ಸತತ ಮಳೆಗೆ ಉರುಳೀದ 315 ಮನೆ
ರೋಣ: ತಾಲೂಕಿನಲ್ಲಿಹಲವು ದಿನಗಳಿಂದ ಸತತ ಸುರಿಯುತ್ತಿರುವ ಭಾರಿ ಮಳೆಯಿಂದ ಮನೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿ, ಗೋಡೆಗಳು ನೆಲಕಚ್ಚುತ್ತಿವೆ.
Vijaya Karnataka 26 Oct 2019, 5:00 am
ರೋಣ: ತಾಲೂಕಿನಲ್ಲಿಹಲವು ದಿನಗಳಿಂದ ಸತತ ಸುರಿಯುತ್ತಿರುವ ಭಾರಿ ಮಳೆಯಿಂದ ಮನೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿ, ಗೋಡೆಗಳು ನೆಲಕಚ್ಚುತ್ತಿವೆ.
ಜುಲೈ ಅಂತ್ಯ,ಆಗಸ್ಟ್ ಹಾಗೂ ಸೆಪ್ಟಂಬರ್, ಅಕ್ಟೋಬರ್ನಲ್ಲಿಧಾರಾಕಾರ ಮಳೆ ಹಾಗೂ ಮಲಪ್ರಭೆ,ಬೆಣ್ಣೆಹಳ್ಳದ ಪ್ರವಾಹದಿಂದ ಕಳೆದುಕೊಂಡಿದ್ದವರು ಸುಧಾರಿಸುವ ಮುನ್ನವೇ ಕಳೆದ ಮೂರು ದಿನಗಳ ಮಹಾ ಮಳೆಯ ಹೊಡೆತ ಜನರನ್ನು ಕಂಗಾಲಾಗಿದೆ. ಪ್ರಾಥಮಿಕ ಅಮೀಕ್ಷೆ ಪ್ರಕಾರ, ನದಿ ಪಾತ್ರದ ಗ್ರಾಮಗಳ ಹೊರತುಪಡಿಸಿಯೂ ಇನ್ನುಳಿದೆಡೆ 315 ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ.
ಮುಂಗಾರು ಹಂಗಾಮಿನಲ್ಲಿನೆರೆ ಹಾಗೂ ಅತಿವೃಷ್ಟಿಯಿಂದ 200ಕ್ಕೂ ಹೆಚ್ಚು ಮನೆಗಳು ಬಿದ್ದು, ನೂರಾರು ಕೋಟಿ ರೂ.ಹಾನಿಯಾಗಿತ್ತು. ಈ ನೋವಿನಿಂದ ಸುಧಾರಿಸಿಕೊಳ್ಳುತ್ತಿರುವ ನಡುವೆಯೇ ಹಿಂಗಾರು ಮಳೆಯೂ ಬರೆ ಎಳೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನೂ ಕೆಲವು ದಿನಗಳವರೆಗೆ ಮಳೆ ಮುಂದುವರಿಯಲಿದೆ ಎನ್ನುವ ಮುನ್ಸೂಚನೆ ಜನರನ್ನು ಮತ್ತಷ್ಟು ಕಂಗೆಡಿಸಿದೆ.
ಮಣ್ಣಿನ ಮನೆಗೆ ಭಾರಿ ತೊಂದರೆ :
ಮಣ್ಣಿನ ಮನೆಗಳು ಕುಸಿದಿದ್ದವು. ತಾಲೂಕು ಆಡಳಿತದ ಸಮೀಕ್ಷೆ ಮಾಡಿ ವರದಿಯನ್ನೂ ಜಿಲ್ಲಾಡಲಿತಕ್ಕೆ ಒಪ್ಪಿಸಿತ್ತು. ಆಗ ಶೇ. 25 ರಂಷ್ಟು ಹಾನಿಯಾಗಿದ್ದ ಮನೆಗಳು ಈಗ ಸುರಿಯುತ್ತಿರುವ ಸತತ ಮಳೆಯಿಂದ ಮತ್ತಷ್ಟು ಹೆಚ್ಚಿನ ಹಾನಿಗೊಳಗಾಗುತ್ತಿವೆ. ಆಗ ನೆನೆದಿದ್ದ ಗೋಡೆಗಳು ಈಗ ಕುಸಿಯಲಾರಂಭಿಸಿ, ನೆಲಕ್ಕುರುಳುತ್ತಿವೆ. ಅಧಿಕಾರಿಗಳು ಮತ್ತೊಮ್ಮೆ ಸಂಪೂರ್ಣ ಸಮೀಕ್ಷೆ ನಡೆಸಿ, ಸರಕಾರದಿಂದ ಪರಿಹಾರ ಕಲ್ಪಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಮೂರು ಭಾರಿ ಪ್ರವಾಹ:
ತಾಲೂಕಿನಲ್ಲಿಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿಉಕ್ಕಿ ಹರಿದ ಮಲಪ್ರಭೆ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ಹಿಂದಿನ ಎರಡು ಕಹಿ ನೆನಪು ಮಾಸುವ ಮುನ್ನವೇ ಈಗ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಬಂದಿದೆ. ಈ ಭಾಗದ 16 ಗ್ರಾಮಗಳ ಜನರ ಬದುಕು ನರಕದಂತಾಗಿದೆ. ಮಳೆಗೆ ಪಟ್ಟಣದಲ್ಲಿ45 ಮನೆಗಳು ಹಾಗೂ ರೋಣ ಹೊಬಳಿ ವ್ಯಾಪ್ತಿಗೆ ಬರುವ 32 ಗ್ರಾಮಗಳಲ್ಲಿ271 ಮನೆಗಳು ಕುಸಿದಿವೆ. ಅಸೂಟಿಯಲ್ಲಿ3 ಮನೆಗಳು ನೆಲಕಚ್ಚಿರುವ ವರದಿಯಾಗಿದೆ. ಈ ಗ್ರಾಮಗಳಿಗೆ ತಹಸೀಲ್ದಾರ ಭೇಟಿ ನೀಡಿದ್ದಾರೆ.
ಜುಲೈ ಅಂತ್ಯ,ಆಗಸ್ಟ್ ಹಾಗೂ ಸೆಪ್ಟಂಬರ್, ಅಕ್ಟೋಬರ್ನಲ್ಲಿಧಾರಾಕಾರ ಮಳೆ ಹಾಗೂ ಮಲಪ್ರಭೆ,ಬೆಣ್ಣೆಹಳ್ಳದ ಪ್ರವಾಹದಿಂದ ಕಳೆದುಕೊಂಡಿದ್ದವರು ಸುಧಾರಿಸುವ ಮುನ್ನವೇ ಕಳೆದ ಮೂರು ದಿನಗಳ ಮಹಾ ಮಳೆಯ ಹೊಡೆತ ಜನರನ್ನು ಕಂಗಾಲಾಗಿದೆ. ಪ್ರಾಥಮಿಕ ಅಮೀಕ್ಷೆ ಪ್ರಕಾರ, ನದಿ ಪಾತ್ರದ ಗ್ರಾಮಗಳ ಹೊರತುಪಡಿಸಿಯೂ ಇನ್ನುಳಿದೆಡೆ 315 ಕ್ಕೂ ಹೆಚ್ಚು ಮನೆಗಳು ನೆಲಕಚ್ಚಿವೆ.
ಮುಂಗಾರು ಹಂಗಾಮಿನಲ್ಲಿನೆರೆ ಹಾಗೂ ಅತಿವೃಷ್ಟಿಯಿಂದ 200ಕ್ಕೂ ಹೆಚ್ಚು ಮನೆಗಳು ಬಿದ್ದು, ನೂರಾರು ಕೋಟಿ ರೂ.ಹಾನಿಯಾಗಿತ್ತು. ಈ ನೋವಿನಿಂದ ಸುಧಾರಿಸಿಕೊಳ್ಳುತ್ತಿರುವ ನಡುವೆಯೇ ಹಿಂಗಾರು ಮಳೆಯೂ ಬರೆ ಎಳೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನೂ ಕೆಲವು ದಿನಗಳವರೆಗೆ ಮಳೆ ಮುಂದುವರಿಯಲಿದೆ ಎನ್ನುವ ಮುನ್ಸೂಚನೆ ಜನರನ್ನು ಮತ್ತಷ್ಟು ಕಂಗೆಡಿಸಿದೆ.
ಮಣ್ಣಿನ ಮನೆಗೆ ಭಾರಿ ತೊಂದರೆ :
ಮಣ್ಣಿನ ಮನೆಗಳು ಕುಸಿದಿದ್ದವು. ತಾಲೂಕು ಆಡಳಿತದ ಸಮೀಕ್ಷೆ ಮಾಡಿ ವರದಿಯನ್ನೂ ಜಿಲ್ಲಾಡಲಿತಕ್ಕೆ ಒಪ್ಪಿಸಿತ್ತು. ಆಗ ಶೇ. 25 ರಂಷ್ಟು ಹಾನಿಯಾಗಿದ್ದ ಮನೆಗಳು ಈಗ ಸುರಿಯುತ್ತಿರುವ ಸತತ ಮಳೆಯಿಂದ ಮತ್ತಷ್ಟು ಹೆಚ್ಚಿನ ಹಾನಿಗೊಳಗಾಗುತ್ತಿವೆ. ಆಗ ನೆನೆದಿದ್ದ ಗೋಡೆಗಳು ಈಗ ಕುಸಿಯಲಾರಂಭಿಸಿ, ನೆಲಕ್ಕುರುಳುತ್ತಿವೆ. ಅಧಿಕಾರಿಗಳು ಮತ್ತೊಮ್ಮೆ ಸಂಪೂರ್ಣ ಸಮೀಕ್ಷೆ ನಡೆಸಿ, ಸರಕಾರದಿಂದ ಪರಿಹಾರ ಕಲ್ಪಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಮೂರು ಭಾರಿ ಪ್ರವಾಹ:
ತಾಲೂಕಿನಲ್ಲಿಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿಉಕ್ಕಿ ಹರಿದ ಮಲಪ್ರಭೆ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ಹಿಂದಿನ ಎರಡು ಕಹಿ ನೆನಪು ಮಾಸುವ ಮುನ್ನವೇ ಈಗ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಬಂದಿದೆ. ಈ ಭಾಗದ 16 ಗ್ರಾಮಗಳ ಜನರ ಬದುಕು ನರಕದಂತಾಗಿದೆ. ಮಳೆಗೆ ಪಟ್ಟಣದಲ್ಲಿ45 ಮನೆಗಳು ಹಾಗೂ ರೋಣ ಹೊಬಳಿ ವ್ಯಾಪ್ತಿಗೆ ಬರುವ 32 ಗ್ರಾಮಗಳಲ್ಲಿ271 ಮನೆಗಳು ಕುಸಿದಿವೆ. ಅಸೂಟಿಯಲ್ಲಿ3 ಮನೆಗಳು ನೆಲಕಚ್ಚಿರುವ ವರದಿಯಾಗಿದೆ. ಈ ಗ್ರಾಮಗಳಿಗೆ ತಹಸೀಲ್ದಾರ ಭೇಟಿ ನೀಡಿದ್ದಾರೆ.