ಆ್ಯಪ್ನಗರ

ಅರ್ಪಿತಾ ಶಾನಬಾಗಗೆ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ

ಧಾರವಾಡ: ದೇಶದ ಅಭಿವೃದ್ಧಿಯು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ನೇರ ಸಂಬಂಧ ಹೊಂದಿದೆ. ಪ್ರಕೃತಿಯ ಕೊಡುಗೆಗಳಿಂದ ಹೊಸ ಹೊಸ ಸಂಶೋಧನೆಗಳಲ್ಲಿತೊಡಗಿಕೊಂಡು ಮೌಲ್ಯಯುತ ಜೀವನ ಸಾಗಿಸುವ ಸೌಕರ್ಯಗಳತ್ತ ಸಾಗುತ್ತಿದ್ದೇವೆ ಎಂದು ಡಾ.ಎಸ್‌.ಟಿ ನಂದಿಬೇವೂರ ಹೇಳಿದರು.

Vijaya Karnataka 9 Dec 2019, 5:00 am
ಧಾರವಾಡ: ದೇಶದ ಅಭಿವೃದ್ಧಿಯು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ನೇರ ಸಂಬಂಧ ಹೊಂದಿದೆ. ಪ್ರಕೃತಿಯ ಕೊಡುಗೆಗಳಿಂದ ಹೊಸ ಹೊಸ ಸಂಶೋಧನೆಗಳಲ್ಲಿತೊಡಗಿಕೊಂಡು ಮೌಲ್ಯಯುತ ಜೀವನ ಸಾಗಿಸುವ ಸೌಕರ್ಯಗಳತ್ತ ಸಾಗುತ್ತಿದ್ದೇವೆ ಎಂದು ಡಾ.ಎಸ್‌.ಟಿ ನಂದಿಬೇವೂರ ಹೇಳಿದರು.
Vijaya Karnataka Web young scientist award presented to arpita shanabaga
ಅರ್ಪಿತಾ ಶಾನಬಾಗಗೆ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ


ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರೊ.ಎಸ್‌.ಪಿ.ಹಿರೇಮಠ ದತ್ತಿ ಕಾರ್ಯಕ್ರಮದ ಅಂಗವಾಗಿ ಪ್ರೊ.ಎಸ್‌.ಪಿ.ಹಿರೇಮಠ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಅವರು ಮಾತನಾಡಿದರು.

ಕ್ರಿಯಾಶೀಲತೆ, ಶ್ರದ್ಧೆ, ಶ್ರಮದ ಬಧ್ದತೆ, ಪರಸ್ಪರ ವಿಚಾರವಿನಿಮಯದ ಕಾರ್ಯದಿಂದ ಸಂಶೋಧನೆ ಮಾಡಿದಾಗ ಮಹಾನ್‌ ಸಾಧಕನಾಗಲು ಸಾಧ್ಯವೆಂದು ಅಬ್ದುಲ್‌ ಕಲಾಂ ಹೇಳಿದ್ದಾರೆ. ಅದನ್ನು ಪ್ರತಿಯೊಬ್ಬ ಸಂಶೋಧಕರು ಅಳವಡಿಸಿಕೊಂಡರೆ ಉತ್ತಮ ಸಾಧಕರಾಗಲು ಸಾಧ್ಯ ಎಂದರು.

ಡಾ. ಉಜ್ವಲಾ ಹಿರೇಮಠ ಮಾತನಾಡಿ, ಯುವ ಸಮುದಾಯಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಈ ದತ್ತಿ ಇಡಲಾಗಿದೆ.ಯುವ ಸಮುದಾಯ ಹಿರಿಯರನ್ನು ಮಾದರಿಯಾಗಿ ಇಟ್ಟುಕೊಂಡು ಹೆಚ್ಚಿನ ಸಾಧನೆಯನ್ನು ಸಮರ್ಥವಾಗಿ ಸತ್ಯದ ಮಾರ್ಗದಲ್ಲಿನಡೆಯುವಂತಾಗಬೇಕು ಎಂದು ಹೇಳಿದರು.

ಪ್ರೊ.ಎಸ್‌.ಪಿ.ಹಿರೇಮಠ ಯುವ ವಿಜ್ಞಾನಿ ಪ್ರಶಸ್ತಿ ಸ್ವೀಕರಿಸಿದ ಅರ್ಪಿತಾ ಶಾನಬಾಗ ಮಾತನಾಡಿ, ಈ ಪ್ರಶಸ್ತಿಯು ತಂದೆ ತಾಯಿ ಮತ್ತು ಕಲಿಸಿದ ಗುರುಗಳಿಗೆ ಸಲ್ಲುತ್ತದೆ. ನನಗೆ ಇನ್ನೂ ಹೆಚ್ಚು ಓದಿ ಹಿರಿಯರು ಹಾಕಿಕೊಟ್ಟ ಮಾರ್ಗದಿಂದ ಸಾಧಿಸಬೇಕೆಂಬ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು.ಡಾ.ಗಂಗಾಧರ ಮಠ, ಡಾ.ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಪ್ರೊ.ಲೀಲಾ ಕಲಕೋಟಿ, ಡಾ.ಎಸ್‌.ಎ.ನಾಯಕ, ಪ್ರಭಾ ನೀರಲಗಿ, ಡಾ.ಶಿವಕುಮಾರ ತೊರಗಲ್ಲಮಠ, ಪ್ರೊ. ನಾಗಭೂಷಣ, ಡಾ. ಬಿಳಗಿ, ಬಿ.ಎಸ್‌.ಶಿರೋಳ, ಡಾ. ಜಿ ಎ ಕಲ್ಲೂರ, ಪ್ರೊ. ಯರವಿನತೆಲಿಮಠ, ಡಾ. ಮಲ್ಲಿಕಾರ್ಜುನ ಪಾಟೀಲ, ಶಾರದಾ ಕೌದಿ, ವೀಣಾ ಸಂಕನಗೌಡರ, ಅಶೋಕ ಶಾನಬಾಗ, ಅರ್ಚನಾ ಶಾನಬಾಗ ಭಾಗವಹಿಸಿದ್ದರು.

ಗಾಯಕ ಪ್ರೇಮಾನಂದ ಶಿಂಧೆ ಪ್ರಾರ್ಥಿಸಿದರು. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾತಾಂರ್‍ಡಪ್ಪ ಎಂ.ಕತ್ತಿ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ