ಆ್ಯಪ್ನಗರ

ಅಕ್ರಮ-ಸಕ್ರಮ ಹಿಡುವಳಿದಾರರನ್ನು ರಕ್ಷಿಸಿ

ಗದಗ : ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸಳ್ಳಿ ಮತ್ತು ಕಡಕೋಳ ಗ್ರಾಮದ ಅಕ್ರಮ-ಸಕ್ರಮ ಭೂ ಹಿಡುವಳಿದಾರರ ಹಿತರಕ್ಷ ಣೆ ಮಾಡುವಂತೆ ಶುಕ್ರವಾರ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 30 Mar 2019, 5:00 am
ಗದಗ : ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸಳ್ಳಿ ಮತ್ತು ಕಡಕೋಳ ಗ್ರಾಮದ ಅಕ್ರಮ-ಸಕ್ರಮ ಭೂ ಹಿಡುವಳಿದಾರರ ಹಿತರಕ್ಷ ಣೆ ಮಾಡುವಂತೆ ಶುಕ್ರವಾರ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web
ಅಕ್ರಮ-ಸಕ್ರಮ ಹಿಡುವಳಿದಾರರನ್ನು ರಕ್ಷಿಸಿ


ನಾವು 2-3 ತಲೆಮಾರಿನಿಂದ ಹೊಸಳ್ಳಿ ಮತ್ತು ಕಡಕೋಳದಲ್ಲಿದ್ದು ಈ ಭೂಮಿ ಬಿಟ್ಟು ನಮ್ಮ ಬದುಕಿನ ಆಸರೆಗೆ ಯಾವುದೇ ಭೂಮಿ ಇಲ್ಲ. ಈ ಸಂಬಂಧ ಸರಕಾರದ ಆದೇಶದನ್ವಯ ನಾವೆಲ್ಲರೂ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಪ್ರತಿ 15 ದಿವಸಕ್ಕೊಮ್ಮೆ ಅಲೆದಾಡಿದರೂ ಶಿರಹಟ್ಟಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಯವರು ನಮ್ಮ ಅರ್ಜಿಗಳನ್ನು ಕುಂಟು ನೆಪ ಹೇಳಿ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಮತ್ತೊಮ್ಮೆ ಅರ್ಜಿ ಸಲ್ಲಿಸಲು ಹೋದಾಗ ಅರ್ಜಿ ಸಲ್ಲಿಸುವ ದಿನಾಂಕ ಮುಗಿದೆ ಎಂದು ಹೇಳಿ ನಮ್ಮನ್ನು ವಂಚಿಸಿದ್ದಾರೆ. ಆದರಿಂದ ನಮ್ಮ ಅರ್ಜಿಯನ್ನು ಮಾನ್ಯ ಮಾಡಿ ಅಲ್ಲಿನ ಅರಣ್ಯ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ತಪ್ಪಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.

ರೈತ ಮುಖಂಡ ಕೆ.ಜಿ.ಶಾಂತಸ್ವಾಮಿಮಠ, ಹನಮಂತಪ್ಪ ಗೊಜನೂರ, ರಮೇಶ ಬಂಡಿವಡ್ಡರ, ಮುಸಲೆವ್ವ ಸಂದಿಮನಿ, ತಿಮ್ಮವ್ವ ಬಂಡಿವಡ್ಡರ, ಹುಚ್ಚಪ್ಪ ಬಂಡಿವಡ್ಡರ, ಹುಲಿಗೆವ್ವ ಬಂಡಿವಡ್ಡರ, ಗಂಗವ್ವ ಹಾವೇರಿ, ಶರಣಪ್ಪ ನರ್ತಿ, ಮಜಪ್ಪ ಕೊಪ್ಪದ, ರಮೇಶ ನರ್ತಿ, ರವಿ ಯರೇಮನಿ, ರಾಮಣ್ಣ ಮೂಕಬಸಪ್ಪನವರ, ಪರಮೇಶ ಶಿವಪ್ಪ ಹೊಸಳ್ಳಿ, ಮಂಜಪ್ಪ ಗೊಜನೂರ, ವಿರುಪಾಕ್ಷ ಸ್ವಾಮಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ