ಆ್ಯಪ್ನಗರ

10 ಸಾವಿರ ರೂ.ಮಾಸಾಶನ ನೀಡಿ

ಗದಗ: ನಿವೃತ್ತ ಹಾಗೂ ಸಾರಿಗೆ ಸಂಸ್ಥೆಯ ನೌಕರರ ನಾನಾ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಸಾರಿಗೆ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 11 Jan 2020, 5:00 am
ಗದಗ: ನಿವೃತ್ತ ಹಾಗೂ ಸಾರಿಗೆ ಸಂಸ್ಥೆಯ ನೌಕರರ ನಾನಾ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಸಾರಿಗೆ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web 10 thousand rs give massachan
10 ಸಾವಿರ ರೂ.ಮಾಸಾಶನ ನೀಡಿ


ಚುನಾವಣೆ ಪೂರ್ವದಲ್ಲಿನಿವೃತ್ತ ಸಾರಿಗೆ ನೌಕರರಿಗೆ ಮಾಸಿಕ 10 ಸಾವಿರ ರೂ.ಮಾಸಾಶನ ಮತ್ತು ಆರೋಗ್ಯ ವಿಮೆ ನೀಡುವ ಭರವಸೆ ನೀಡಲಾಗಿದೆ. ಆದರೆ ಅದು ಈರೆಗೂ ಈಡೇರಿಲ್ಲ. ಇಲ್ಲಿಯವರೆಗೂ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರಿಗೆ ಭದ್ರತೆಗೆ ಯಾವುದೇ ರೀತಿಯಲ್ಲಿಸೌಲಭ್ಯ ನೀಡಿಲ್ಲ. ಸಂಬಳದಲ್ಲಿಕಡಿತಗೊಳಿಸಿದ ಇಪಿಎಫ್‌ ಹಣದಿಂದ ಬರತಕ್ಕ ಬಡ್ಡಿಯ ರೂಪದ ಆದಾಯದಲ್ಲಿಮಾಸಿಕ 1 ಸಾವಿರದಿಂದ 2500 ರೂ.ಮಾಸಾಶನ ಬರುತ್ತಿದೆ. ಈ ಮೊತ್ತದ ಹಣದಲ್ಲಿಜೀವನ ನಿರ್ವಹಣೆ ಕಷ್ಟಕರವಾಗಿದೆ. ನಿವೃತ್ತಿಯ ನಂತರ ವಯೋ ಸಹಜ ಕಾಯಿಲೆಗಳಾದ ಬಿಪಿ, ಸಕ್ಕರೆ ಕಾಯಿಲೆಗಳಿಗೆ ಔಷಧಿಗಾಗಿಯೇ ತಿಂಗಳಿಗೆ ಐದುನೂರು ರೂ.ಗಳು ಖರ್ಚಾಗಿ, ನಂತರ ಸಂಸಾರ ನಿಭಾಯಿಸುವುದು ಕಷ್ಟಕರವಾಗಿದೆ. ಈಗಾಗಲೇ ತಮಿಳುನಾಡಿನಲ್ಲಿರಾಜ್ಯ ಸರಕಾರದಿಂದ ಮಾಸಾಶನ ಕೊಡುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿಸರಕಾರಿ ನೌಕರರೆಂದು ಘೋಷಣೆ ಮಾಡಿರುತ್ತಾರೆ. ತಾವುಗಳು ತಿಳಿಸಿದ ಹಾಗೆ ಕನಿಷ್ಠ 10 ಸಾವಿರ ಮಾಸಾಶನ ಮತ್ತು ವೈದ್ಯಕೀಯ ಸೌಲಭ್ಯದ ಜತೆಗೆ ನಿವೃತ್ತ ಸಾರಿಗೆ ನೌಕರರಿಗೆ ಬಿಪಿಎಲ್‌ ರೇಶನ್‌ ಕಾರ್ಡ್‌ ಸೌಲಭ್ಯ ಒದಗಿಸಿಕೊಡಲು ಮನವಿ ಮೂಲಕ ಆಗ್ರಹಿಸಿದರು.

ರಸ್ತೆ ಸಾರಿಗೆ ಸಂಸ್ಥೆ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಎಲ್‌.ಎ.ಕಿರೇಸೂರ, ಅಧ್ಯಕ್ಷ ಸಿ.ಎಸ್‌. ಅಳಗವಾಡಿ, ಪ್ರಧಾನಕಾರ್ಯದರ್ಶಿ ಸಿ.ಎ.ಪುರದ, ಸಿ.ಎಂ.ಪಾಟೀಲ, ಉಪಾಧ್ಯಕ್ಷ ಬಿ.ಎಸ್‌.ಹಿರೇಮಠ, ವಿ.ಎಸ್‌.ನಂದಿಕೋಲಮಠ, ವೈ.ಆರ್‌.ವಾಲ್ಮೀಕಿ, ಆರ್‌.ಬಿ.ಗುರಿಕಾರ, ಎಸ್‌.ಎಸ್‌.ಸರ್ವಿ, ಕೆ.ಎಸ್‌. ಹಿರೇಮಠ, ಎನ್‌. ಬಿ. ಖಟವಟೆ, ಬಿ.ಎ.ರಬನಾಳ, ಟಿ.ಬಿ. ಚಕ್ರಸಾಲಿ, ಬಿ.ಎಂ.ನಿಂಬಣ್ಣವರ, ಆರ್‌.ಸಿ.ಕುಲಕರ್ಣಿ, ಎಸ್‌.ಆರ್‌.ಉಮಚಗಿ, ವಿ.ಎಂ. ಕೊಣ್ಣೂರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ