ಆ್ಯಪ್ನಗರ

ಕುವೆಂಪು ಯುಗದ, ಜಗದ ಕವಿ

ಮುಂಡರಗಿ: ಬಾಲ್ಯದಿಂದಲೇ ಕುವೆಂಪು ವೈಚಾರಿಕತೆ ರೂಢಿಸಿಕೊಂಡಿದ್ದರು. ಅವರ ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಎಲ್ಲಪ್ರಕಾರಗಳಲ್ಲಿಯೂ ಸಾಹಿತ್ಯ ವೈಚಾರಿಕತೆಯ ನೆಲೆಗಟ್ಟಿನಲ್ಲಿಯೇ ಮೂಡಿ ಬಂದಿದೆ ಎಂದು ಪ್ರೊ.ಸಿ.ಎಸ್‌.ಅರಸನಾಳ ಹೇಳಿದರು.

Vijaya Karnataka 10 Jan 2020, 5:00 am
ಮುಂಡರಗಿ: ಬಾಲ್ಯದಿಂದಲೇ ಕುವೆಂಪು ವೈಚಾರಿಕತೆ ರೂಢಿಸಿಕೊಂಡಿದ್ದರು. ಅವರ ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಸಾಹಿತ್ಯ ವೈಚಾರಿಕತೆಯ ನೆಲೆಗಟ್ಟಿನಲ್ಲಿಯೇ ಮೂಡಿ ಬಂದಿದೆ ಎಂದು ಪ್ರೊ.ಸಿ.ಎಸ್‌.ಅರಸನಾಳ ಹೇಳಿದರು.
Vijaya Karnataka Web a poet of great age
ಕುವೆಂಪು ಯುಗದ, ಜಗದ ಕವಿ


ಕಸಾಪ ಆಶ್ರಯದಲ್ಲಿನಡೆದ ವಾರದ ಸಾಹಿತ್ಯ ಗೋಷ್ಠಿಯಲ್ಲಿಕುವೆಂಪು ಸಾಹಿತ್ಯದಲ್ಲಿವೈಜ್ಞಾನಿಕ ಮನೋಭಾವ ಕುರಿತು ಅವರು ಉಪನ್ಯಾಸ ನೀಡಿದರು.

ವೈಜ್ಞಾನಿಕ ಇನ್ನೊಂದು ಮುಖವೇ ವೈಚಾರಿಕತೆಯಾಗಿದ್ದು ಮನುಷ್ಯ ಜಾಗತೀಕ ಮಾನವನಾಗಿ ಬೆಳಗಬೇಕು. ಜಾತಿ ಮತ, ಪಂಥ, ದೇಶ ಎಲ್ಲೆಮೀರಿ ನಿಲ್ಲಬೇಕು ಎಂಬ ಸಂದೇಶವೇ ಅವರ ಸಾಹಿತ್ಯದ ಮೂಲ ತಿರುಳಾಗಿತ್ತು. ಅವರ ಕಾನೂನು ಹೆಗ್ಗಡತಿ ಕಾದಂಬರಿ ಮಾನವೀಯತೆ ಮೌಲ್ಯ ಬಿಂಬಿಸುವ ವಸ್ತುವಾಗಿದೆ. ಮೂಢನಂಬಿಕೆ ವಿರುದ್ಧವೂ ಅವರ ಲೇಖನಿ ಮೂಡಿ ಬಂದಿದ್ದು ವಿಶೇಷ. ಹೀಗಾಗಿ ಬೇಂದ್ರೆ ಅವರೇ ಕರೆದಿರುವಂತೆ ಕುವೆಂಪು ಯುಗದ ಮತ್ತು ಜಗದ ಕವಿಯಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಕೆ.ಎ.ಹಿರೇಮಠ ಮಾತನಾಡಿ, ಪ್ರತಿ ವಾರ ಪಟ್ಟಣದಲ್ಲಿಸಾಹಿತ್ಯಗೋಷ್ಠಿ ಹಮ್ಮಿಕೊಳ್ಳಲಾಗುವುದು. ಸಾಹಿತ್ಯ, ಜಾನಪದ, ನೃತ್ಯ ಸಂಗೀತ ಹೀಗೆ ಸಾಹಿತ್ಯದ ಹಲವು ಪ್ರಕಾರಗಳ ಕುರಿತು ಚರ್ಚೆ ಮತ್ತು ಉಪನ್ಯಾಸ ಏರ್ಪಡಿಸಲಾಗುವುದು. ಒಟ್ಟಾರೆ ಸಾಹಿತ್ಯದ ಸೌರಭವನ್ನು ಮನೆ, ಮನೆಗೆ ಬೆಳೆಸಿ ಸಾಹಿತ್ಯ ಚಟುವಟಿಕೆಗಳನ್ನು ವಿಸ್ತಾರಗೊಳಿಸಲಾಗುವುದು. ಮನೆಯಂಗಳದಲ್ಲಿ, ಶಾಲೆಯಂಗಳದಲ್ಲಿಸಾಹಿತ್ಯ ನಡೆಸಿ ಒತ್ತಡದ ಜೀವನಕ್ಕೆ ಇಂತಹ ಕಾರ್ಯಕ್ರಮಗಳು ನೆಮ್ಮದಿ ನೀಡಲಿವೆ ಎಂದರು.

ಕಾರ್ಯಕ್ರಮದಲ್ಲಿಬಸವಂತಪ್ಪ ಮುದ್ದಿ ಮಾತನಾಡಿದರು. ಯುವರಾಜ ಮುಂಡರಗಿ, ಎಸ್‌.ಎನ್‌.ಡೋಣಿ, ರವಿ ದೇವರೆಡ್ಡಿ, ಕಾಶೀನಾಥ ಶಿರಬಡಗಿ, ಸಿ.ಕೆ.ಗಣಪ್ಪನವರ ಇತರರು ಪಾಲ್ಗೊಂಡಿದ್ದರು.

ಎಂ.ಬಿ.ಮೇಟಿ ಸ್ವಾಗತಿಸಿದರು. ಬಿ.ಬಿ.ಬೆನಕವಾರಿ ನಿರೂಪಿಸಿದರು. ವಿಶ್ವನಾಥ ಉಳ್ಳಾಗಡ್ಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ