ಆ್ಯಪ್ನಗರ

3 ಶುದ್ಧ ನೀರಿನ ಘಟಕದಲ್ಲಿ 2 ಕೆಟ್ಟಿರುವುದೇ

ಹೊಳೆಆಲೂರು : ಹೊಳೆಆಲೂರು ದೊಡ್ಡ ಗ್ರಾಮವಾಗಿದ್ದು, ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದು ಜನಸಂಖ್ಯೆಗೆ ತಕ್ಕ ನೀರಿನ ವ್ಯವಸ್ಥೆ ಇಲ್ಲವೇ ಇಲ್ಲ .ಇಲ್ಲಿನ ಗ್ರಾಪಂ ಹಾಗೂ ಜನ ಪ್ರತಿನಿಧಿಗಳ ನಿಷ್ಕಾಳಜಿಯಿಂದ ನೀರಿನ ಸಮಸ್ಯೆ ತಲೆಎತ್ತಿ ನಿಂತಿದೆ.ಇಡೀ ಊರಿಗೆ ಶುದ್ಧ ನೀರಿನ ಘಟಕಗಳ ಪೈಕಿ ಒಂದು ಮಾತ್ರ ಸರಿಯಾಗಿದ್ದು ಎಲ್ಲರೂ ಅಲ್ಲಿಯೇ ಮುಗಿಬೀಳುವಂತಾಗಿದೆ. ಉಳಿದವರು ಪಕ್ಕದ ಗ್ರಾಮಗಳಿಗೆ ಹೋಗಿ ನೀರು ತರುವ ದುಸ್ಥಿತಿ ಇದೆ.

Vijaya Karnataka 28 Apr 2019, 5:00 am
ಹೊಳೆಆಲೂರು : ಹೊಳೆಆಲೂರು ದೊಡ್ಡ ಗ್ರಾಮವಾಗಿದ್ದು, ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದು ಜನಸಂಖ್ಯೆಗೆ ತಕ್ಕ ನೀರಿನ ವ್ಯವಸ್ಥೆ ಇಲ್ಲವೇ ಇಲ್ಲ .ಇಲ್ಲಿನ ಗ್ರಾಪಂ ಹಾಗೂ ಜನ ಪ್ರತಿನಿಧಿಗಳ ನಿಷ್ಕಾಳಜಿಯಿಂದ ನೀರಿನ ಸಮಸ್ಯೆ ತಲೆಎತ್ತಿ ನಿಂತಿದೆ.ಇಡೀ ಊರಿಗೆ ಶುದ್ಧ ನೀರಿನ ಘಟಕಗಳ ಪೈಕಿ ಒಂದು ಮಾತ್ರ ಸರಿಯಾಗಿದ್ದು ಎಲ್ಲರೂ ಅಲ್ಲಿಯೇ ಮುಗಿಬೀಳುವಂತಾಗಿದೆ. ಉಳಿದವರು ಪಕ್ಕದ ಗ್ರಾಮಗಳಿಗೆ ಹೋಗಿ ನೀರು ತರುವ ದುಸ್ಥಿತಿ ಇದೆ.
Vijaya Karnataka Web GDG-27HLR1
ಹೊಳೆಆಲೂರ ಪಂಚಾಯಿತಿ ಆವರಣದಲ್ಲಿ ನೀರಿನ ಘಟಕದ ಮುಂದೆ ನೀರಿಗಾಗಿ ಕಾಯುತ್ತಿರುವ ಗ್ರಾಮಸ್ಥರು.


ಮನೆಗೆ ಜೋಡಿಸಿದ ನಲ್ಲಿಯಲ್ಲಿ ನೀರು ಬರುವುದು 8 ದಿನಕ್ಕೊಮ್ಮೆ ಮಾತ್ರ. ನೀರು ಬರುವ ದಿನ ಜನರು ಅಂದು ಎಲ್ಲ ಕೆಲಸ ಬಿಟ್ಟು ಕಾಯುತ್ತ ಕುಳಿತುಕೊಳ್ಳುತ್ತಾರೆ.

13 ಸಾವಿರ ಜನಸಂಖ್ಯೆಗೆ 3 ಶುದ್ಧೀಕರಣ ಘಟಕ:

ಪಂಚಾಯಿತಿ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಡೆಯುತ್ತಿರುವ ಶುದ್ಧಗಂಗಾ ನೀರಿನ ಘಟಕ ಮಾತ್ರ ಸರಿಯಾಗಿ ಕೆಲಸಮಾಡುತ್ತಿದೆ. ಭೂಸೇನಾ ನಿಗಮದಿಂದ ಸ್ಥಾಪಿಸಿದ ಇನ್ನೆರಡು ಘಟಕಗಳು ಯಾವಾಗಲೂ ಬಂದ್‌ ಆಗಿರುತ್ತವೆ.

ಕಳೆಪೆ ಮಟ್ಟದ ಶುದ್ಧೀಕರಣ ಯಂತ್ರ, ಶೂನ್ಯ ನಿರ್ವಹಣೆಯಿಂದ ಅವುಗಳಿಗೆ ಹೊಂದಿಕೊಂಡಿರುವ ನಿವಾಸಿಗಳು ಯಾವಾಗಲೂ ಶಾಪ ಹಾಕುತ್ತಲೇ ಇರುವಂತಾಗಿದೆ. ಪಟ್ಟಣದ ನಿವಾಸಿಗಳು ಉರಿಬಿಸಿಲಿನಲ್ಲಿ ಪಂಚಾಯಿತಿಗೆ ಬಂದು ಸಿಹಿ ನೀರು ಒಯ್ಯಲು ಬಂದಾಗ ಅಕಸ್ಮಾತ್‌ ಇದೂ ಕೆಟ್ಟು ನಿಂತರೆ ಮುಗಿತು ಬಂದ ದಾರಿಗೆರ ಸುಂಕವಿಲ್ಲ ಎಂಬಂತೆ ಜನ ವಾಪಸ್‌ ತೆರಳಬೇಕಿದೆ.

ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗುಡ್ಡದಲ್ಲಿ 4 ಬೋರ್‌ವೆಲ್‌ ಹಾಕಿಸಿ ಪೈಪ್‌ಲೈನ್‌ ಮೂಲಕ ಪಟ್ಟಣದ 4-5 ನಗರಗಳಿಗೆ 3 ದಿನಕ್ಕೊಮ್ಮೆ ಸಿಹಿ ನೀರು ಬಿಟ್ಟರೂ ನೀರಿನ ದಾಹ ತೀರಲಾರಂತಾಗಿದೆ.

24/7 ಯೋಜನೆ ಕಾರ್ಯ ನಿರ್ವಹಿಸುತ್ತಿಲ್ಲ:

ಸರಕಾರ ಎಲ್ಲ ಗ್ರಾಮಗಳಿಗೆ 24/7 ಯೋಜನೆಯನ್ವಯ ಎಲ್ಲ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದರೂ ಇಲ್ಲಿನ ಓವರ್‌ ಹೆಡ್‌ ಟ್ಯಾಂಕ್‌ ಸಾಮರ್ಥ್ಯ‌ ಕೇವಲ 1 ಲಕ್ಷ ಲೀ. ಆಗಿದ್ದು ಇದರಿಂದ ಪ್ರತಿ ಓಣಿಗೆ 8 ದಿನಕ್ಕೊಮ್ಮೆ ಮಾತ್ರ ನೀರು ಬಿಡಲಾಗುತ್ತಿದೆ. ಇದರಿಂದ ತೀವ್ರ ತೊಂದರೆಯಾಗುತ್ತಿದ್ದು ದನಕರುಗಳನ್ನು ಹೊಂದಿರುವ ರೈತರು, ಸಾರ್ವಜನಿಕರು ಕೊಡ ಹಿಡಿದು ಓಣಿ ಓಣಿ ತಿರುಗುವಂತಾಗಿದೆ.

ಪಕ್ಕದ ಗ್ರಾಮದಿಂದ ನೀರು:

ಇಲ್ಲಿನ ನೀರು ಶುದ್ಧಿಕರಣ ಘಟಕ ಹಾಗೂ ಹೆಬ್ಬಳ್ಳಿ ಗುಡ್ಡದ ಸಿಹಿ ನೀರಿನ ಪೈಪ್‌ಲೈನ್‌ ಗದ್ದಲ, ರಗಳೆ ಬೇಡವೆಂದುಕೊಂಡು ವಾಹನಗಳಿರುವ ಅನೇಕ ಜನ ಸಮೀಪದ, ಬೆನಹಾಳ, ಅಮರಗೋಳ, ಬಸರಕೋಡ, ಬೂದಿಹಾಳ, ಜಕನೂರಿಗೆ ಹೋಗಿ ನೀರು ತರುವುದು ದಿನನಿತ್ಯವೂ ಕಾಣಸಿಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ