ಆ್ಯಪ್ನಗರ

ಯೋಗೀಶಗೌಡ ಹತ್ಯೆ: ಬೇರೆ ಜಿಲ್ಲೆಯ ಪೊಲೀಸರಿಂದ ತನಿಖೆ ನಡೆಸಲು ಒತ್ತಾಯ

ಹುಬ್ಬಳ್ಳಿ : ಯೋಗೀಶಗೌಡ ಹತ್ಯೆಗೆ ಸಂಬಂಧಿಸಿದಂತೆ ಸಾಕ್ಷಿಗಳ ಮೇಲೆ ಒತ್ತಡ, ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆ ಅಭ್ಯರ್ಥಿ ವಿನಯ ಕುಲಕರ್ಣಿ ಸೇರಿ ಮೂವರ ವಿರುದ್ಧ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರಿಂದ ನ್ಯಾಯ ಸಿಗುವುದು ಕಷ್ಟ. ಹಾಗಾಗಿ ಬೇರೆ ಜಿಲ್ಲೆಯ ಪೊಲೀಸರಿಂದ ತನಿಖೆ ನಡೆಸಬೇಕು ಎಂದು ಮೃತನ ಸಹೋದರ ಗುರುನಾಥಗೌಡ ಗೌಡರ ಒತ್ತಾಯಿಸಿದರು.

Vijaya Karnataka 18 Apr 2019, 5:00 am
ಹುಬ್ಬಳ್ಳಿ : ಯೋಗೀಶಗೌಡ ಹತ್ಯೆಗೆ ಸಂಬಂಧಿಸಿದಂತೆ ಸಾಕ್ಷಿಗಳ ಮೇಲೆ ಒತ್ತಡ, ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಲೋಕಸಭೆ ಅಭ್ಯರ್ಥಿ ವಿನಯ ಕುಲಕರ್ಣಿ ಸೇರಿ ಮೂವರ ವಿರುದ್ಧ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರಿಂದ ನ್ಯಾಯ ಸಿಗುವುದು ಕಷ್ಟ. ಹಾಗಾಗಿ ಬೇರೆ ಜಿಲ್ಲೆಯ ಪೊಲೀಸರಿಂದ ತನಿಖೆ ನಡೆಸಬೇಕು ಎಂದು ಮೃತನ ಸಹೋದರ ಗುರುನಾಥಗೌಡ ಗೌಡರ ಒತ್ತಾಯಿಸಿದರು.
Vijaya Karnataka Web yogish gowda murder inspired by police from other districts
ಯೋಗೀಶಗೌಡ ಹತ್ಯೆ: ಬೇರೆ ಜಿಲ್ಲೆಯ ಪೊಲೀಸರಿಂದ ತನಿಖೆ ನಡೆಸಲು ಒತ್ತಾಯ


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಪೋಲಿಸರು ಕೋರ್ಟ್‌ ಸೂಚನೆಯಂತೆ ಮಾಜಿ ಸಚಿವ ವಿನಯ ಕುಲಕರ್ಣಿ, ಡಿವೈಎಸ್‌ಪಿಗಳಾದ ತುಳಜಪ್ಪ ಸುಲ್ಪಿ, ಚಂದ್ರಶೇಖರ ವಿರುದ್ಧ ಧಾರವಾಡ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ವಿನಯ ಕುಲಕರ್ಣಿಯವರ ಒತ್ತಡದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವುದು ಕಷ್ಟಕರ. ಆದ್ದರಿಂದ ಪಕ್ಕದ ಜಿಲ್ಲೆ, ಬೇರೆ ಜಿಲ್ಲೆಯ ದಕ್ಷ ಪೊಲೀಸ್‌ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.

ಡಿವೈಎಸ್‌ಪಿ ತುಳಜಪ್ಪ ಸುಲ್ಪಿ, ಬಿ.ಪಿ. ಚಂದ್ರಶೇಖರ ಹಾಗೂ ವಿನಯ ಕುಲಕರ್ಣಿ ಅವರ ರಾಜೀ ಸಂಧಾನಕ್ಕೆ ಒಪ್ಪದೆ ಅಂತಿಮವಾಗಿ ನ್ಯಾಯಲಯದ ಮೊರೆ ಹೋಗಿದ್ದೆ. ವಿಚಾರಣೆ ನಡೆಸಿದ ಕೋರ್ಟ್‌ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿ ವಿನಯ ಕುಲಕರ್ಣಿಯವರು, ಇದಕ್ಕೆಲ್ಲ ಪ್ರಹ್ಲಾದ ಜೋಶಿ ಅವರ ಪಿತೂರಿ ಕಾರಣ ಎಂದು ಆರೋಪಿಸುತ್ತಿದ್ದಾರೆ. ಇದರಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಪಾತ್ರವಿಲ್ಲ. ಅವರ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದು ಗುರುನಾಥಗೌಡ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ