ಆ್ಯಪ್ನಗರ

ವಿವೇಕಾನಂದರ ವಿಚಾರಗಳಿಂದ ಸದೃಢ ವ್ಯಕ್ತಿತ್ವ

ಗದಗ : ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಯುವಕರು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಾಗ ಸದೃಢ ವ್ಯಕ್ತಿತ್ವ ಬೆಳೆಯಲು ಸಾಧ್ಯ ಎಂದು ಜಿಲ್ಲೆಯ ಪದವಿ ಪೂರ್ವ ಶಿಕ್ಷ ಣ ಇಲಾಖೆ ನಿರ್ದೇಶಕ ಎಸ್‌.ಎಸ್‌.ಹಿರೇಮಠ ಹೇಳಿದರು.

Vijaya Karnataka 1 Jan 2019, 5:00 am
ಗದಗ : ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಯುವಕರು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಾಗ ಸದೃಢ ವ್ಯಕ್ತಿತ್ವ ಬೆಳೆಯಲು ಸಾಧ್ಯ ಎಂದು ಜಿಲ್ಲೆಯ ಪದವಿ ಪೂರ್ವ ಶಿಕ್ಷ ಣ ಇಲಾಖೆ ನಿರ್ದೇಶಕ ಎಸ್‌.ಎಸ್‌.ಹಿರೇಮಠ ಹೇಳಿದರು.
Vijaya Karnataka Web a strong personality from vivekanandas ideas
ವಿವೇಕಾನಂದರ ವಿಚಾರಗಳಿಂದ ಸದೃಢ ವ್ಯಕ್ತಿತ್ವ


ಸ್ವಾಮಿ ವಿವೇಕಾನಂದರ ಚಿಕಾಗ್ಯೋ ಉಪನ್ಯಾಸದ 125ನೇ ವರ್ಷದ ವರ್ಷಾಚರಣೆ ಅಂಗವಾಗಿ ನಗರದ ವಿದ್ಯಾದಾನ ಸಮಿತಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ ಜಿಲ್ಲಾಮಟ್ಟದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರ ತತ್ವ, ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಅವುಗಳಿಂದ ಯುವಕರಲ್ಲಿ ಸಕಾರಾತ್ಮಕ ವಿಚಾರಗಳು ಬರಲು ಸಾಧ್ಯ ಅಂತಹ ವಿಚಾರಗಳನ್ನು ಯುವಕರು ಅಧ್ಯಯನಗೈದು ತಮ್ಮಲ್ಲಿ ಅನ್ವಯಿಸಿಕೊಂಡಾಗ ಅತ್ಯುತ್ತಮ ಜೀವನ ರೂಪಿಸಿಕೊಳ್ಳಲು ಆಗುತ್ತದೆ ಎಂದರು.

ಅಧ್ಯಕ್ಷ ತೆ ವಹಿಸಿದ್ದÜ ವಿದ್ಯಾದಾನ ಸಮಿತಿ ಅಧ್ಯಕ್ಷ ಡಿ.ಬಿ.ಹುಯಿಲಗೋಳ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರಿಗೆ ಆದರ್ಶಪ್ರಾಯವಾದ ವ್ಯಕ್ತಿ. ಅವರು ಯಾವುದೇ ದೇಶ, ಜಾತಿ ವರ್ಗಕ್ಕೆ ಸೀಮಿತರಾಗಿಲ್ಲ. ಇಡೀ ವಿಶ್ವಕ್ಕೆ ಮಾರ್ಗದರ್ಶಿಗಳಾಗಿದ್ದಾರೆ. ವಿಚಾರಗಳನ್ನು ಯುವಕರಲ್ಲಿ ಬಿತ್ತುವ ಕಾರ್ಯ ಮಾಡಿದ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವರ್ಷಾಚರಣೆ ಸಮಿತಿ ನಿಜಕ್ಕೂ ಅಭಿನಂದನಾರ್ಹರು ಎಂದರು. ನೀಲಮ್ಮ ಶಾನವಾಡ, ಎಂ.ಸಿ.ಕಟ್ಟಿಮನಿ ಮಾತನಾಡಿದರು.

ಸ್ಪರ್ಧೆಯ ಫಲಿತಾಂಶ :

ಭಾಷಣ ಸ್ಪರ್ಧೆ: ಭಾರತಿ ಪ್ರಲಪಟ್ಲಿ , ಪ್ರಥಮ ಸ್ಥಾನ (ಗದಗ ತಾಲೂಕು), ಚೈತ್ರಾ ಗೌಡರ, ದ್ವಿತೀಯ ಸ್ಥಾನ (ಗಜೇಂದ್ರಗಡ ತಾಲೂಕು), ಆಕಾಶ ಹಂಸನೂರ ತೃತೀಯ ಸ್ಥಾನ (ಗದಗ ತಾಲೂಕು)

ಪ್ರಬಂಧ ಸ್ಪರ್ಧೆ: ಸುಧಾ ಬಾರಕೇರ, ಪ್ರಥಮ ಸ್ಥಾನ (ಶಿರಹಟ್ಟಿ ತಾಲೂಕು), ನೇತ್ರಾವತಿ ಭೋವಿ, ದ್ವಿತೀಯ ಸ್ಥಾನ (ಮುಂಡರಗಿ ತಾಲೂಕು), ಹನಮವ್ವ ಗೂಳಪ್ಪನವರ, ತೃತೀಯ ಸ್ಥಾನ (ಶಿರಹಟ್ಟಿ ತಾಲೂಕು)

ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಎ. ಎನ್‌. ನಾಗರಳ್ಳಿ , ಕಿಶೋರಬಾಬು ನಾಗರಕಟ್ಟಿ, ಎಸ್‌.ಐ.ಮೇಟಿ, ಟಿ.ಬಿ.ಬೋದ್ಲೆಖಾನ, ಜೆ.ಡಿ.ಸಂಶಿ, ಪಿ.ಜೆ.ಕಟ್ಟಿಮನಿ, ಎಸ್‌. ಪಿ. ಗೌಳಿ, ಸುಜೀತ ಎಸ್‌., ಡಿ.ಎಲ್‌. ಪಾಟೀಲ, ಡಾ.ವೈ. ಆರ್‌. ಬೆಲೇರಿ, ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ