ಆ್ಯಪ್ನಗರ

ನೆರೆ ಪರಿಹಾರಕ್ಕೆ 5 ಲಕ್ಷ ರೂ. ದೇಣಿಗೆ

ಗದಗ : ಬರದಿಂದ ತತ್ತರಿಸಿದ ಉತ್ತರ ಕರ್ನಾಟಕದ ಜನ ಈಗ ನೆರೆಯಿಂದ ಬದುಕು ಕಳೆದುಕೊಂಡಿದ್ದಾರೆ. ಉಕ ನಿರಾಶ್ರೀತರಿಗೆ ನೆರವಾಗಲು ಹುಲಕೋಟಿಯ ರೂರಲ್‌ ಟೆಕ್ನಿಕಲ್‌ ಎಜ್ಯುಕೇಶನ್‌ ಸೊಸೈಟಿ ಮೂಲಕ ಸಂಗ್ರಹಿಸಿದ 5 ಲಕ್ಷ ರೂ. ಪರಿಹಾರವನ್ನು ಜಿಲ್ಲಾಧಿಕಾರಿ ಮೂಲಕ

Vijaya Karnataka 18 Aug 2019, 5:00 am
ಗದಗ : ಬರದಿಂದ ತತ್ತರಿಸಿದ ಉತ್ತರ ಕರ್ನಾಟಕದ ಜನ ಈಗ ನೆರೆಯಿಂದ ಬದುಕು ಕಳೆದುಕೊಂಡಿದ್ದಾರೆ. ಉಕ ನಿರಾಶ್ರೀತರಿಗೆ ನೆರವಾಗಲು ಹುಲಕೋಟಿಯ ರೂರಲ್‌ ಟೆಕ್ನಿಕಲ್‌ ಎಜ್ಯುಕೇಶನ್‌ ಸೊಸೈಟಿ ಮೂಲಕ ಸಂಗ್ರಹಿಸಿದ 5 ಲಕ್ಷ ರೂ. ಪರಿಹಾರವನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಲಾಗುವುದು ಎಂದು ಯುವ ಮುಖಂಡ ಸಚಿನ್‌ ಪಾಟೀಲ ಹೇಳಿದರು.
Vijaya Karnataka Web 5 lakhs for flood compensation donations
ನೆರೆ ಪರಿಹಾರಕ್ಕೆ 5 ಲಕ್ಷ ರೂ. ದೇಣಿಗೆ


ಶನಿವಾರ ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ರೂರಲ್‌ ಟೆಕ್ನಿಕಲ್‌ ಎಜ್ಯುಕೇಶನ್‌ ಸೊಸೈಟಿ ಹುಲಕೋಟಿ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಸಂಸ್ಥೆ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ. ಕೊಡುವುದಲ್ಲದೆ, ಮುಂದಿನ ದಿನಗಳಲ್ಲಿ ಹುಲಕೋಟಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳ ಸಹಕಾರದೊಂದಿಗೆ ಅನೇಕ ವೈದ್ಯರನ್ನು ಕರೆದುಕೊಂಡು ಹೋಗಿ, ನೆರೆ ಪೀಡಿತ ಗ್ರಾಮಗಳಲ್ಲಿ ಆರೋಗ್ಯತಪಾಸಣೆ, ಔಷಧ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

ಉಕ ನಿರಾಶ್ರಿತರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಅರ್ಥಪೂರ್ಣವಾಗಿ ಪದಗ್ರಹಣ ಸಮಾರಂಭ ನಡೆದಿರುವುದು ಹೆಮ್ಮೆಯ ವಿಷಯ. ಶಿಕ್ಷಣ ಸಂಸ್ಥೆಯ ಅನೇಕ ಹಿರಿಯರು ನನ್ನ ಮೇಲೆ ವಿಶ್ವಾಸವಿಟ್ಟು ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಾರೆ.ಹಿರಿಯರ ಆಶಯಕ್ಕೆ ಧಕ್ಕೆ ಬಾರದಂತೆ ಕೆಲಸ ನಿರ್ವಹಿಸುವುದಾಗಿ ಹೇಳಿದರು.

ಮಾಜಿ ಶಾಸಕ ದಿ.ಕೆ.ಎಚ್‌. ಪಾಟೀಲ ಅವರು ಉತ್ತರ ಕರ್ನಾಟಕ ಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವ ಸಂಬಂಧ ಹುಲಕೋಟಿ ರೂರಲ್‌ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಮಾಡಿದರು. ಅದೇ ರೀತಿ ಶಾಸಕ ಎಚ್‌.ಕೆ. ಪಾಟೀಲ ಅವರು ಸ್ಮಾರ್ಟ್‌ ವಿಲೇಜ್‌ ಕನಸಿನೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಆರಂಭಿಸಿದರು. ಅವರೆಲ್ಲರ ಆಶಯದಂತೆ ಪ್ರತಿವರ್ಷ 2 ಸಾವಿರ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ವಾಗ್ದಾನದೊಂದಿಗೆ ಕೆಲಸ ಮಾಡಲಾಗುವುದು ಎಂದರು.

ರೂರಲ್‌ ಟೆಕ್ನಿಕಲ್‌ ಎಜ್ಯುಕೇಶನ್‌ ಸೊಸೈಟಿ ಹುಲಕೋಟಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಸ್‌.ಕೆ. ಪಾಟೀಲ ಅವರನ್ನು ಪ್ರಾಚಾರ್ಯ ವಿ.ಎಂ. ಪಾಟೀಲ ಸನ್ಮಾನಿಸಿದರು. ಹುಲಕೋಟಿ ರೂರಲ್‌ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ರೂಪಿಸಿದ ನಮ್ಮ ಗದಗ ಆ್ಯಪ್‌ ಬಿಡುಗಡೆ ಮಾಡಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿ ರೆಜಿಸ್ಟ್ರಾರ್‌ ಡಾ. ಸುರೇಶ ನಾಡಗೌಡರ, ವೈಷ್ಣವಿ ಇನ್ಸಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಿಇಒ ರವಿ ಕೃಷ್ಣಮೂರ್ತಿ, ನವೀನ ಗಿರಿ, ಸೀನಿಯರ್‌ ಸೆಕ್ಯುರಿಟಿ ಎಂಜಿನಿಯರ್‌ ಸಾಗರ ಬೇಲೂರ, ಜಿಎಲ್‌ವೈಪಿಎಚ್‌ ಸಲ್ಯೂಶನ್‌ ಸಿಇಒ ಹರೀಶ ಥಾಲಂಕಿ, ಟೆಕ್ನಿಕಲ್‌ ಡೈರೆಕ್ಟರ್‌ ಎಸ್‌.ಎಚ್‌. ಹಳ್ಳಿಕೇರಿ, ರೆಡ್‌ ಐ ಇಂಡಿಯಾ ಸಿಇಒ ಭದ್ರನ್‌ ವಿ.ವಿ., ಮಿಲನ್‌ ಇನ್ಫೋಟೆಕ್‌ ಸಿಇಒ ಬಸವರಾಜ, ಮಕರಂದ ವೈರಾಗರೆ, ರಮೇಶ ಹೊನ್ನಿನಾಯ್ಕರ್‌, ಪ್ರಾ. ಡಾ.ವಿ.ಎಂ. ಪಾಟೀಲ, ಎಲ್‌.ಎಚ್‌. ಕಾಲವಾಡ ಇತರರು ಉಪಸ್ಥಿತರಿದ್ದರು.

17ಸಲೀಮ16-

ಗದಗ ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ರೂರಲ್‌ ಟೆಕ್ನಿಕಲ್‌ ಎಜ್ಯುಕೇಶನ್‌ ಸೊಸೈಟಿ ಹುಲಕೋಟಿ ಸಂಸ್ಥೆಯ ಪದಗ್ರಹಣ ಸಮಾರಂಭ ಉದ್ಘಾಟನೆಯಲ್ಲಿ ಸಚಿನ್‌ ಪಾಟೀಲ ,ಎಸ್‌.ಕೆ. ಪಾಟೀಲ,ಡಾ. ಸುರೇಶ ನಾಡಗೌಡರ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ