ನರಗುಂದ: ನವೀಲು ತೀರ್ಥದ ಜಲಾಶಯ ವ್ಯಾಪ್ತಿಯಲ್ಲಿಬರುವ ಕಾಲುವೆಗಳ ನವೀಕರಣಕ್ಕೆ ರಾಜ್ಯ ಸರಕಾರ 2050 ಕೋಟಿ ರೂ. ಅನುದಾನಕ್ಕೆ ಸರಕಾರದ ಮೊದಲ ನೀರಾವರಿ ಸಭೆಯಲ್ಲಿಅನುಮೋದನೆ ನೀಡಿದ್ದು ಮೊದಲ ಹಂತದಲ್ಲಿ800 ಕೋಟಿ ರೂ. ಅನುಮೋದನೆ ದೊರೆತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಇಲ್ಲಿನ ತಮ್ಮ ನಿವಾಸದಲ್ಲಿಕರೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ನರಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿಮುಖ್ಯ ಕಾಲುವೆಗಳ ನವೀಕರಣಗೊಂಡಿದ್ದು ರೈತರ ಜಮೀನಿಗೆ ನೀರು ಹರಿಯಲು ಉಪ ಕಾಲುವೆಗಳ ನವೀಕರಣ ಅವಶ್ಯಕತೆ ಅರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ800ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಕೊಳಚೆ ಕಾಲುವೆ ದುರಸ್ಥಿಗೆ 4.73 ಕೋಟಿ, ನರಗುಂದ, ನವಲಗುಂದ ಭಾಗದ ಉಪ ಕಾಲುವೆಗಳ ನವೀಕರಣಕ್ಕೆ 885ಕೋಟಿ ರೂ. ಸೇರಿದಂತೆ ಮೂರು ಹಂತದಲ್ಲಿಅನುದಾನ ಬಿಡುಗಡೆಯಾಗಿದೆ. ಹಿಂದಿನ ಸರಕಾರದಲ್ಲಿಏಳು ಏತ ನೀರಾವರಿ ಯೋಜನೆಗೆ ಅಳವಡಿಸಲಾಗಿದ್ದ ಕಾಂಕ್ರಿಟ್ ಪೈಪ್ಗಳಲ್ಲಿಸೋರಿಕೆ ಹೆಚ್ಚಾಗಿ ರೈತರ ಜಮೀನುಗಳಿಗೆ ನೀರು ತಲುಪದ ಕಾರಣ ಹದಲಿ, ಗಂಗಾಪುರ, ಖಾನಾಪುರ, ಬನಹಟ್ಟಿ, ರಡ್ಡೇರನಾಗನೂರ, ಅಸೂಟಿ, ಸುರಕೋಡ ಗ್ರಾಮದ ಏತ ನೀರಾವರಿಗೆ ಕಬ್ಬಿಣದ(ಸ್ಟೀಲ್) ಪೈಪ್ಲೈನ್ ಅಳವಡಿಸಲು 80ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ನರಗುಂದ ಮತಕ್ಷೇತ್ರದ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಅಭಿವೃದ್ಧಿಗೆ 17ಕೊಟಿ ರೂ. ಬಿಡುಗಡೆಯಾಗಿದೆ. ಸಚಿವ ಕಾರಜೋಳ ಅವರಲ್ಲಿಮನವಿ ಮಾಡಿಕೊಂಡಿದ್ದಕ್ಕೆ ಹೆಚ್ಚುವರಿಯಾಗಿ 5ಕೋಟಿ ಬಿಡುಗಡೆಯಾಗಿದೆ. ಜಿಪಂ ರಸ್ತೆಗಳ ಅಭಿವೃದ್ಧಿಗೆ 6ಕೋಟಿ ಅನುದಾನ ಬಿಡುಗಡೆಯಾಗಿದೆ. ಪುರಸಭೆಗೆ 2ಕೋಟಿ ಬಿಡುಗಡೆಯಾಗಿದೆ ಎಂದರು. ಸರಕಾರ ಬಂದು ಒಂದೆ ತಿಂಗಳದಲ್ಲಿಮತಕ್ಷೇತ್ರಕ್ಕೆ 916 ಕೋಟಿ ಅನುದಾನ ಹರಿದು ಬಂದಿದೆ ಎಂದರು.
ಬಿಜೆಪಿ ಮುಖಂಡ ಎ.ಎಂ.ಹುಡೇದ, ಎಂ.ಎಸ್.ಪಾಟೀಲ, ವಾಸು ಜೋಗಣ್ಣವರ, ನಿಂಗಣ್ಣ ಗಾಡಿ, ಮುತ್ತನಗೌಡ ಪೋಲೀಸ್ ಪಾಟೀಲ ಸೇರಿದಂತೆ ಮುಂತಾದವರಿದ್ದರು.
ಇಲ್ಲಿನ ತಮ್ಮ ನಿವಾಸದಲ್ಲಿಕರೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ನರಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿಮುಖ್ಯ ಕಾಲುವೆಗಳ ನವೀಕರಣಗೊಂಡಿದ್ದು ರೈತರ ಜಮೀನಿಗೆ ನೀರು ಹರಿಯಲು ಉಪ ಕಾಲುವೆಗಳ ನವೀಕರಣ ಅವಶ್ಯಕತೆ ಅರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ800ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಕೊಳಚೆ ಕಾಲುವೆ ದುರಸ್ಥಿಗೆ 4.73 ಕೋಟಿ, ನರಗುಂದ, ನವಲಗುಂದ ಭಾಗದ ಉಪ ಕಾಲುವೆಗಳ ನವೀಕರಣಕ್ಕೆ 885ಕೋಟಿ ರೂ. ಸೇರಿದಂತೆ ಮೂರು ಹಂತದಲ್ಲಿಅನುದಾನ ಬಿಡುಗಡೆಯಾಗಿದೆ. ಹಿಂದಿನ ಸರಕಾರದಲ್ಲಿಏಳು ಏತ ನೀರಾವರಿ ಯೋಜನೆಗೆ ಅಳವಡಿಸಲಾಗಿದ್ದ ಕಾಂಕ್ರಿಟ್ ಪೈಪ್ಗಳಲ್ಲಿಸೋರಿಕೆ ಹೆಚ್ಚಾಗಿ ರೈತರ ಜಮೀನುಗಳಿಗೆ ನೀರು ತಲುಪದ ಕಾರಣ ಹದಲಿ, ಗಂಗಾಪುರ, ಖಾನಾಪುರ, ಬನಹಟ್ಟಿ, ರಡ್ಡೇರನಾಗನೂರ, ಅಸೂಟಿ, ಸುರಕೋಡ ಗ್ರಾಮದ ಏತ ನೀರಾವರಿಗೆ ಕಬ್ಬಿಣದ(ಸ್ಟೀಲ್) ಪೈಪ್ಲೈನ್ ಅಳವಡಿಸಲು 80ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ನರಗುಂದ ಮತಕ್ಷೇತ್ರದ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಅಭಿವೃದ್ಧಿಗೆ 17ಕೊಟಿ ರೂ. ಬಿಡುಗಡೆಯಾಗಿದೆ. ಸಚಿವ ಕಾರಜೋಳ ಅವರಲ್ಲಿಮನವಿ ಮಾಡಿಕೊಂಡಿದ್ದಕ್ಕೆ ಹೆಚ್ಚುವರಿಯಾಗಿ 5ಕೋಟಿ ಬಿಡುಗಡೆಯಾಗಿದೆ. ಜಿಪಂ ರಸ್ತೆಗಳ ಅಭಿವೃದ್ಧಿಗೆ 6ಕೋಟಿ ಅನುದಾನ ಬಿಡುಗಡೆಯಾಗಿದೆ. ಪುರಸಭೆಗೆ 2ಕೋಟಿ ಬಿಡುಗಡೆಯಾಗಿದೆ ಎಂದರು. ಸರಕಾರ ಬಂದು ಒಂದೆ ತಿಂಗಳದಲ್ಲಿಮತಕ್ಷೇತ್ರಕ್ಕೆ 916 ಕೋಟಿ ಅನುದಾನ ಹರಿದು ಬಂದಿದೆ ಎಂದರು.
ಬಿಜೆಪಿ ಮುಖಂಡ ಎ.ಎಂ.ಹುಡೇದ, ಎಂ.ಎಸ್.ಪಾಟೀಲ, ವಾಸು ಜೋಗಣ್ಣವರ, ನಿಂಗಣ್ಣ ಗಾಡಿ, ಮುತ್ತನಗೌಡ ಪೋಲೀಸ್ ಪಾಟೀಲ ಸೇರಿದಂತೆ ಮುಂತಾದವರಿದ್ದರು.