ಗದಗ : ಈಚೆಗೆ ಜನರು ಹಾಗೂ ಯುವಕರು ತಪ್ಪು ದಾರಿಗೆ ಇಳಿಯುತ್ತಿದ್ದು, ಅಂತಹವರನ್ನು ಸರಿಯಾದ ದಾರಿಗೆ ತರಲು ಹಾಗೂ ಸಮಾಜದ ಅಂಕು-ಡೊಂಕು ತಿದ್ದಲು ಪುರಾಣ ಪ್ರವಚನಗಳು ಒಳ್ಳೆಯ ವೇದಿಕೆಗಳಾಗಿವೆ ಎಂದು ಭೈರನಟ್ಟಿ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಒಕ್ಕಲಗೇರಿ ಓಣಿಯ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ 5ನೇ ದಿನದ ಶ್ರಾವಣ ಮಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪುರಾಣ ಪ್ರವಚನಗಳು ಮನುಷ್ಯನ ಶುದ್ಧೀಕರಣ ಮಾಡುತ್ತವೆ. ಮನುಷ್ಯನಿಗೆ ಆಶಯ ಬಹಳಷ್ಟು ಇದ್ದು, ಅವುಗಳನ್ನು ಹತೋಟಿಯಲ್ಲಿಡಲು ಹಾಗೂ ನಮ್ಮ ದೇಹದ ಮನಸ್ಸನ್ನು ಸ್ವಚ್ಛಗೊಳಸಿಕೊಳ್ಳಬೇಕಾದರೆ ಶರಣರ ಅನುಭವ ಕೇಳುವುದು ಶ್ರಾವಣ ಮಾಸ ವಿಶೇಷವಾಗಿದೆ. ಒಳ್ಳೆಯದನ್ನು ಮಾಡುವ ಮುಖಾಂತರ ಅದನ್ನು ಉಪಯೋಗಿಸಿಕೊಳ್ಳಬೇಕು. ಜೀವ ಹೋಗುವವರೆಗೆ ಶರಣರ ಆದರ್ಶ ಪಾಲಿಸಿದರೆ ಅಂತಹವರಿಗೆ ಸದ್ಗತಿ ದೊರೆಯಲಿದೆ. ನಮ್ಮ ದೇಶದಲ್ಲಿ ಸಾವಿರಾರು ಜಾತಿ, ಧರ್ಮಗಳಿದ್ದರೂ ಅಪರೂಪದ ಸಂಸ್ಕೃತಿ ಹೊಂದಿದ ದೇಶ ನಮ್ಮದು. ಶರಣ ಬಸವೇಶ್ವರರ ಪುರಾಣದಲ್ಲಿ ಗುರುಲಿಂಗ ಜಂಗಮ ದಾಸೋಹಕ್ಕೆ ಹೆಚ್ಚಿನ ಪ್ರಧಾನ್ಯತೆ ಇದೆ. ಎಲ್ಲ ವೀರಶೈವ ಲಿಂಗಾಯತರು ಲಿಂಗವನ್ನು ಧರಿಸಬೇಕು. ತಮ್ಮ ಮಕ್ಕಳಿಗೆ ಕೂಡ ಲಿಂಗಧಾರಣೆ ಮಾಡಬೇಕು. ಲಿಂಗಾಯತ ಧರ್ಮವನ್ನು ಬೆಳೆಸಿದವರು ಬಸವಣ್ಣನವರು, ಯಡಿಯೂರ ಸಿದ್ದಲಿಂಗೇಶ್ವರರು, ಶರಣ ಬಸವೇಶ್ವರರು ಎಂದರು.
ಗದಗ ನಗರ ಸಂಗೀತ, ಸಾಹಿತ್ಯ, ನಾಟಕದ ತವರೂರಾಗಿದ್ದು ದಿ.ತೋಂಟದ ಸಿದ್ಧಲಿಂಗ ಶ್ರೀಗಳವರಿಂದ ಗದುಗಿಗೆ ಒಳ್ಳೆಯ ಹೆಸರು ಬಂದಿದೆ. ಅವರು ರಾಷ್ಟ್ರಮಟ್ಟದ ಕೋಮು ಸೌಹಾರ್ದ ಪ್ರಶಸ್ತಿ ತಂದುಕೊಟ್ಟವರಾಗಿದ್ದಾರೆ ಎಂದರು.
ಬಸವಣ್ಣೆಯ್ಯ ಶಾಸ್ತ್ರಿಗಳು ಶರಣ ಬಸವೇಶ್ವರರ ಪ್ರವಚನ ನಡೆಸಿಕೊಟ್ಟರು. ಸಂಗೀತ ಸೇವೆ ಜಗನ್ನಾಥಸಾ ಕಲಬುರ್ಗಿ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಅಧ್ಯಕ್ಷ ತೆ ಟ್ರಸ್ಟ್ ಕಮೀಟಿ ಚೇರಮನ್ ಎಸ್.ಎ.ಮರಬದ ವಹಿಸಿದ್ದರು.
ಶಿವಮೂರ್ತೆಪ್ಪ ಕೋಳಿವಾಡ, ಎಂ.ಎಂ.ಹಿರೇಮಠ, ವೀರುಪಾಕ್ಷ ಪ್ಪ ಅಕ್ಕಿ, ಗಂಗಾಧರ ಮೇಲಗಿರಿ, ಸುರೇಶ ಮರಳಪ್ಪನವರ, ಸಿದ್ದಣ್ಣ ಅರಳಿ, ಶಿವಕುಮಾರ ಹಿರೇಮಠ, ಚನ್ನಪ್ಪ ದ್ಯಾಂಪೂರ, ರಾಚಪ್ಪ ಕೋರಿ, ತೋಟಪ್ಪ ಕರಮುಡಿ, ಶೇಖಪ್ಪ ಹೊಂಬಳ, ಶಂಕರ ನೀರಲಕೇರಿ, ಸುನಂದಾಕ್ಕ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಶ್ರೀದೇವಿ ಮಾನ್ವಿ, ಸುಮಾ ಗಣಾಚಾರಿ, ಪುಷ್ಪಾ ನಂದಿಕೋಲಮಠ ಇದ್ದರು.
ನಗರದ ಒಕ್ಕಲಗೇರಿ ಓಣಿಯ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ 5ನೇ ದಿನದ ಶ್ರಾವಣ ಮಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪುರಾಣ ಪ್ರವಚನಗಳು ಮನುಷ್ಯನ ಶುದ್ಧೀಕರಣ ಮಾಡುತ್ತವೆ. ಮನುಷ್ಯನಿಗೆ ಆಶಯ ಬಹಳಷ್ಟು ಇದ್ದು, ಅವುಗಳನ್ನು ಹತೋಟಿಯಲ್ಲಿಡಲು ಹಾಗೂ ನಮ್ಮ ದೇಹದ ಮನಸ್ಸನ್ನು ಸ್ವಚ್ಛಗೊಳಸಿಕೊಳ್ಳಬೇಕಾದರೆ ಶರಣರ ಅನುಭವ ಕೇಳುವುದು ಶ್ರಾವಣ ಮಾಸ ವಿಶೇಷವಾಗಿದೆ. ಒಳ್ಳೆಯದನ್ನು ಮಾಡುವ ಮುಖಾಂತರ ಅದನ್ನು ಉಪಯೋಗಿಸಿಕೊಳ್ಳಬೇಕು. ಜೀವ ಹೋಗುವವರೆಗೆ ಶರಣರ ಆದರ್ಶ ಪಾಲಿಸಿದರೆ ಅಂತಹವರಿಗೆ ಸದ್ಗತಿ ದೊರೆಯಲಿದೆ. ನಮ್ಮ ದೇಶದಲ್ಲಿ ಸಾವಿರಾರು ಜಾತಿ, ಧರ್ಮಗಳಿದ್ದರೂ ಅಪರೂಪದ ಸಂಸ್ಕೃತಿ ಹೊಂದಿದ ದೇಶ ನಮ್ಮದು. ಶರಣ ಬಸವೇಶ್ವರರ ಪುರಾಣದಲ್ಲಿ ಗುರುಲಿಂಗ ಜಂಗಮ ದಾಸೋಹಕ್ಕೆ ಹೆಚ್ಚಿನ ಪ್ರಧಾನ್ಯತೆ ಇದೆ. ಎಲ್ಲ ವೀರಶೈವ ಲಿಂಗಾಯತರು ಲಿಂಗವನ್ನು ಧರಿಸಬೇಕು. ತಮ್ಮ ಮಕ್ಕಳಿಗೆ ಕೂಡ ಲಿಂಗಧಾರಣೆ ಮಾಡಬೇಕು. ಲಿಂಗಾಯತ ಧರ್ಮವನ್ನು ಬೆಳೆಸಿದವರು ಬಸವಣ್ಣನವರು, ಯಡಿಯೂರ ಸಿದ್ದಲಿಂಗೇಶ್ವರರು, ಶರಣ ಬಸವೇಶ್ವರರು ಎಂದರು.
ಗದಗ ನಗರ ಸಂಗೀತ, ಸಾಹಿತ್ಯ, ನಾಟಕದ ತವರೂರಾಗಿದ್ದು ದಿ.ತೋಂಟದ ಸಿದ್ಧಲಿಂಗ ಶ್ರೀಗಳವರಿಂದ ಗದುಗಿಗೆ ಒಳ್ಳೆಯ ಹೆಸರು ಬಂದಿದೆ. ಅವರು ರಾಷ್ಟ್ರಮಟ್ಟದ ಕೋಮು ಸೌಹಾರ್ದ ಪ್ರಶಸ್ತಿ ತಂದುಕೊಟ್ಟವರಾಗಿದ್ದಾರೆ ಎಂದರು.
ಬಸವಣ್ಣೆಯ್ಯ ಶಾಸ್ತ್ರಿಗಳು ಶರಣ ಬಸವೇಶ್ವರರ ಪ್ರವಚನ ನಡೆಸಿಕೊಟ್ಟರು. ಸಂಗೀತ ಸೇವೆ ಜಗನ್ನಾಥಸಾ ಕಲಬುರ್ಗಿ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಅಧ್ಯಕ್ಷ ತೆ ಟ್ರಸ್ಟ್ ಕಮೀಟಿ ಚೇರಮನ್ ಎಸ್.ಎ.ಮರಬದ ವಹಿಸಿದ್ದರು.
ಶಿವಮೂರ್ತೆಪ್ಪ ಕೋಳಿವಾಡ, ಎಂ.ಎಂ.ಹಿರೇಮಠ, ವೀರುಪಾಕ್ಷ ಪ್ಪ ಅಕ್ಕಿ, ಗಂಗಾಧರ ಮೇಲಗಿರಿ, ಸುರೇಶ ಮರಳಪ್ಪನವರ, ಸಿದ್ದಣ್ಣ ಅರಳಿ, ಶಿವಕುಮಾರ ಹಿರೇಮಠ, ಚನ್ನಪ್ಪ ದ್ಯಾಂಪೂರ, ರಾಚಪ್ಪ ಕೋರಿ, ತೋಟಪ್ಪ ಕರಮುಡಿ, ಶೇಖಪ್ಪ ಹೊಂಬಳ, ಶಂಕರ ನೀರಲಕೇರಿ, ಸುನಂದಾಕ್ಕ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಶ್ರೀದೇವಿ ಮಾನ್ವಿ, ಸುಮಾ ಗಣಾಚಾರಿ, ಪುಷ್ಪಾ ನಂದಿಕೋಲಮಠ ಇದ್ದರು.