ಆ್ಯಪ್ನಗರ

ದಿಲ್ಲಿಯಲ್ಲಿ ಮಳೆ ಬಂದ್ರೆ ಬಸ್‌ನಲ್ಲಿ ನೀರು ನುಗ್ಗುತ್ತಾ..? ಕೇಜ್ರಿ ಸರ್ಕಾರ ಟೀಕಿಸುವ ಭರದಲ್ಲಿ 'ಕೈ' ಎಡವಟ್ಟು..?

ಎಲ್ಲಿಯದೋ ವಿಡಿಯೋ, ಇನ್ಯಾವುದೋ ಸ್ಥಳಕ್ಕೆ ಲಿಂಕ್ ಮಾಡಿ ಪ್ರಕಟಿಸಿಬಿಟ್ಟರೆ ಅದರಿಂದ ಶುರುವಾಗುವ ಗೊಂದಲಗಳು ಒಂದೆರಡಲ್ಲ. ಈ ತಪ್ಪನ್ನು ದೊಡ್ಡವರೇ ಮಾಡಿದರೆ ಎಡವಟ್ಟು ಇನ್ನಷ್ಟು ತೀವ್ರವಾಗುತ್ತದೆ.

TIMESOFINDIA.COM 14 Aug 2020, 12:57 pm

ಹೈಲೈಟ್ಸ್‌:

  • ಚಲಿಸುತ್ತಿದ್ದ ಬಸ್‌ನೊಳಗೆ ನುಗ್ಗುವ ನೀರು
  • ಇದು ದಿಲ್ಲಿಯ ದೃಶ್ಯ ಎಂದು ವಾದಿಸಿದ್ದ ಕಾಂಗ್ರೆಸ್
  • ಅಸಲಿಗೆ ಅದು ದಿಲ್ಲಿಯ ದೃಶ್ಯ ಅಲ್ಲವೇ ಅಲ್ಲ..!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web fake head
ಬಸ್‌ ಸಾಗುವ ವೇಳೆ, ರಸ್ತೆಯಲ್ಲಿ ನಿಂತಿದ್ದ ನೀರು ಬಸ್‌ನೊಳಗೆ ನುಗ್ಗುವ ವಿಡಿಯೋ ಒಂದನ್ನು ದಿಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ಅಭಿಷೇಕ್ ದತ್ ಅವರು ಪೋಸ್ಟ್ ಮಾಡಿದ್ದರು. ಇದು ದಿಲ್ಲಿಯ ಜನರ ಪಾಡು ಎಂದು ಟ್ವಿಟ್ಟರ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದರು.

ಇದೇ ವಿಡಿಯೋವನ್ನು ಮುಂದಿಟ್ಟುಕೊಂಡು ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನೂ ಅಭಿಷೇಕ್ ದತ್ ತರಾಟೆಗೆ ತೆಗೆದುಕೊಂಡಿದ್ದರು. ಪ್ರವಾಹದ ನಡುವೆ ಟೀ ಹಾಗೂ ಸ್ನ್ಯಾಕ್ಸ್ ಸೇವಿಸುತ್ತಿರುವ ದೃಶ್ಯ ಎಂದು ಪತ್ರಿಕೆಗಳಲ್ಲಿ ಫುಲ್ ಪೇಜ್ ಜಾಹೀರಾತು ಕೊಡಿ ಎಂದು ಲೇವಡಿ ಕೂಡಾ ಮಾಡಿದ್ದರು.

ದಿಲ್ಲಿ ಯುವ ಕಾಂಗ್ರೆಸ್‌ನ ಪರಿಶೀಲಿಸಿದ ಟ್ವಿಟ್ಟರ್ ಖಾತೆಯಲ್ಲೂ ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ನಿಮ್ಮ ಅಭಿವೃದ್ಧಿ ಯೋಜನೆಗಳು ಮಳೆ ನೀರಲ್ಲಿ ಮುಳುಗಿಹೋಗ್ತಿವೆ. ದಿಲ್ಲಿಯಲ್ಲಿ ಕಳೆದ 6 ವರ್ಷಗಳಲ್ಲಿ ಲೂಟಿ ಹಾಗೂ ಭ್ರಷ್ಟಾಚಾರ ಹೊರತುಪಡಿಸಿದರೆ ಇನ್ನೇನೂ ಆಗಿಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಬರೆದುಕೊಳ್ಳಲಾಗಿತ್ತು.


ರಾಮಮಂದಿರಕ್ಕೆ ಭೂಮಿ ಪೂಜೆ ನಡೆದ ದಿನ ಬ್ರಿಟನ್ ಪ್ರಧಾನಿ ರಾಮನಿಗೆ ಅಭಿಷೇಕ ಮಾಡಿದ್ರಾ..?!

ಈ ವಿಡಿಯೋದ ಸತ್ಯಾಂಶವೇನು..?

ಹಾಗೆ ನೋಡಿದ್ರೆ ಈ ವಿಡಿಯೋ ದಿಲ್ಲಿ ದೃಶ್ಯಾವಳಿ ಅಲ್ಲವೇ ಅಲ್ಲ. ಇದು ರಾಜಸ್ಥಾನದ ಜೈಪುರದ ದೃಶ್ಯ.

ಪತ್ತೆ ಮಾಡಿದ್ದು ಹೇಗೆ..?

ದಿಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್‌ ದತ್‌ ಅವರ ಟ್ವೀಟ್‌ಗೆ ಉತ್ತರಿಸಿದ ಹಲವು ಮಂದಿ, ಇದು ದಿಲ್ಲಿಯ ದೃಶ್ಯಗಳಲ್ಲ, ಜೈಪುರದ್ದು ಎಂದು ವಾದಿಸಿದರು. ಇದೇ ಆಧಾರದ ಮೇಲೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ಖಾಸ್‌ಖಬರ್ ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿ ಆಗಸ್ಟ್‌ 11, 2020ರಂದು ಅಪ್‌ಲೋಡ್ ಮಾಡಲಾಗಿದ್ದ ವಿಡಿಯೋ ಒಂದು ಲಭ್ಯವಾಯ್ತು.

ನ್ಯೂಜಿಲೆಂಡ್ ಕೊರೊನಾ ಮುಕ್ತವಾಯ್ತಾ? ಅಲ್ಲಿನ ಪ್ರಧಾನಿ ಹಿಂದೂ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ರಾ..?!

ಜೈಪುರದಲ್ಲಿ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಸಾಗುವ ಬಸ್‌ಗಳ ಒಳಗೆ ನೀರು ನುಗ್ಗುತ್ತಿದೆ ಎಂಬ ಟೈಟಲ್ ಅಡಿ ಪ್ರಕಟಿಸಲಾಗಿದ್ದ ದೃಶ್ಯಗಳನ್ನೇ ಅಭಿಷೇಕ್ ದತ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದಿಲ್ಲಿಯ ದೃಶ್ಯ ಎಂದು ವಾದಿಸಿ ಪೋಸ್ಟ್‌ ಮಾಡಿದ್ದರು. ಆಗಸ್ಟ್‌ 11, 2020ರ ಪತ್ರಿಕಾ ವರದಿಗಳಲ್ಲೂ ಇದು ಜೈಪುರದ ದೃಶ್ಯ ಅನ್ನೋದು ಸಾಬೀತಾಯ್ತು.

ಹಾಗೆ ನೋಡಿದ್ರೆ, ಭಾರೀ ಮಳೆಯಿಂದಾಗಿ ದಿಲ್ಲಿಯ ಹಲವೆಡೆ ರಸ್ತೆಗಳಲ್ಲಿ ನೀರು ನಿಂತದ್ದು ಸತ್ಯವೇ ಆದ್ರೂ, ಬಸ್‌ಗೆ ನೀರು ನುಗ್ಗುವ ಈ ವಿಡಿಯೋ ಮಾತ್ರ ಜೈಪುರದ್ದು. ಇನ್ನು ದಿಲ್ಲಿಯಲ್ಲಿ ಸೃಷ್ಟಿಯಾದ ಪ್ರವಾಹ ಪರಿಸ್ಥಿತಿ ದೃಶ್ಯಗಳನ್ನು ಎಎನ್‌ಐ ಕೂಡಾ ಸೆರೆ ಹಿಡಿದಿದೆ.


ಟೈಮ್ಸ್‌ ಫ್ಯಾಕ್ಟ್‌ ಚೆಕ್‌ನ ಸಮಗ್ರ ಅಧ್ಯಯನದ ಬಳಿಕ ಹೇಳೋದಾದ್ರೆ, ಬಸ್‌ನಲ್ಲಿ ನೀರು ನುಗ್ಗುವ ಜೈಪುರದ ದೃಶ್ಯವನ್ನು ದಿಲ್ಲಿಯ ದೃಶ್ಯ ಎಂದು ತಿರುಚಲಾಗಿತ್ತು.

'ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ನೆರವಾದ ನಿಮಗೆ ಧನ್ಯವಾದ': ಯುಪಿ ಸಿಎಂಗೆ ಪತ್ರ ಬರೆದಿದ್ರಾ ಮೋದಿ..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ