ಮುಂಡರಗಿ:ಗದಗಜಿಲ್ಲೆ ಹಾಗೂ ಹುಬ್ಬಳ್ಳಿ ಎಪಿಎಂಸಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಇಧಿ-ಪೇಮೆಂಟ್ ವ್ಯವಸ್ಥೆ ಕೈಬಿಡುವಂತೆ ಆಗ್ರಹಿಸಿ ಇಲ್ಲಿಯ ಎಪಿಎಂಸಿ ವರ್ತಕರ ಸಂಘದ ಸದಸ್ಯರು ಶನಿವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ರಾಜ್ಯದ ಎಲ್ಲ ಎಪಿಎಂಸಿ ಮಾರುಕಟ್ಟೆಗಳಲ್ಲಿ ಇ-ಪೇಮೆಂಟ್ ವ್ಯವಸ್ಥೆ ಬೇಡ, ರಾಷ್ಟ್ರೀಯ ಇ-ಮಾರ್ಕೆಟಿಂಗ್ ಅವಶ್ಯಕತೆ ಇಲ್ಲ, ಎಂದು ದೇಶ ಒಂದು ತೆರಿಗೆ ಒಂದು ಜಿಎಸ್ಟಿ ಮಾದರಿಯಂತೆ ಎಪಿಎಂಸಿಯಲ್ಲೂ ಕೂಡಾ ಒಂದು ದೇಶ ಒಂದು ಸೆಸ್ ಜಾರಿಯಾಗಬೇಕು. ಕೆಲವು ಕಡೆಗೆ ಶೇ. 0.85, ಶೇ. 0.90, ಶೇ. 0.75 ಹಾಗೂ ಶೇ.100 ಇದ್ದು ಕರ್ನಾಟಕದಲ್ಲಿ ಶೇ. 1.5 ರಷ್ಟು ಸೆಸ್ ಇದೆ. ಇದು ಒಂದೇ ರೀತಿಯಲ್ಲಿ ಸೆಸ್ ಆಕರಣೆ ಮಾಡುವಂತಾಗಬೇಕು ಎಂದು ಒತ್ತಾಯಿಸಲಾಗಿದೆ.
ಹೋರಾಟ ವೇದಿಕೆ ಬೆಂಬಲ: ವರ್ತಕರ ನ್ಯಾಯಯುತ ಬೇಡಿಕೆಗೆ ತಾಲೂಕಾ ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಬೆಂಬಲಿಸಿ ವರ್ತಕರ ಜತೆಗೆ ಪಾಲ್ಗೊಂಡು ಸರಕಾರ ಇ- ಪೇಮೆಂಟ್ ಜಾರಿಯಿಂದ ಆಗುವ ಅನಾನುಕೂಲತೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ವೀರಣ್ಣ ಬೇವಿನಮರದ, ಉಪಾಧ್ಯಕ್ಷ ಗೌತಮಚಂದ್ ಚೋಪ್ರಾ, ಕಾರ್ಯದರ್ಶಿ ವೆಂಕಟೇಶ ಹೆಗ್ಗಡಾಳ, ಬಸವರಾಜ ಗೋಡಿ, ಎನ್.ಎಚ್.ಇಲ್ಲೂರ, ಎ.ಕೆ.ಬೆಲ್ಲದ, ಕೊಟ್ರೇಶ ಅಂಗಡಿ, ಪವನ ಚೋಪ್ರಾ,ಪ್ರಶಾಂತ ತಾವರಗೆರೆ, ರಾಜಣ್ಣ ಹೆಗಡಾಳ, ಪಾರಸ್ಮಲ್ ಮೆಹತಾ, ಈಶಪ್ಪ ಬೆಟಗೇರಿ, ಮುದುಕೇಶ ಬೀಡನಾಳ, ಬಿಸನಳ್ಳಿ, ಆರ್.ಆರ್.ಹೆಗ್ಗಡಾಳ, ವೀರಣ್ಣ ಚಳ್ಳಮರದ, ಎಸ್.ಆರ್.ಹಿರೇಮಠ, ಕೆ.ಎಚ್.ದಂಡಿನ, ನಾಗರಾಜ ಹೆಗ್ಗಡಾಳ, ಕಾಶೀಂಸಾಬ ಹರಿವಾಣದ, ರಂಗನಾಥ ಹುಲಗಿ ಇತರರು ಪಾಲ್ಗೊಂಡಿದ್ದರು.
ತಹಸೀಲ್ದಾರ ಪರವಾಗಿ ಉಪತಹಸೀಲ್ದಾರ ರಮೇಶ ಬಾಲೆಹೊಸೂರ ಮನವಿ ಸ್ವೀಕರಿಸಿದರು.