ಆ್ಯಪ್ನಗರ

ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ

ಲಕ್ಷ್ಮೇಶ್ವರ: ದೇವೇಗೌಡರ ಕುಟುಂಬ ರಾಜಕಾರಣ, ರಾಹುಲ್‌ ಗಾಂಧಿ ವಂಶ ರಾಜಕಾರಣದಿಂದ ದೇಶವನ್ನು ಹಿಡಿತದಲ್ಲಿಟ್ಟಿಕೊಳ್ಳುವ ಹುನ್ನಾರ ನಡೆಸಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷ ಗಳಿಗೂ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.

Vijaya Karnataka 12 Apr 2019, 5:00 am
ಲಕ್ಷ್ಮೇಶ್ವರ: ದೇವೇಗೌಡರ ಕುಟುಂಬ ರಾಜಕಾರಣ, ರಾಹುಲ್‌ ಗಾಂಧಿ ವಂಶ ರಾಜಕಾರಣದಿಂದ ದೇಶವನ್ನು ಹಿಡಿತದಲ್ಲಿಟ್ಟಿಕೊಳ್ಳುವ ಹುನ್ನಾರ ನಡೆಸಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷ ಗಳಿಗೂ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.
Vijaya Karnataka Web a lesson for family politics
ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ


ಅವರು ಗುರುವಾರ ಲಕ್ಷ್ಮೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ನಡೆದ ರೋಡ್‌ಶೋನಲ್ಲಿ ಭಾಗವಹಿಸಿ ಮಾತನಾಡಿ, ದೇವೇಗೌಡರಿಗೆ ಹಳೇ ಮೈಸೂರು ಮಾತ್ರ ರಾಜ್ಯವಾಗಿದೆ. ತಾಕತ್ತಿದ್ದರೆ ಉತ್ತರ ಕರ್ನಾಟಕದಲ್ಲಿ ರಾಜಕಾರಣ ಮಾಡಿ ತೋರಿಸಲಿ ಎಂದು ಸವಾಲು ಎಸೆದರು.

ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಕಾಂಗ್ರೆಸ್‌ ಪ್ರಣಾಳಿಕೆ ದೇಶದ ರಕ್ಷ ಣೆ ಮತ್ತು ಭದ್ರತೆ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ದೇಶದ ಅಭಿವೃದ್ಧಿಗಾಗಿ ಮೋದಿ ಬೆಂಬಲಿಸಬೇಕು ಎಂದು ಹೇಳಿದರು.

ರೋಡ್‌ ಶೋ ಮತ್ತು ಮತಯಾಚನೆ ಮೆರವಣಿಗೆಯು ಪಟ್ಟಣದ ಸೋಮೇಶ್ವರ ದೇವಸ್ಥಾನದಿಂದ ಆದಯ್ಯ ವೃತ್ತ, ಗದಗ ನಾಕಾ, ಶಿಗ್ಲಿ ನಾಕಾ, ಪಾದಗಟ್ಟಿ, ಹಾವಳಿ ಹನಮಂತ ದೇವಸ್ಥಾನ, ಬರದೇವರ ವೃತ್ತ, ದೂದನಾನಾ ದರ್ಗಾ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಂಪ ವೃತ್ತಕ್ಕೆ ಬಂದು ತಲುಪಿತು.

ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಂಬಣ್ಣ ಬಾಳಿಕಾಯಿ, ಡಾ.ವೈ.ಎಫ್‌.ಹಂಜಿ, ಅಶೋಕ ಪಲ್ಲೇದ, ವಿರುಪಾಕ್ಷ ಪ್ಪ ಅಣ್ಣಿಗೇರಿ, ಪೂರ್ಣಾಜಿ ಖರಾಟೆ, ನಿಂಗಪ್ಪ ಬನ್ನಿ, ಸೋಮಣ್ಣ ಡಾಣಗಲ್‌, ನೀಲಪ್ಪ ಕರ್ಜೆಕಣ್ಣವರ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಡಾ.ಭೀಮಸಿಂಗ್‌ ರಾಥೋಡ, ಸಿದ್ದನಗೌಡ ಬಳ್ಳೊಳ್ಳಿ, ಸುಭಾಸ ಬಟಗುರ್ಕಿ, ಅದಂಸಾಬ ಬಂಕಾಪೂರ, ಗಂಗಪ್ಪ ದುರಗಣ್ಣವರ, ವಿಜಯ ಹತ್ತಿಕಾಳ, ಗಣೇಶ ಬೇವಿನಮರದ, ಶಿವಯೋಗಿ ಅಂಕಲಕೋಟಿ, ದುಂಡೇಶ ಕೊಟಗಿ, ಶ್ರೀಕಾಂತ ಪೂಜಾರ, ಡಿ.ವಾಯ್‌.ಹುನಗುಂದ, ಬಸಣ್ಣ ಕಳಸದ, ಸಿ.ಆರ್‌.ಗೋಕಾವಿ, ಪರಶುರಾಮ ಇಮ್ಮಡಿ, ಪ್ರವೀಣ ಬೋಮಲೆ, ವಾಸು ಬೋಮಲೆ, ನಿಂಬಣ್ಣ ಮಡಿವಾಳರ, ತಾವರೆಪ್ಪ ಲಮಾಣಿ, ಟೋಪಣ್ಣ ಲಮಾಣಿ, ಶಿವಣ್ಣ ಲಮಾಣಿ, ಅನಿಲ ಮುಳಗುಂದ, ರಾಮಣ್ಣ ರಿತ್ತಿ, ವಿಜಯ ಕುಂಬಾರ, ಬಸವರಾಜ ಕುಂಬಾರ, ಬಸವರಾಜ ಮೆಣಸಿನಕಾಯಿ ಸೇರಿದದಂತೆ ಸಾವಿರಾರು ಜನರು ರೋಡಶೋನಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ