ಆ್ಯಪ್ನಗರ

1.50 ಲಕ್ಷ ಮೌಲ್ಯದ ಈರುಳ್ಳಿ ಕಳವು

ರೋಣ (ಗದಗ): ಇಲ್ಲಿನ ರೈತನ ಜಮೀನಿನಲ್ಲಿಬೆಳೆದಿದ್ದ 1.5 ಲಕ್ಷ ರೂ. ಮೌಲ್ಯದ 35-40 ಚೀಲದಷ್ಟು ಈರುಳ್ಳಿಯನ್ನು ಕಿತ್ತು ಕಳವು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 30 Nov 2019, 5:31 pm
ರೋಣ (ಗದಗ): ಇಲ್ಲಿನ ರೈತನ ಜಮೀನಿನಲ್ಲಿಬೆಳೆದಿದ್ದ 1.5 ಲಕ್ಷ ರೂ. ಮೌಲ್ಯದ 35-40 ಚೀಲದಷ್ಟು ಈರುಳ್ಳಿಯನ್ನು ಕಿತ್ತು ಕಳವು ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web 1 50 lakh worth of onions stolen
1.50 ಲಕ್ಷ ಮೌಲ್ಯದ ಈರುಳ್ಳಿ ಕಳವು


ರೈತ ಗುರುಬಸಯ್ಯ ಕಳಕಯ್ಯ ಪ್ರಭುಸ್ವಾಮಿಮಠ ಎಂಬುವವರು ದ್ಯಾಮವ್ವನ ಕೆರೆ ರಸ್ತೆಯಲ್ಲಿಸ್ಥಳೀಯ ರೈತರೊಬ್ಬರ 1.5 ಎಕರೆ ಜಮೀನನ್ನು 1.80 ಲಕ್ಷ ರೂ.ಗಳಿಗೆ ಬಡ್ಡಿಯಂತೆ ವ್ಯವಸಾಯ ಮಾಡುತ್ತಿದ್ದರು. ಈರುಳ್ಳಿ ಬೆಳೆಯಲು ಸುಮಾರು 50 ಸಾವಿರ ಖರ್ಚು ಸಹ ಮಾಡಿದ್ದರು. ಇನ್ನೇನು ಬೆಳೆ ಕೈಗೆ ಸಿಗುವ ಹೊತ್ತಿಗೆ ಕಳೆದ ಮಂಗಳವಾರ ರಾತ್ರಿ ಕಳ್ಳರು ಕೈಚಳಕ ತೋರಿದ್ದಾರೆ.

5-6 ಜನರ ತಂಡ ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದೆ. ಜತೆಗೆ 25 ಕೆ.ಜಿ.ಯಷ್ಟು ಮೆಣಸಿನಕಾಯಿ ಸಹ ಕಳವು ಮಾಡಲಾಗಿದೆ. ಮಾರುಕಟ್ಟೆಯಲ್ಲಿಈರುಳ್ಳಿಗೆ ಸದ್ಯ ಉತ್ತಮ ಬೆಲೆಯಿದೆ. ಹಾಕಿದ ಬಂಡವಾಳ ಸೇರಿದಂತೆ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಮಾಡಿದ ಖರ್ಚು ಇಲ್ಲ, ಬೆಳೆಯೂ ಇಲ್ಲದೆ ಕಂಗಾಲಾಗಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ