ಆ್ಯಪ್ನಗರ

ಅಭಿವೃದ್ಧಿಗೆ 4 ಕೋಟಿ ರೂ. ಪೂರಕ ಬಜೆಟ್‌

ಗಜೇಂದ್ರಗಡ: ನಗರದಲ್ಲಿಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ 4 ಕೋಟಿ ರೂ. ಪೂರಕ ಬಜೆಟ್‌ ಸಿದ್ಧಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Vijaya Karnataka 14 Mar 2020, 5:24 pm
ಗಜೇಂದ್ರಗಡ: ನಗರದಲ್ಲಿಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ 4 ಕೋಟಿ ರೂ. ಪೂರಕ ಬಜೆಟ್‌ ಸಿದ್ಧಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
Vijaya Karnataka Web 4 crores for development supplementary budget
ಅಭಿವೃದ್ಧಿಗೆ 4 ಕೋಟಿ ರೂ. ಪೂರಕ ಬಜೆಟ್‌


ಸ್ಥಳೀಯ ಪುರಸಭೆಯ ಸಭಾ ಭವನದಲ್ಲಿಇತ್ತೀಚೆಗೆ ನಡೆದ ಪ್ರಸಕ್ತ ಸಾಲಿನ ಅಂದಾಜು 4 ಕೋಟಿ ರೂ. ವೆಚ್ಚದ ವಾರ್ಷಿಕ ಬಜೆಟ್‌ ವರದಿ ಮಂಡಿಸಿ, ಬಳಿಕ ಮಾತನಾಡಿದರು.

ಪಟ್ಟಣದ ಕುಡಿಯುವ ನೀರು ಸಂಪರ್ಕ ಒದಗಿಸಲು 2019-2020ನೇ ಸಾಲಿನಲ್ಲಿ50 ಲಕ್ಷ ರೂ. ನಿರೀಕ್ಷಿಸಲಾಗಿದೆ. ಡಿಸೆಂಬರ್‌ ಅಂತ್ಯಕ್ಕೆ 19.55 ಲಕ್ಷ ಸ್ವೀಕರಿಸಿದ್ದು, ಮುಂದಿನ ವರ್ಷ ಮಾಸಿಕ ದರಗಳಂತೆ ಅಂದಾಜು 60 ಲಕ್ಷ ರೂ. ಸಂಗ್ರಹಿಸುವ ನಿರೀಕ್ಷೆ ಇದೆ. 2019-2020ನೇ ಸಾಲಿನ ಎಸ್‌ಎಫ್‌ಸಿ ಮುಕ್ತ ನಿಧಿಯಂದ 1.53 ಕೋಟಿ ನಿರೀಕ್ಷೆ ಮಾಡಲಾಗಿತ್ತು. ಆದರೆ 76.50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು 2020-2021 ನೇ ಸಾಲಿನಲ್ಲಿ1.60 ಕೋಟಿ ರೂ. ಅನುದಾನ ನಿರೀಕ್ಷೆ ಮಾಡಲಾಗಿದೆ. ಡಿಸೆಂಬರ್‌ ಅಂತ್ಯಕೆ ವಿವಿಧ ಬ್ಯಾಂಕ್‌ಗಳಲ್ಲಿ3.30 ಲಕ್ಷ ರೂ. ಬಡ್ಡಿ ಸ್ವೀಕರಿಸಿದ್ದು, 2019ರ ಅಂತ್ಯಕ್ಕೆ 3 ತಿಂಗಳ ಬಾಕಿ ಇರುವುದರಿಂದ ಒಟ್ಟು 4.20 ಲಕ್ಷ ರೂ. ನಿರೀಕ್ಷಿಸಲಾಗಿದೆ. 2020-2021ನೇ ಸಾಲಿಗೆ 4.50 ಲಕ್ಷ ರೂ. ಬಡ್ಡಿ ಬರುವ ಅಂದಾಜು ಮಾಡಲಾಗಿದೆ ಎಂದರು.

ನಾಗರಿಕ ಸೌಲಭ್ಯ, ನೀರು ಸರಬರಾಜು, ಲೋಕೋಪಯೋಗಿ ಕಾಮಗಾರಿಗಳು, ಬೀದಿ ದೀಪಗಳ ನಿರ್ವಹಣೆಗೆ 120 ಲಕ್ಷ ರೂ. ಮತ್ತು ಪಟ್ಟಣದ ಹೊಸ ಭೂ ಪರಿರ್ವತನೆ, ಕಟ್ಟಡಗಳ ಪರವಾನಿಗೆಯಿಂದ 12.62 ಲಕ್ಷ ರೂ. ವಸೂಲಾಗಿದೆ ಎಂದು ತಿಳಿಸಿದರು.

ಯು.ಆರ್‌.ಚನ್ನಮ್ಮನವರ, ಕನಕಪ್ಪ ಅರಳಿಗಡಿದ, ಶರಣಪ್ಪ ಉಪ್ಪಿನಬೆಟಗೇರಿ, ಮರ್ತುಜಾ ಡಾಲಾಯತ, ರಾಜು ಸಾಂಗ್ಲೀಕರ, ಯಮನೂರಪ್ಪ ತಿರಕೋಜಿ, ಲಕ್ಷ್ಮಿ ಮುಧೋಳ, ಲೀಲಾವತಿ ಸವಣೂರ, ದ್ರಾಕ್ಷಾಯಿಣಿ ಚೋಳಿನ, ಸವಿತಾ ಬಿದರಳ್ಳಿ, ಉಮಾ ಮ್ಯಾಕಲ್‌, ಕೌಸರಬಾನು ಹುನಗುಂದ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ