ಆ್ಯಪ್ನಗರ

ಎಪಿಎಂಸಿ ಅಭಿವೃದ್ಧಿಗೆ 8.50ಕೋಟಿ ಅನುದಾನ

ನರಗುಂದ: ಹಿಂದಿನ ಸರಕಾರದ ಅವಧಿಯಲ್ಲಿಎಪಿಎಂಸಿ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆಯಾಗಿರಲಿಲ್ಲ. ಈ ಸರಕಾರ ಬಂದ ನಂತರ 8.50ಕೋಟಿ ಅನುದಾನ ತರುವಲ್ಲಿಯಶಸ್ವಿಯಾಗಿದ್ದು ಎಪಿಎಂಸಿ ಅಭಿವೃದ್ಧಿಗೊಳಿಸುವುದಾಗಿ ಗಣಿ, ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.

Vijaya Karnataka 16 Nov 2019, 5:00 am
ನರಗುಂದ: ಹಿಂದಿನ ಸರಕಾರದ ಅವಧಿಯಲ್ಲಿಎಪಿಎಂಸಿ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆಯಾಗಿರಲಿಲ್ಲ. ಈ ಸರಕಾರ ಬಂದ ನಂತರ 8.50ಕೋಟಿ ಅನುದಾನ ತರುವಲ್ಲಿಯಶಸ್ವಿಯಾಗಿದ್ದು ಎಪಿಎಂಸಿ ಅಭಿವೃದ್ಧಿಗೊಳಿಸುವುದಾಗಿ ಗಣಿ, ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.
Vijaya Karnataka Web 8 50 crore grant for development of apmc
ಎಪಿಎಂಸಿ ಅಭಿವೃದ್ಧಿಗೆ 8.50ಕೋಟಿ ಅನುದಾನ


ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದ ಮುಖ್ಯ ರಸ್ತೆ ಅಭಿವೃದ್ಧ ಹಾಗೂ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ 7.20 ಲಕ್ಷ ರೂ. ಅನುದಾನದಲ್ಲಿದ್ವಿಪಥ ರಸ್ತೆ ನಿರ್ಮಾಣ, ಡಿವೈಡರ್‌ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿವಿದ್ಯುತ್‌ ದೀಪ ಅಳವಡಿಸಲಾಗುವುದು ಎಂದರು.

ಎಪಿಎಂಸಿ ಅಭಿವೃದ್ಧಿಗೆ 5 ಕೋಟಿ ಪ್ರಸ್ತಾವಣೆ ಸಲ್ಲಿಸಿದ್ದು ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಶಿರೋಳ ಎಪಿಎಂಸಿ ಪ್ರಾಂಗಣದಲ್ಲಿಗ್ರಾಮೀಣ ಸಂತೆಗೆ ಐಆರ್‌ಡಿಎಫ್‌ ಅನುದಾನದಲ್ಲಿಸದ್ಯದಲ್ಲೇ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿಎಪಿಎಂಸಿ ಇಲಾಖೆ ಅಧಿಕಾರಿಗಳು, ಎಪಿಎಂಸಿ ಅಧ್ಯಕ್ಷ ಹನಮಂತ ಹದಗಲ್ಲ, ಸದಸ್ಯರಾದ ಎಸ್‌.ಬಿ.ಯಲ್ಲಪ್ಪಗೌಡ್ರ, ಬಿ.ಕೆ.ಗುಜಮಾಗಡಿ, ಎಸ್‌.ಎಚ್‌.ಪಾಟೀಲ, ಎನ್‌.ವಿ.ಮೇಟಿ, ವಿ.ಎನ್‌.ಪಾಟೀಲ, ಮಲ್ಲಪ್ಪ ಭೋವಿ, ಜಿ.ಎಂ.ಹುಡೇದಮನಿ, ಬಿ.ಎನ್‌.ಕೊಳ್ಳಿಯವರ, ಆರ್‌.ಜಿ.ಆಡೂರ,ಮುಖಂಡರಾದ ಬಿ.ಬಿ.ಐನಾಪೂರ, ಚಂದ್ರು ಪವಾರ, ಪುರಸಭೆ ಸದಸ್ಯರಾದ ರಾಚನಗೌಡ ಪಾಟೀಲ, ಬಸು ಪಾಟೀಲ, ಮಹೇಶ ಬೋಳಶೆಟ್ಟಿ, ಪ್ರಶಾಂತ ಜೋಷಿ, ಹನಮಂತ ಹವಾಲ್ದಾರ, ಮಳಗಿ, ಎಲಿಗಾರ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ