ಆ್ಯಪ್ನಗರ

ರಕ್ತದಾನ ಮಾಡಿದ 28 ಯುವಕರು

ಲಕ್ಕುಂಡಿ : ರಕ್ತ ದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಹಾಗೂ ಹೊಸ ಚೈತನ್ಯದೊಂದಿಗೆ ಇರಲು ಸಾಧ್ಯ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಹೊಂಗಲ ಹೇಳಿದರು.

Vijaya Karnataka 16 Apr 2019, 5:00 am
ಲಕ್ಕುಂಡಿ : ರಕ್ತ ದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಹಾಗೂ ಹೊಸ ಚೈತನ್ಯದೊಂದಿಗೆ ಇರಲು ಸಾಧ್ಯ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಹೊಂಗಲ ಹೇಳಿದರು.
Vijaya Karnataka Web GDG-15LKD2
ಲಕ್ಕುಂಡಿಯಲ್ಲಿ ಕೋಟೆ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಯುವಕರು ರಕ್ತ ದಾನ ಮಾಡಿದರು.


ಇಲ್ಲಿಯ ಕೋಟೆ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೇವಾ ಸಮಿತಿಯವರು ಹಮ್ಮಿಕೊಂಡಿದ್ದ ರಕ್ತ ದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನ ಮಾಡುವುದರಿಂದ ರಕ್ತದಲ್ಲಿಯ ಕೊಬ್ಬಿನಾಂಶ ಕಡಿಮೆಯಾಗಿ ಹೃದಯ ಹಾಗೂ ಮೆದುಳು ಸಂಬಂಧಿತ ರೋಗಗಳು ಕಡಿಮೆಯಾಗುತ್ತವೆ. ಜಾತ್ರೆ ಅಂಗವಾಗಿ ಸಮಿತಿಯವರು ಇಂತಹ ರಕ್ತದಾನ ಶಿಬಿರ ಏರ್ಪಡಿಸಿದ್ದು 28 ಯುವಕರು ರಕ್ತವನ್ನು ದಾನ ನೀಡಿದ್ದು ಶ್ಲಾಘನೀಯ ಎಂದರು.

ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಪಿ.ಅಶೋಕ , ರಕ್ತದಾನ ಮಾಡುವರು 18-60 ವರ್ಷದ ಒಳಗಿನವರಾಗಿರಬೇಕು. ಯಾವುದೇ ಲಿಂಗ ಬೇಧವಿಲ್ಲದೇ ಆರೋಗ್ಯವಂತರು ರಕ್ತ ದಾನ ಕೊಡಬಹುದು. ರಕ್ತ ಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರಿಗೆ, ರಕ್ತ ಹೀನತೆಯ ರೋಗಿಗಳು, ರಸ್ತೆ ಅಪಘಾತವಾದವರಿಗೆ , ಥೇಲೆಸಿಮಿಯಾ ರೋಗಿಗಳು, ಡೆಂಗೆ ರೋಗಿಗಳು, ಶಸ್ತ್ರ ಚಿಕಿತ್ಸೆ ಒಳಪಡುವ ಬಡ ರೋಗಿಗಳಿಗೆ ಈ ರಕ್ತ ನೀಡಲಾಗುತ್ತದೆ ಎಂದರು.

ವೀರಭದ್ರೇಶ್ವರ ಸೇವಾ ಸಮಿತಿಯ ಈರಣ್ಣ ಬಂಕಾಪೂರ, ರಾಜು ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷ ಕ ವೈ,ಎಸ್‌.ಕಡೇಮನಿ, ವಿನಾಯಕ ಬಡಿಗೇರ, ಪ್ರವೀಣ ಮೇಲ್ಮನಿ,ಎಸ್‌.ಬಿ.ಪಾಟೀಲ, ಪರೋಜ್‌ ಹೊನ್ನಾಪೂರ, ಚನ್ನಪ್ಪ ಹೊಸಮನಿ, ಆರ್‌.ಲಾವಣ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ