ಆ್ಯಪ್ನಗರ

ನ್ಯಾಯ ಸಮ್ಮತ ಮಾಸ್ಟರ್‌ ಪ್ಲ್ಯಾನ್‌ ಅಗತ್ಯ

ನರಗುಂದ : ಈ ಭಾಗದ ರೈತರಿಗೆ ಮಹದಾಯಿ, ಕಳಸಾ ಬಂಡೂರಿ ಯೋಜನೆ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಧೀಕರಣ ತೀರ್ಪು ನೀಡಿದ್ದರೂ ಅದರ ಬಳಕೆ ಕುರಿತು ಸ್ಪಷ್ಟತೆ ಇಲ್ಲ. ನೀರಿನ ಹಕ್ಕನ್ನು ಪ್ರತಿಪಾದಿಸುವ ಮೂಲಕ ನ್ಯಾಯ ಸಮ್ಮತ ಮಾಸ್ಟರ್‌ ಪ್ಲ್ಯಾನ್‌ ರೂಪಿಸುವುದು ಅವಶ್ಯ ಎಂದು ನೀರಾವರಿ ಇಲಾಖೆ ನಿವೃತ್ತ ಎಂಜನಿಯರ್‌ ಎಲ್‌.ಎಚ್‌.ಕುಂಚೂರ ಹೇಳಿದರು.

Vijaya Karnataka 24 Jul 2019, 5:00 am
ನರಗುಂದ : ಈ ಭಾಗದ ರೈತರಿಗೆ ಮಹದಾಯಿ, ಕಳಸಾ ಬಂಡೂರಿ ಯೋಜನೆ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಧೀಕರಣ ತೀರ್ಪು ನೀಡಿದ್ದರೂ ಅದರ ಬಳಕೆ ಕುರಿತು ಸ್ಪಷ್ಟತೆ ಇಲ್ಲ. ನೀರಿನ ಹಕ್ಕನ್ನು ಪ್ರತಿಪಾದಿಸುವ ಮೂಲಕ ನ್ಯಾಯ ಸಮ್ಮತ ಮಾಸ್ಟರ್‌ ಪ್ಲ್ಯಾನ್‌ ರೂಪಿಸುವುದು ಅವಶ್ಯ ಎಂದು ನೀರಾವರಿ ಇಲಾಖೆ ನಿವೃತ್ತ ಎಂಜನಿಯರ್‌ ಎಲ್‌.ಎಚ್‌.ಕುಂಚೂರ ಹೇಳಿದರು.
Vijaya Karnataka Web a master plan of justice is required
ನ್ಯಾಯ ಸಮ್ಮತ ಮಾಸ್ಟರ್‌ ಪ್ಲ್ಯಾನ್‌ ಅಗತ್ಯ


39ನೇ ರೈತ ಹುತಾತ್ಮ ದಿನಾಚರಣೆಯಂದು ಕಳಸಾ ಬಂಡೂರಿ ಹೋರಾಟ ಒಕ್ಕೂಟ, ಜಯ ಕರ್ನಾಟಕ ಸಂಘಟನೆ ಒಳಗೊಂಡ ಮಹದಾಯಿಗಾಗಿ ಮಹಾವೇದಿಕೆ ಆಶ್ರಯದಲ್ಲಿ ನಡೆದ ರೈತ ಸಮಾವೇಶದಲ್ಲಿ ಮಾತನಾಡಿದರು. ಮುಂದಿನ ದಿನದಲ್ಲಿ ನೀರಿನ ಕೊರತೆ ಹೆಚ್ಚಾಗಲಿದೆ. ಇದನ್ನು ಅಧ್ಯಯನ ಮಾಡಿ ವರದಿ ಸಿದ್ದಪಡಿಸುವುದು ಅವಶ್ಯ ಎಂದರು.

ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಮಲಪ್ರಭೆ ತುಂಬಬೇಕು. ಈ ನಿಟ್ಟಿನಲ್ಲಿ ನದಿ ಕಣಿವೆಯಿಂದ ನೀರು ತರುವ ಮಾಸ್ಟರ್‌ ಪ್ಲ್ಯಾನ್‌ ಸಿದ್ದಪಡಿಸಿದ್ದು ಅದನ್ನು ಸರಕಾರಕ್ಕೂ ಒಪ್ಪಿಸಿದ್ದೇನೆ. ಯೋಜನೆ ಬಗ್ಗೆ ತಾಂತ್ರಿಕ ಸಲಹೆ ನೀಡಲು ಒಪ್ಪಿದ್ದೇನೆ. ಈಗಿರುವ ಯೋಜನೆಯಲ್ಲಿ ತಾಂತ್ರಿಕ ದೋಷವಿದೆ. ನ್ಯಾಯಾಧೀಕರಣ ಆದೇಶ ಜಾರಿಗೆ ತರಲು ನೀಲ ನಕ್ಷೆ ಇಲ್ಲ. ಈ ಕುರಿತು ಸರಕಾರ ಗಮನಿಸಿ ಯೋಜನೆ ಜಾರಿಗೆ ಮುಂದಾಗಬೇಕು ಎಂದರು.

ಶಂಕರ ಅಂಬಲಿ ಮಾತನಾಡಿ, ಈ ಭಾಗದ ರೈತರ ಭವಿಷ್ಯ ಮಹದಾಯಿ, ಕಳಸಾ ಬಂಡೂರಿ ನೀರಿನಲ್ಲಿದೆ ಎಂಬುದು ಆಳುವವರ ಅರಿವಿಗೆ ಬರುತ್ತಿಲ್ಲ. ನ್ಯಾಯಾಧೀಕರಣ ತೀರ್ಪುನ್ನು ಜಾರಿಗೆ ತಂದು ಈ ಭಾಗದ ಜನರಿಗೆ ಸಿಗಬೇಕಾದ ನೀರನ್ನು ಪಡೆದುಕೊಳ್ಳಲು ಸರಕಾರಗಳು ಮುಂದೆಬಂದು ರೈತರ ಬೇಡಿಕೆ ಇಡೇರಿಸಬೇಕು ಎಂದು ಒತ್ತಾಯಿಸಿದರು.

ಕಳಸಾ ಬಂಡೂರಿ ಯುವ ಹೋರಾಟ ವೇದಿಕೆ ಅಧ್ಯಕ್ಷ ವಿಜಯ ಕುಲಕರ್ಣಿ ರೈತರ ನಿರಂತರ ಹೋರಾಟಕ್ಕೆ ಜಯ ಸಿಗುವುದಿಲ್ಲ. ಸರಕಾರಗಳ ಮೂಗು ಹಿಡಿದು ಬಾಯಿ ತೆಗೆಸುವ ಹೋರಾಟ ಅವಶ್ಯವಾಗಿದೆ ಎಂದರು. ಜಯ ಕರ್ನಾಟಕ ಸಂಘಟನೆಯ ಆರ್‌.ಚಂದ್ರಪ್ಪ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ದವಾಗಿದ್ದೇವೆ ಎಂದರು. ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಸಾಬಳೆ, ನಗರ ಅಧ್ಯಕ್ಷ ವಿಠಲ ಜಾಧವ ಮಾತನಾಡಿದರು. ವೇದಿಕೆ ಮೇಲೆ ಕೃಷ್ಣಾನಂದ ಸ್ವಾಮೀಜಿ, ಸಿ.ಎಸ್‌.ಪಾಟೀಲ, ಮಧುಸೂದನ ತಿವಾರಿ, ಎಚ್‌.ಎಸ್‌.ಪಾಟೀಲ, ಮಲ್ಲನಗೌಡ ಹುನಗುಂದ, ಸಂಗಮೇಶ ಚಿಕ್ಕನರಗುಂದ, ಚನ್ನು ನಂದಿ, ಜಗದೀಶ ಬೆಳವಟಗಿ, ಚಂದ್ರಕಾಂತ ಚವ್ಹಾಣ ಮುಂತಾದವರು ಪಾಲ್ಗೊಂಡಿದ್ದರು.ನಾಗೇಶ ಅಪೊ್ಪೕಜಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ