ಆ್ಯಪ್ನಗರ

ಯುವ ವಿಜ್ಞಾನಿಗಳಿಗೆ ಉತ್ತಮ ಸಂಶೋಧನೆ ಅವಶ್ಯ

ಧಾರವಾಡ : ಯುವ ವಿಜ್ಞಾನಿಗಳು ಆಧುನಿಕತೆಗೆ ತಕ್ಕಂತೆ ಬದಲಾಗುವುದರ ಜತೆಗೆ ಉತ್ತಮ ಸಂಶೋಧನೆÜ ಕೈಗೊಳ್ಳಬೇಕು ಎಂದು ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಪ್ರಿನ್ಸಿಪಾಲ ಡಾ.ಬಸವರಾಜ ಎಸ್‌. ಅನಾಮಿ ಅಭಿಪ್ರಾಯಪಟ್ಟರು.

Vijaya Karnataka 4 Jul 2019, 5:00 am
ಧಾರವಾಡ : ಯುವ ವಿಜ್ಞಾನಿಗಳು ಆಧುನಿಕತೆಗೆ ತಕ್ಕಂತೆ ಬದಲಾಗುವುದರ ಜತೆಗೆ ಉತ್ತಮ ಸಂಶೋಧನೆÜ ಕೈಗೊಳ್ಳಬೇಕು ಎಂದು ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಪ್ರಿನ್ಸಿಪಾಲ ಡಾ.ಬಸವರಾಜ ಎಸ್‌. ಅನಾಮಿ ಅಭಿಪ್ರಾಯಪಟ್ಟರು.
Vijaya Karnataka Web DRW-3MAILAR08


ನಗÜರದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ರಾ.ಹ.ದೇಶಪಾಂಡೆ ಸಭಾಭವನಲ್ಲಿ ಡಾ. ಶರಣಪ್ಪ ತೋಟಪ್ಪ ನಂದಿಬೇವೂರ ದತ್ತಿ ಕಾರ್ಯಕ್ರಮದ ಅಂಗವಾಗಿ ಬುಧುವಾರ ಹಮ್ಮಿಕೊಂಡ ಯುವ ವಿಜ್ಞಾನಿ ಪ್ರಶಸ್ತಿ-2019 ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮೂಲ ವಿಜ್ಞಾನದಲ್ಲಿ ಸಂಶೋಧನೆಗಳಾಗಿರದೇ ಹೋಗಿದ್ದರೆ ಇಂದು ನಮ್ಮ ಜೀವನ ಇಷ್ಟು ಸುಖಕರವಾಗಿರುತ್ತಿರಲಿಲ್ಲ. ಪ್ರಸ್ತುತವಾಗಿ ಕೆಲ ಸಂಶೋಧನೆಗಳು ಕೃತಿಚೌರ್ಯದಿಂದ ಕೂಡಿದ್ದು, ಅಂತರಶಿಸ್ತಿಯ ಸಂಶೋಧನೆಗಳು ಸಾಮಾಜಿಕ ಸ್ವಾಸ್ತ್ಯದ ದಿಸೆಯಲ್ಲಿರಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಚಿಕ್ಕಮಕ್ಕಳ ತಜ್ಞ ಡಾ. ರಾಜನ್‌ ದೇಶಪಾಂಡೆ ಮಾತನಾಡಿ, ಇಂದಿನ ಸಂಶೋಧನೆಗಳು ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗಿರಬೇಕು. ಈ ನಿಟ್ಟಿನಲ್ಲಿ ಯುವ ವಿಜ್ಞಾನಿಗಳು ಸಮಾಜದ ಬೆಳವಣಿಗೆಗೆ ಪೂರಕವಾದ ಸಂಶೋಧನೆ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.

ಇದೇ ವೇಳೆ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ರಸಾಯನ ಶಾಸ್ತ್ರ ವಿಭಾಗದ ಡಾ. ಬಾಳಪ್ಪ ಬಿ. ಮುನವಳ್ಳಿ,

ಪಳೆಯುಳಿಕೆ ಇಂಧನ ಕುರಿತ ಸಂಶೋಧನೆಗೆ ಡಾ. ಎಸ್‌.ಟಿ. ನಂದಿಬೇವೂರ ಯುವ ವಿಜ್ಞಾನಿ ಪ್ರಶಸ್ತಿ-2019 ನೀಡಿ ಗೌರವಿಸಲಾಯಿತು. ಹಿರಿಯರಾದ ಡಾ. ಬಿ.ಆರ್‌. ಹಾವಿನಾಳೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಡಾ. ಎಸ್‌.ಟಿ. ನಂದಿಬೇವೂರ, ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ, ಶಾಂತೇಶ ಗಾಮನಗಟ್ಟಿ, ಪ್ರೊ. ಮಹಾದೇವ ಕರಿದುರ್ಗಣ್ಣವರ, ರಮೇಶ ಸಿದ್ಧಾಂತಿ, ಡಾ.ಎ.ಎಸ್‌. ಸಾಲಂಕಿ, ಶಾಂತಾ ಸಾಲಂಕಿ, ಮಲ್ಲಿಕಾರ್ಜುನ ಚಿಕ್ಕಮಠ, ಪ್ರಭಾವತಿ ಮೂರಶಿಳ್ಳಿ, ಶಿ.ಮ. ರಾಚಯ್ಯನವರ, ರಾಮಚಂದ್ರ ಧೋಂಗಡೆ ಇದ್ದರು. ಪ್ರಕಾಶ ಎಸ್‌. ಉಡಿಕೇರಿ ಸ್ವಾಗತಿಸಿದರು. ನಾಗರಾಜ ಶೆಟ್ಟಿ ಮತ್ತು ಕೃಷ್ಣ ಜೋಶಿ ಪರಿಚಯಿಸಿದರು. ಅರುಣಾ ನಂದಿಬೇವೂರ ಪ್ರಾಸ್ತಾವಿಸಿದರು. ಬಸವಪ್ರಭು ಹೊಸಕೇರಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ