ಆ್ಯಪ್ನಗರ

ರಷ್ಯಾ ದೇಶದ 400ಜನ ಸಾಧಕರಿಗೆ ವೀರಶೈವ ಇಷ್ಟಲಿಂಗ ದೀಕ್ಷೆ

ಧಾರವಾಡ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಲ್ಲಿ ರಷ್ಯಾ ದೇಶದ 30ಯೋಗ ಶಿಕ್ಷ ಕರಿಗೆ ಸೋಮವಾರ ಇಷ್ಟಲಿಂಗ ದೀಕ್ಷೆ ನೀಡಲಾಗಿದೆ ಎಂದು ಕಾಶಿಯ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Vijaya Karnataka 27 Mar 2019, 5:00 am
ಧಾರವಾಡ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಲ್ಲಿ ರಷ್ಯಾ ದೇಶದ 30ಯೋಗ ಶಿಕ್ಷ ಕರಿಗೆ ಸೋಮವಾರ ಇಷ್ಟಲಿಂಗ ದೀಕ್ಷೆ ನೀಡಲಾಗಿದೆ ಎಂದು ಕಾಶಿಯ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
Vijaya Karnataka Web 400 russian people veershiva ishtaling dixe
ರಷ್ಯಾ ದೇಶದ 400ಜನ ಸಾಧಕರಿಗೆ ವೀರಶೈವ ಇಷ್ಟಲಿಂಗ ದೀಕ್ಷೆ


ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ವೀರಶೈವ ಧರ್ಮ ಸಿದ್ಧಾಂತ ತತ್ವ ಪರಂಪರೆ ವಿದೇಶದಲ್ಲಿಯೂ ಪ್ರಸಿದ್ಧಿ ಪಡೆದಿದ್ದು, 17 ವರ್ಷಗಳಲ್ಲಿ ರಷ್ಯಾ ದೇಶದ 400 ಜನ ಸಾಧಕರಿಗೆ ವೀರಶೈವ ಇಷ್ಟಲಿಂಗ ದೀಕ್ಷೆ ನೀಡಲಾಗಿದೆ ಎಂದರು.

ತ್ರಿಕರ್ಣ ಶುದ್ಧಿಯಿಂದ ಶಿವಯೋಗ ಸಾಧನೆಗೆ ತೆರೆದುಕೊಂಡಾಗಲೇ ಸಾಕ್ಷಾತ್ಕಾರ ಸಂಪಾದನೆ ಮೇರುಸ್ಥಿ ತಲುಪಲು ಸಾಧ್ಯವಾಗುತ್ತದೆ. ಸನಾತನ ವೀರಶೈವ ಧರ್ಮದಲ್ಲಿ ದೀಕ್ಷೆಗೆ ಮೊದಲ ಆದ್ಯತೆ ಕೊಡಲಾಗಿದ್ದು, ಶ್ರೇಷ್ಠ ಶಿವಜ್ಞಾನ ಪ್ರಾಪ್ತಗೊಳಿಸಿ ಮನಸ್ಸಿನ ಕಲ್ಮಶಗಳನ್ನು ನಾಶಗೊಳಿಸುವ ಧಾರ್ಮಿಕ ಸಂಸ್ಕಾರವೇ ದೀಕ್ಷೆ. ದೀಕ್ಷೆಯನ್ನು ಸ್ತ್ರೀ-ಪುರುಷ ಹಾಗೂ ಜಾತಿ, ಜನಾಂಗ ಬೇಧಗಳಿಲ್ಲದೇ ಎಲ್ಲರಿಗೂ ದೀಕ್ಷೆ ನೀಡಲಾಗುತ್ತದೆ. ಲಿಂಗ ದೀಕ್ಷೆ ವೀರಶೈವರ ಜನ್ಮಸಿದ್ಧ ಹಕ್ಕಾಗಿದೆ ಎಂದರು.

ಕಡ್ಡಾಯ ಮತದಾನ ಮಾಡಿ: ಮತದಾನ ಪ್ರಜಾಪ್ರಭುತ್ವದ ಹಬ್ಬ. ಮತದಾರ ಆಸೆ ಆಮಿಷಗಳಿಗೆ ಬಲಿಯಾಗದೇ ಜನಕಲ್ಯಾಣ ಬಯಸುವ ಜನಸೇವೆಗೆ ಮಾಡುವ ಹಾಗೂ ಭಾರತದ ಘನತೆ, ಸಮಗ್ರತೆಯ ವಿಕಾಸವನ್ನು ಬಯಸುವ ಯೋಗ್ಯ ಅಭ್ಯರ್ಥಿಗಳಿಗೆ ಮರೆಯದೇ ಮತ ಚಲಾವಣೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಗುವ ಮತ ಚಲಾವಣೆಯ ಪರಮಾಧಿಕಾರವನ್ನು ದೇಶದ ಪ್ರತಿಯೊಬ್ಬ ಪ್ರಜೆ ಪ್ರಜ್ಞಾಪೂರ್ವಕವಾಗಿ ಬಳಸಿಕೊಳ್ಳಬೇಕು.ರಾಷ್ಟ್ರದ ಅಭಿವೃದ್ಧಿಗೆ ಬಯಸುವ ಪ್ರತಿನಿಧಿಗೆ ಮತದಾನ ಮಾಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಗುರುಮೂರ್ತಿ ಯರಗಂಬಳಿಮಠ, ಬಸವರಾಜ ಕೌಜಲಗಿ, ಡಾ.ಪ್ರಶಾಂತ ರಾಮನಗೌಡರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ