ಆ್ಯಪ್ನಗರ

ಸತತ ಮಳೆಗೆ ಕೊಳೆಯುತ್ತಿರುವ ಬೆಳೆ

​ಮುಳಗುಂದ: ನಿರಂತರ ಮಳೆಯಿಂದ ಕಟಾವಿಗೆ ಬಂದ ಶೇಂಗಾ ಬೆಳೆ ಹಸ್ತ ಮಳೆಗೆ ಕೊಳೆಯುತ್ತಿದೆ.ಇದರಿಂದ ಮುಂಗಾರು ಬೆಳೆ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

Vijaya Karnataka 13 Oct 2019, 5:00 am
ವೀರಪ್ಪ ಸಿದ್ದನಗೌಡರ
Vijaya Karnataka Web a crop rotting with continuous rainfall
ಸತತ ಮಳೆಗೆ ಕೊಳೆಯುತ್ತಿರುವ ಬೆಳೆ

ಮುಳಗುಂದ: ನಿರಂತರ ಮಳೆಯಿಂದ ಕಟಾವಿಗೆ ಬಂದ ಶೇಂಗಾ ಬೆಳೆ ಹಸ್ತ ಮಳೆಗೆ ಕೊಳೆಯುತ್ತಿದೆ.ಇದರಿಂದ ಮುಂಗಾರು ಬೆಳೆ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಮುಂಗಾರು ಮಳೆ ಸ್ವಲ್ಪು ತಡವಾಗಿ ಆರಂಭವಾಗಿದ್ದರಿಂದ ಒಂದು ತಿಂಗಳ ತಡವಾಗಿ ಬಿತ್ತನೆ ಮಾಡಿದ ರೈತರು ಈಗ ಶೇಂಗಾ ಬೆಳೆ ಕಟಾವು ಹಂತದಲ್ಲಿದ್ದು ಸತತ ಮಳೆಯಿಂದ ಶೇಂಗಾ ಕೊಳೆಯುತ್ತಿದ್ದು ಅದರ ಜತೆಯಲ್ಲಿಬಿತ್ತನೆ ಮಾಡಿದ ಬಿಟಿ ಹತ್ತಿ,ಮೆಣಸಿನಕಾಯಿ ಬೆಳೆ ಸಂಪೂರ್ಣವಾಗಿ ನೀರಿನಲ್ಲಿನಿಂತಿದೆ. ಇದರಿಂದ ಬಿತ್ತನೆ ಮಾಡಿದ ಬೀಜದ ಜತೆಗೆ ಮಾಡಿದ ಶ್ರಮ ವ್ಯರ್ಥವಾಗುತ್ತಿದೆ.

ಪ್ರಸಕ್ತ ವರ್ಷದ ಮುಂಗಾರು ಮಳೆ ಸಹ ಕೈಕೊಟ್ಟಿತ್ತು. ಸಂಪೂರ್ಣ ಮಳೆರಾಯನ ಅವಕೃಪೆಗೆ ಒಳಗಾಗಿದ್ದರೂ, ಹವಾಮಾನ ಕೃಪೆಯೋ ಇನ್ನೇನೋ ಮುಂಗಾರಿನಲ್ಲಿಬಿತ್ತನೆ ಮಾಡಿದ್ದ ಬೀಜ ಮೊಳಕೆಯೊಡೆದು ಕೊಂಚ ನೆಮ್ಮದಿ ಮೂಡಿಸಿದ್ದವು.ಈ ಬಾರಿಯಾದರೂ ಫಸಲು ಸ್ವಲ್ಪು ಮಟ್ಟಿಗೆ ಆಸರೆಯಾಗುತ್ತದೆ ಎನ್ನುವ ಭರವಸೆಯನ್ನಿಟ್ಟುಕೊಂಡಿದ್ದ ರೈತನಿಗೆ ಸತತ ಮಳೆಯಿಂದ ಹೊಲಗಳಲ್ಲಿಬೆಳೆ ಕೊಳೆಯಲಾರಂಭಿಸಿವೆ.

ಹಿಂಗಾರು ಬೆಳೆ ಕಡಲೆ ಬೀಜವನ್ನು ರೈತರು ಬಿತ್ತನೆ ಮಾಡಿದ್ದರು. ಸತತ ಮಳೆಯಿಂದ ಬೀಜಗಳು ಮೊಳಕೆಯೊಡೆಯದೇ ಹಾಳಾಗಿದ್ದರಿಂದ ಮತ್ತೆ ಬಿತ್ತನೆ ಮಾಡುವ ಸ್ಥಿತಿ ಬಂದಿದೆ ಎಂಬುದು ರೈತನ ಅಳಲು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ