕು ನಿಮ್ಮದಾಗುತ್ತದೆ ಎಂದು ಯೋಗ ಗುರು ರಾಘವೇಂದ್ರ ಆಚಾರ್ಯ ಹೇಳಿದರು.

Vijaya Karnataka 27 Nov 2019, 5:00 am
ಅಳ್ನಾವರ: ಅಧುನಿಕ ಪ್ರಪಂಚದ ಒತ್ತಡದ ಬದುಕಿನಿಂದ ದೂರ ಉಳಿಯಲು ನಿತ್ಯ ಸಹಜ ಯೋಗ ಮಾಡಬೇಕು. ಸಹಜ ಯೋಗ ಮಾಡುವದರಿಂದ ದೇಹದ ಆಲಸ್ಯತನ ದೂರವಾಗಿ ಚಿತ್ತದ ಬಲವರ್ಧನೆಯ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಚೈತನ್ಯಪೂರ್ವ ಬದುಕು ನಿಮ್ಮದಾಗುತ್ತದೆ ಎಂದು ಯೋಗ ಗುರು ರಾಘವೇಂದ್ರ ಆಚಾರ್ಯ ಹೇಳಿದರು.
Vijaya Karnataka Web yoga is essential for living stress
ಒತ್ತಡ ಬದುಕಿಗೆ ಯೋಗ ಅವಶ್ಯ


ಇಲ್ಲಿನ ನೆಸ್ಟ್‌ ಕ್ರಿಯೇಟಿವ್‌ ಫೌಂಡೇಶನ್‌ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಉತ್ತಮ ಆರೋಗ್ಯಕ್ಕಾಗಿ ಸಹಜ ಯೋಗ ಕಾರ್ಯಕ್ರಮದಲ್ಲಿಯೋಗದ ಪ್ರಾತ್ಯಕ್ಷತೆ ಮೂಲಕ ಉದ್ಘಾಟಿಸಿ ಮಾತನಾಡಿದರು. ನಿರಂತರ ಧ್ಯಾನದಿಂದ ದೇಹದ ನರ ನಾಡಿಗಳ ಮೇಲೆ ಪ್ರಭುತ್ವ ಸಾಧಿಸಬಹುದು. ಮನಸ್ಸು ನಿರ್ಮಲವಾಗಿ ಆನಂದಮಯ ಕ್ಷಣ ನಿಮ್ಮದಾಗುತ್ತವೆ. ಸಕಾರಾತ್ಮಕ ಚಿಂತನೆಗಳು ಮೊಳಕೆ ಒಡೆದು ಜೀವನದಲ್ಲಿಉನ್ನತಿ ಪ್ರಾಪ್ತಿಯಾಗುತ್ತದೆ ಎಂದರು.

ಮಹಾದೇವ ಸಾಗರೇಕರ, ರಾಜು ಕರ್ಲೇಕರ, ಪುಂಡಲಿಕ ಪಾರ್ದಿ, ರಾಜು ಅಷ್ಟೇಕರ, ಪಂಚಾಕ್ಷರಿ ಮಠದ, ಜಾಧವ, ವೈಭವ ಪೂಜಾರ, ಹರ್ಷಾ ಸುಣಗಾರ, ಜಯಶ್ರೀ ಉಡುಪಿ, ಸುಮಾ ಸೊಪ್ಪಿ, ಆರ್‌.ವಿ .ಪಾಂಚಾಳ, ಗಣಪತಿ, ಶಾರದಾ ಬಸ್ತವಾಡಕರ, ಮಹಾದೇವ ರೇಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ