ಆ್ಯಪ್ನಗರ

ನೇಪಾಳಿಗರು 7 ಭಾರತೀಯರನ್ನ ಗುಂಡಿಕ್ಕಿ ಕೊಂದರು ಅನ್ನುವುದು ಫೇಕ್‌, ಈ ಫೋಟೊಗಳ ಅಸಲಿಯತ್ತೇನು?

ಸತ್ಯಾಂಶದ ಬದಲು ಫೇಕ್‌ ನ್ಯೂಸ್‌ಗಳಿಗೆ ಜನರು ಮಾರು ಹೋಗುತ್ತಿದ್ದಾರೆ. ಇದೀಗ ಭಾರತ ಹಾಗೂ ನೇಪಾಳದ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಗಡಿಯಲ್ಲಿ ಮೂರು ಜನ ನೇಪಾಳಿಗರು ಸಾವನಪ್ಪಿದ್ದಾರೆ ಹಾಗೂ 7 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಅನ್ನುವ ಫೇಕ್‌ ನ್ಯೂಸ್‌ವೊಂದು ಹರಿದಾಡುತ್ತಿದೆ. ಹಾಗಾದರೆ ಇದರ ಸತ್ಯಾಂಶವೇನು ಇಲ್ಲಿದೆ.

TIMESOFINDIA.COM 7 Jul 2020, 9:41 am
ಸೋಶಿಯಲ್‌ ಮೀಡಿಯಾದ ಹವಾ ಹೆಚ್ಚಾಗುತ್ತಿದ್ದಂತೆ, ಫೇಕ್ ನ್ಯೂಸ್‌ಗಳು ಕೂಡ ಅಬ್ಬರಿಸಿ ಬೊಬ್ಬಿರಿತಿದೆ. ನಾವು ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಫೋಟೊಗಳು, ವಿಡಿಯೋಗಳು ಆಲ್‌ಮೋಸ್ಟ್‌ ಸುದ್ದಿಗಳು ಸುಳ್ಳಾಗಿರುತ್ತೆ ಅಂದರೂ ತಪ್ಪಾಗಲ್ಲ. ಅಷ್ಟಕ್ಕೂ ಈ ಫೇಕ್‌ ನ್ಯೂಸ್‌ ಬಗ್ಗೆ ಹೇಳೋಕೆ ಕಾರಣ, ಭಾರತ ಹಾಗೂ ನೇಪಾಳದ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಗಡಿಯಲ್ಲಿ ಮೂರು ಜನ ನೇಪಾಳಿಗರು ಸಾವನಪ್ಪಿದ್ದಾರೆ ಹಾಗೂ 7 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಅನ್ನುವ ಫೇಕ್‌ ನ್ಯೂಸ್‌.
Vijaya Karnataka Web 76813841


ಹೌದು, ಟ್ವಿಟರ್‌ ಬಳಕೆದಾರ ಇರ್ಮಕ್‌ ಇದೋಯಾ ಎಂಬುವವನು ಎರಡು ಫೋಟೊಗಳನ್ನ ಟ್ವೀಟ್‌ ಮಾಡಿ, ಭಾರತ ನಡೆಸಿದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯಿಂದಾಗಿ ನೇಪಾಳದ ಮೂವರು ನಾಗರಿಕರ ಸಾವಿಗೆ ಕಾರಣರಾಗಿದ್ದಾರೆ ಎಂದು ಬರೆದುಕೊಂಡಿದ್ದಾನೆ. ಅಲ್ಲದೇ ಇದಕ್ಕೆ ಪ್ರತಿದಾಳಿ ನಡೆಸಿದ ನೇಪಾಳ ಸೇನೆ, ಏಳು ಭಾರತೀಯ ಯೋಧರನ್ನ ಕೊಂದಿದೆ ಎಂದು ಬರೆದಿದ್ದಾನೆ. ಒಂದು ಕಡೆ ನೇಪಾಳ ಸೈನಿಕರ ಫೋಟೊ ಬಳಸಿಕೊಂಡೆ, ಮತ್ತೊಂದು ಕಡೆ ಭಾರತೀಯ ಯೋಧರು ಹುತಾತ್ಮರಾಗಿ ಮಲಗಿರುವ ಫೊಟೋಗಳನ್ನ ಬಳಸಿದ್ದಾನೆ.



ಸತ್ಯಾಂಶ ಏನು..?
ಸದ್ಯ ನೇಪಾಳ ಹಾಗೂ ಭಾರತ ನಡುವೆ ಸಣ್ಣ ಮಟ್ಟದ ಕ್ಯಾತೆ ಮುಂದುವರಿದಿದ್ದರು. ಇಂತಹ ಘಟನೆ ನಡೆದಿಲ್ಲ ಎನ್ನುವುದು ಸ್ಪಷ್ಟ. ಈ ಟ್ವಿಟರ್‌ ಬಳಕೆದಾರ ಹಳೆಯ ಫೋಟೊಗಳನ್ನ ಬಳಸಿ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ.

ಬೇಹುಗಾರಿಕೆ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಇಸ್ರೇಲ್‌, ಇರಾನ್‌ ಮೇಲೆ ಮತ್ತೊಂದು ಕಣ್ಣು?

ವಿಕೆಗೆ ಸಿಕ್ಕ ಸತ್ಯಾಂಶ ಏನು?
ಎರಡು ಫೋಟೊಗಳ ಸತ್ಯಾಂಶವನ್ನ ಕಂಡುಹಿಡಿಯಲು ಮುಂದಾದಾಗ ನಿಜಕ್ಕೂ ಟ್ವಿಟರ್‌ ಬಳಕೆದಾರನ ಫೇಕ್‌ ಮುಖ ಬಯಲಾಗಿದೆ.

ಮೊದಲ ಫೋಟೊ ಏನು ಹೇಳುತ್ತೆ?
ಮೊದಲ ಫೋಟೊ ನೇಪಾಳದ ಯೋಧರು ಗಸ್ತು ತಿರುಗುವ ಫೋಟೋ ಆಗಿದೆ. ಆದರೆ ಇದು ಹಲವು ವರ್ಷಗಳ ಹಿಂದಿನ ಅಂದರೆ ಮೇ 20ರ 2020ರ ಫೋಟೊ ಎಂದು ತಿಳಿದುಬಂದಿದೆ. ನೇಪಾಳದ ಟೈಮ್ಸ್‌ ಈ ಫೋಟೊವನ್ನ ಬಳಸಿಕೊಂಡಿದ್ದು, ಎಎಫ್‌ಪಿ ಭಾರತ ಹಾಗೂ ನೇಪಾಳದ ಗಡಿಯಲ್ಲಿರುವ ಕಾಳಿ ನದಿ ಸಮೀಪ ಗಸ್ತು ತಿರುಗುವ ಸಂದರ್ಭ ತೆಗೆದಂತಹ ಚಿತ್ರವಾಗಿದೆ. ಇಂತಹ ಹಲವು ಫೊಟೋಗಳು ಇವರ ಗ್ಯಾಲರಿಯಲ್ಲಿದೆ.

ಎರಡನೇ ಚಿತ್ರ ಹೇಳುವುದೇನು!
ಎರಡನೇ ಚಿತ್ರ ಟ್ವಿಟರ್‌ ಬಳಕೆದಾರ ಹೇಳುವಂತೆ ಭಾರತೀಯ ಯೋಧರು ನೇಪಾಳದ ಕ್ಯಾತೆಯಿಂದ ಮರಣ ಹೊಂದಿದ್ದಲ್ಲ. ಮೇ 13, 2015ರಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ನಿಂದ ಅಸ್ಸಾಂ ರೈಫಲ್ಸ್‌ನ 7 ಯೋಧರು ಹುತಾತ್ಮರಾಗಿದ್ದರು. ನಾಗಾ ಉಗ್ರರ ದುಷ್ಕೃತ್ಯದಲ್ಲಿ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯಲ್ಲಿ ನಾಗಾ ಉಗ್ರರು ಕೂಡ ಸಾವನಪ್ಪಿದ್ದರು. ಸದ್ಯ ಆತ ಮಾಡಿದ ಟ್ವೀಟ್‌ ಸುಳ್ಳು ಎಂದು ತಿಳಿದುಬಂದಿದೆ. ಭಾರತ ಹಾಗೂ ನೇಪಾಳದ ನಡುವೆ ಇಂತಹ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ ಎಂದು ತಿಳಿದುಬಂದಿದೆ. ಸುಖಾಸುಮ್ಮನೆ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ.

ಪಾಕಿಸ್ತಾನ, ಚೀನಾ ವಿರುದ್ಧ ಸಿಡಿದೆದ್ದ ಪಾಕ್‌ ಆಕ್ರಮಿತ ಕಾಶ್ಮೀರದ ಜನರು, ಪ್ರತಿಭಟನೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ