ಜಿಪಂ ಸಿಇಓ ಬಿ.ಸಿ. ಸತೀಶ ಅವರು ತಮ್ಮ ಸರಕಾರಿ ವಾಹನದಲ್ಲಿ ಮುಖ್ಯ ವೇದಿಕೆ ಪ್ರವೇಶ ದ್ವಾರದಲ್ಲಿ ಪ್ರವೇಶಿಸುವ ಮಾರ್ಗದಲ್ಲಿ ಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಕೆ.ಆರ್. ಗೋವಿಂದಪ್ಪ ಮಧ್ಯೆ ಜಟಾಪಟಿ ನಡೆಯಿತು. ಬಿ.ಸಿ. ಸತೀಶ ಅವರು ಸರಕಾರಿ ವಾಹನದಲ್ಲಿ ಮುಖ್ಯವೇದಿಕೆಯ ವಿಶೇಷ ದ್ವಾರದ ಮೂಲಕ ಪ್ರವೇಶಿಸುವ ಮಾರ್ಗದಲ್ಲಿಪಾಸ್ ಇಲ್ಲದೆ ತೆರಳುತ್ತಿದ್ದನ್ನು ಗಮನಿಸಿದ ಗೋವಿಂದಪ್ಪ ಪಾಸ್ ತೋರಿಸಿ ಒಳಗೆ ಬಿಡುತ್ತೇನೆಂದು ಪಟ್ಟು ಹಿಡಿದ್ದರು. ಆ ಸಂದರ್ಭದಲ್ಲಿ ತಾವು ಅಧಿಕಾರಿ ಎಂದು ಹೇಳಿದರೂ, ಕೇಳದ ಕಾರಣ ಕಾರಿನಿಂದ ಇಳಿದು ಬಂದ ಬಿ.ಸಿ. ಸತೀಶ ಅವರು, ಪೊಲೀಸ್ ಅಧಿಕಾರಿಯನ್ನು ತರಾಟಗೆ ತೆಗೆದುಕೊಂಡರು. ಇದಕ್ಕೆ ಜಗ್ಗದ ಪೊಲೀಸ್ ಅಧಿಕಾರಿ ಕ್ಯಾರೆ ಎನ್ನದೆ, ಪಾಸ್ ತೋರಿಸುವಂತೆ ಪಟ್ಟುಹಹಿಡಿದರು. ಕೊನೆಗೆ ಸುತ್ತಲಿನ ಪೊಲೀಸ್ ಅಧಿಕಾರಿಗಳು ಸತೀಶ ಅವರನ್ನು ಸಮಾಧಾನಪಡಿಸಿ ಒಳ ಕಳಿಸಿದ ಘಟನೆ ನಡೆಯಿತು.
ಜಿಪಂ ಸಿಇಒ,ಪೊಲೀಸರ ಮಧ್ಯೆ ಜಟಾಪಟಿ
ಜಿಪಂ ಸಿಇಓ ಬಿ.ಸಿ. ಸತೀಶ ಅವರು ತಮ್ಮ ಸರಕಾರಿ ವಾಹನದಲ್ಲಿ ಮುಖ್ಯ ವೇದಿಕೆ ಪ್ರವೇಶ ದ್ವಾರದಲ್ಲಿ ಪ್ರವೇಶಿಸುವ ಮಾರ್ಗದಲ್ಲಿ ಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಕೆ.ಆರ್. ಗೋವಿಂದಪ್ಪ ಮಧ್ಯೆ ಜಟಾಪಟಿ ನಡೆಯಿತು. ಬಿ.ಸಿ. ಸತೀಶ
Vijaya Karnataka 6 Jan 2019, 5:51 pm