ಆ್ಯಪ್ನಗರ

ಕಾಲುವೆಗಳ ನವೀಕರಣಕ್ಕೆ 2050ಕೋಟಿ

ನರಗುಂದ: ನವೀಲು ತೀರ್ಥದ ಜಲಾಶಯ ವ್ಯಾಪ್ತಿಯಲ್ಲಿಬರುವ ಕಾಲುವೆಗಳ ನವೀಕರಣಕ್ಕೆ ರಾಜ್ಯ ಸರಕಾರ 2050 ಕೋಟಿ ರೂ. ಅನುದಾನಕ್ಕೆ ಸರಕಾರದ ಮೊದಲ ನೀರಾವರಿ ಸಭೆಯಲ್ಲಿಅನುಮೋದನೆ ನೀಡಿದ್ದು ಮೊದಲ ಹಂತದಲ್ಲಿ800 ಕೋಟಿ ರೂ. ಅನುಮೋದನೆ ದೊರೆತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

Vijaya Karnataka 27 Sep 2019, 5:00 am
ನರಗುಂದ: ನವೀಲು ತೀರ್ಥದ ಜಲಾಶಯ ವ್ಯಾಪ್ತಿಯಲ್ಲಿಬರುವ ಕಾಲುವೆಗಳ ನವೀಕರಣಕ್ಕೆ ರಾಜ್ಯ ಸರಕಾರ 2050 ಕೋಟಿ ರೂ. ಅನುದಾನಕ್ಕೆ ಸರಕಾರದ ಮೊದಲ ನೀರಾವರಿ ಸಭೆಯಲ್ಲಿಅನುಮೋದನೆ ನೀಡಿದ್ದು ಮೊದಲ ಹಂತದಲ್ಲಿ800 ಕೋಟಿ ರೂ. ಅನುಮೋದನೆ ದೊರೆತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
Vijaya Karnataka Web 2050 crores for renovation of canals
ಕಾಲುವೆಗಳ ನವೀಕರಣಕ್ಕೆ 2050ಕೋಟಿ


ಇಲ್ಲಿನ ತಮ್ಮ ನಿವಾಸದಲ್ಲಿಕರೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ನರಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿಮುಖ್ಯ ಕಾಲುವೆಗಳ ನವೀಕರಣಗೊಂಡಿದ್ದು ರೈತರ ಜಮೀನಿಗೆ ನೀರು ಹರಿಯಲು ಉಪ ಕಾಲುವೆಗಳ ನವೀಕರಣ ಅವಶ್ಯಕತೆ ಅರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ800ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

ಕೊಳಚೆ ಕಾಲುವೆ ದುರಸ್ಥಿಗೆ 4.73 ಕೋಟಿ, ನರಗುಂದ, ನವಲಗುಂದ ಭಾಗದ ಉಪ ಕಾಲುವೆಗಳ ನವೀಕರಣಕ್ಕೆ 885ಕೋಟಿ ರೂ. ಸೇರಿದಂತೆ ಮೂರು ಹಂತದಲ್ಲಿಅನುದಾನ ಬಿಡುಗಡೆಯಾಗಿದೆ. ಹಿಂದಿನ ಸರಕಾರದಲ್ಲಿಏಳು ಏತ ನೀರಾವರಿ ಯೋಜನೆಗೆ ಅಳವಡಿಸಲಾಗಿದ್ದ ಕಾಂಕ್ರಿಟ್‌ ಪೈಪ್‌ಗಳಲ್ಲಿಸೋರಿಕೆ ಹೆಚ್ಚಾಗಿ ರೈತರ ಜಮೀನುಗಳಿಗೆ ನೀರು ತಲುಪದ ಕಾರಣ ಹದಲಿ, ಗಂಗಾಪುರ, ಖಾನಾಪುರ, ಬನಹಟ್ಟಿ, ರಡ್ಡೇರನಾಗನೂರ, ಅಸೂಟಿ, ಸುರಕೋಡ ಗ್ರಾಮದ ಏತ ನೀರಾವರಿಗೆ ಕಬ್ಬಿಣದ(ಸ್ಟೀಲ್‌) ಪೈಪ್‌ಲೈನ್‌ ಅಳವಡಿಸಲು 80ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

ನರಗುಂದ ಮತಕ್ಷೇತ್ರದ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಅಭಿವೃದ್ಧಿಗೆ 17ಕೊಟಿ ರೂ. ಬಿಡುಗಡೆಯಾಗಿದೆ. ಸಚಿವ ಕಾರಜೋಳ ಅವರಲ್ಲಿಮನವಿ ಮಾಡಿಕೊಂಡಿದ್ದಕ್ಕೆ ಹೆಚ್ಚುವರಿಯಾಗಿ 5ಕೋಟಿ ಬಿಡುಗಡೆಯಾಗಿದೆ. ಜಿಪಂ ರಸ್ತೆಗಳ ಅಭಿವೃದ್ಧಿಗೆ 6ಕೋಟಿ ಅನುದಾನ ಬಿಡುಗಡೆಯಾಗಿದೆ. ಪುರಸಭೆಗೆ 2ಕೋಟಿ ಬಿಡುಗಡೆಯಾಗಿದೆ ಎಂದರು. ಸರಕಾರ ಬಂದು ಒಂದೆ ತಿಂಗಳದಲ್ಲಿಮತಕ್ಷೇತ್ರಕ್ಕೆ 916 ಕೋಟಿ ಅನುದಾನ ಹರಿದು ಬಂದಿದೆ ಎಂದರು.

ಬಿಜೆಪಿ ಮುಖಂಡ ಎ.ಎಂ.ಹುಡೇದ, ಎಂ.ಎಸ್‌.ಪಾಟೀಲ, ವಾಸು ಜೋಗಣ್ಣವರ, ನಿಂಗಣ್ಣ ಗಾಡಿ, ಮುತ್ತನಗೌಡ ಪೋಲೀಸ್‌ ಪಾಟೀಲ ಸೇರಿದಂತೆ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ