ಆ್ಯಪ್ನಗರ

ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದು ಉಗ್ರರ ಸಂಹರಿಸಿ ಎಂದ ಯುವಕ

ಪಾಪಿ ಪಾಕಿಸ್ತಾನದ ರುಂಡ ಚೆಂಡಾಡಿ. ಪ್ರತೀಕಾರ ತೀರಿಸಿಕೊಳ್ಳುವರೆಗೂ ನಮಗೆ ಸಮಾಧಾನವಿಲ್ಲಾ ಎಂದು ರಕ್ತದಲ್ಲಿ ಪತ್ರ ಬರೆದು ಗಿರೀಶ್ ಗೌಡ ಎಂಬ ಯುವಕ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ.

Vijaya Karnataka Web 16 Feb 2019, 3:50 pm
ಧಾರವಾಡ: ಪುಲ್ವಾಮದಲ್ಲಿ ಗುರುವಾರ ನಡೆದ ಉಗ್ರದಾಳಿಯಲ್ಲಿ ಹುತಾತ್ಮರಾದ ಯೋಧರ ಸಾವಿಗೆ ಪ್ರತೀಕಾರ ಕೈಗೊಳ್ಳುವಂತೆ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ.
Vijaya Karnataka Web Terror


ಉಗ್ರರ ಕೃತ್ಯ ವಿರುದ್ಧ ಜನಾಕ್ರೋಶವಿದ್ದು, ಧಾರವಾಡ ಮೂಲದ ಯುವಕ ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಅವಶ್ಯಕತೆ ಬಿದ್ದರೆ ನಮ್ಮ ರಕ್ತ ಹರಿಸಲು ಸಿದ್ದರಿದ್ದೇವೆ. ನಮ್ಮ ರಕ್ತ ಕುದಿಯುತ್ತಿದೆ. ಪಾಪಿ ಪಾಕಿಸ್ತಾನದ ರುಂಡ ಚೆಂಡಾಡಿ. ಪ್ರತೀಕಾರ ತೀರಿಸಿಕೊಳ್ಳುವರೆಗೂ ನಮಗೆ ಸಮಾಧಾನವಿಲ್ಲಾ ಎಂದು ರಕ್ತದಲ್ಲಿ ಪತ್ರ ಬರೆದು ಗಿರೀಶ್ ಗೌಡ ಎಂಬ ಯುವಕ ಮೋದಿಗೆ ಮನವಿ ಮಾಡಿಕೊಂಡಿದ್ದಾರೆ.

ಪಾಕ್‌ ವಿರುದ್ಧ ಯುದ್ಧಕ್ಕೆ ಆಗ್ರಹಿಸಿ ಪ್ರತಿಭಟನೆ
ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ, ವೈಭವ್ ಹಿಂದೂಸ್ತಾನ್ ಟ್ರಸ್ಟ್‌ನಿಂದ ಪ್ರತಿಭಟನೆ ನಡೆಸಲಾಗಿದೆ.

ಉಗ್ರರ ಬಗ್ಗೆ ಮೃದು ಧೋರಣೆ ಬೇಡ, ಯುದ್ಧವೇ ಬೇಕು, ಶತ್ರು ರಾಷ್ಟ್ರ ನಿರ್ನಾಮ ಆಗಬೇಕು. ರಕ್ತಕ್ಕೆ ರಕ್ತ, ಸೇಡಿಗೆ ಸೇಡು ತೀರಿಸಿಕೊಳ್ಳಬೇಕು ಎಂದು ಟ್ರಸ್ಟ್ ಸದಸ್ಯರು ಮಂಡ್ಯದ ಗುಡಿಗೆರೆ ಕಾಲೋನಿಯ ಗುರು ಮನೆ ಬಳಿ ಹೋರಾಟ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ