ಆ್ಯಪ್ನಗರ

ಯುವಕರಿಗೆ ಶಿಸ್ತುಬದ್ಧ ಜೀವನ ಅತ್ಯಗತ್ಯ

ಹುಬ್ಬಳ್ಳಿ :ನಗರದ ಲೀಡರ್ಸ್‌ ಎಕ್ಸಲ್‌ರೇಟಿಂಗ್‌ ಡೆವಲೆಪಮೆಂಟ್‌ ಪ್ರೋಗ್ರಾಮ್‌ ಮತ್ತು ದೇಶಪಾಂಡೆ ಶಿಕ್ಷ ಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಗಿಲ್‌ ವಿಜಯೋತ್ಸವವನ್ನು ಗುರುವಾರ ಆಚರಿಸಲಾಯಿತು.

Vijaya Karnataka 28 Jul 2018, 5:00 am
ಹುಬ್ಬಳ್ಳಿ :ನಗರದ ಲೀಡರ್ಸ್‌ ಎಕ್ಸಲ್‌ರೇಟಿಂಗ್‌ ಡೆವಲೆಪಮೆಂಟ್‌ ಪ್ರೋಗ್ರಾಮ್‌ ಮತ್ತು ದೇಶಪಾಂಡೆ ಶಿಕ್ಷ ಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಗಿಲ್‌ ವಿಜಯೋತ್ಸವವನ್ನು ಗುರುವಾರ ಆಚರಿಸಲಾಯಿತು.
Vijaya Karnataka Web young people need a disciplined life
ಯುವಕರಿಗೆ ಶಿಸ್ತುಬದ್ಧ ಜೀವನ ಅತ್ಯಗತ್ಯ


ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಕ್ಯಾಪ್ಟನ್‌ ನವೀನ್‌ ನಾಗಪ್ಪ ಮಾತನಾಡಿ, ಕಾರ್ಗಿಲ್‌ ಯುದ್ಧ್ದದಲ್ಲಿ ಭಾಗವಹಿಸಿದ್ದ ಅವರ ಅನುಭವದ ನೈಜ ಚಿತ್ರಣವನ್ನು ಯುವಕರಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು. ತಮ್ಮ ಪ್ರೇರಣಾದಾಯಿ ಸೇವೆ ಮತ್ತು ಮಾತುಗಳಿಂದ ಯುವಕರ ಗಮನ ಸೆಳೆದು ಗಡಿಯಲ್ಲಿ ಸೈನಿಕ ಮತ್ತು ನಾಡಿನಲ್ಲಿ ನಾಯಕನ ಶಿಸ್ತು ಬದ್ಧ ಸೇವೆ ಅತ್ಯಗತ್ಯ ಎಂದು ತಿಳಿಸಿದರು.

ಸುಬೇದಾರ ಏಂಜಲ್‌ ಮಾಂಜ್ರೇಕರ್‌ ಅವರು ಮಾತನಾಡಿ, ಸೇನೆಯಲ್ಲಿದ್ದ ತಮ್ಮ ಸಹ ಸೈನಿಕರೊಂದಿಗಿನ ಒಡನಾಟ, ಸೈನ್ಯದ ಅನುಭವ ಹಂಚಿಕೊಂಡರಲ್ಲದೆ ನಾಡಿನ ರಕ್ಷ ಣೆಗೆ ಯುವಕರ ಶಿಸ್ತುಬದ್ಧ ಜೀವನ ಅತ್ಯಗತ್ಯ ಹಾಗೂ ತನ್ಮೂಲಕ ಶಿಸ್ತಿನ ಸಿಪಾಯಿಗಳಂತೆ ದೇಶ ರಕ್ಷ ಣೆಗಾಗಿ ದೇಶ ಸೇವೆಗೆ ಸನ್ನದ್ಧರಾಗಿ ಎಂದು ಯುವಕರಿಗೆ ಕರೆ ನೀಡಿದರು.

ಸಂಸ್ಥೆ ರಜಬಲಿ ಮಂಗಲಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸೈನಿಕನ ಜೀವನಾಧಾರಿತ ರೂಪಕ ಕಿರು ಪ್ರದರ್ಶಿಸಲಾಯಿತು. ಸಂಸ್ಥೆಯ ಸುಶ್ರುತ ಸೊನಟಕ್ಕೆ, ಬಿಂದಿಯಾ ಪಾಟೀಲ, ಗುರುಸಿದ್ದಯ್ಯ ಕೊಣ್ಣುರಮಠ, ರಾಕೇಶ ತೋಟಕರ ಮತ್ತು ಪ್ರತಿಷ್ಠಾನದ ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ