ಆ್ಯಪ್ನಗರ

ಈಡೀ ಊರೇ ಮೌನ...!

ರೋಣ: ಒಬ್ಬರು, ಇಬ್ಬರೂ ದೇವರಿಗೆ ಮೌನ ವೃತ ಮಾಡುತ್ತಾರೆ. ಆದರೆ ಈ ಗ್ರಾಮವೇ ಮೌನವಾಗಿ ಇರುವುದು ಬಲು ಅಪರೂಪ. ತಾಲೂಕಿನ ಸವಡಿ ಗ್ರಾಮದಲ್ಲಿಕಾರ್ತಿಕ ಮಾಸದ ಛಟ್ಟಿ ಅಮವಾಸ್ಯೆ ನಂತರ ಮಂಗಳವಾರ, ಬುಧವಾರ ಎರಡು ದಿನ ಊರಿನಾಚೆ ಇರುವ ಎರಿಶೀಗೆಮ್ಮ ದೇವಿ ಜಾತ್ರೆ ಅದ್ದೂರಿಯಾಗಿ

Vijaya Karnataka 1 Dec 2019, 5:00 am
ಯಲ್ಲಪ್ಪ ತಳವಾರ
Vijaya Karnataka Web a whole bunch of silence
ಈಡೀ ಊರೇ ಮೌನ...!

ರೋಣ: ಒಬ್ಬರು, ಇಬ್ಬರೂ ದೇವರಿಗೆ ಮೌನ ವೃತ ಮಾಡುತ್ತಾರೆ. ಆದರೆ ಈ ಗ್ರಾಮವೇ ಮೌನವಾಗಿ ಇರುವುದು ಬಲು ಅಪರೂಪ. ತಾಲೂಕಿನ ಸವಡಿ ಗ್ರಾಮದಲ್ಲಿಕಾರ್ತಿಕ ಮಾಸದ ಛಟ್ಟಿ ಅಮವಾಸ್ಯೆ ನಂತರ ಮಂಗಳವಾರ, ಬುಧವಾರ ಎರಡು ದಿನ ಊರಿನಾಚೆ ಇರುವ ಎರಿಶೀಗೆಮ್ಮ ದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಈ ಎರೆಶೀಗೆಮ್ಮ ಊರಿಂದ 5 ಕಿಮೀ ದೂರದಲ್ಲಿದೆ. ಮಂಗಳವಾರ ನಡೆಯುವ ಜಾತ್ರೆಗೆ ಸವಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಪಾಲ್ಗೊಂಡು ಜಾತ್ರೆ ಆಚರಿಸುವುದು ತಲೆ ತಲಾಂತರಗಳಿಂದ ನಡೆದು ಬಂದಿರುವ ಸಂಪ್ರದಾಯ.

ಪವಾಡ:
ಐತಿಹಾಸಿಕ ಹಿನ್ನೆಲೆ ಹೊಂದಿರುವ ಸವಡಿಯಲ್ಲಿನೆಲೆಸಿರುವ ಸಂಗಮೇಶ್ವರರ ಕೃಪೆಗೆ ಪಾತ್ರರಾಗಿದ್ದ ಪವಾಡ ಪುರುಷ ಕುಂಟಜ್ಜನವರು ಗದಗ ತಾಲೂಕಿನ ನಾಗಸಮುದ್ರ ಗ್ರಾಮಕ್ಕೆ ಪ್ರಯಾಣ ಕೈಗೊಂಡರಂತೆ. ಸವಡಿಯಿಂದ ದಕ್ಷಿಣಕ್ಕೆ 5 ಹರದಾರಿ ಅಂತರ ಕ್ರಮಿಸಿದ ನಂತರ ಇವರು ಬಯಲು ಭೂಮಿಯಲ್ಲಿಭೂತಚೇಷ್ಟೆಗೆ ಒಳಗಾದರಂತೆ.ಭೂತ ನಿನ್ನನ್ನು ಬಿಡಲಾರೆ ಎಂದು ಅಟ್ಟಹಾಸದಿಂದ ನಗುವಾಗ ಕುಂಟಜ್ಜನವರು ಪತಿವೃತೆಯಾದ ನೀನು ಇಲ್ಲಿರಾಕ್ಷಸ ರೂಪ ಏಕೆ ತಾಳಿರುವೆ ಎಂದು ಅವಳ ಪೂರ್ವ ಇತಿಹಾಸ ಹೇಳಿದರಂತೆ.ಇದರಿಂದ ವಿಸ್ಮಯಳಾದ ಅವಳು ಕುಂಟಜ್ಜ ನೀವು ಸಾಮಾನ್ಯರಲ್ಲನಿಮಗೆ ಶರಣಾಗುತ್ತೇನೆ ಎಂದು ನುಡಿದಳಂತೆ.

ಕುಂಟಜ್ಜ ತಾಯಿ ನೀನು ಎರೇ ಭೂಮಿಯ ತಾಯಿಯಾಗು.ಬೇಡಿದ್ದನ್ನು ಕರುಣಿಸುವ ಎರೆಶೀಗಮ್ಮನಾಗು ಎಂದು ಆಶೀರ್ವದಿಸಿದರಂತೆ. ನಂತರ ಕುಂಟಜ್ಜ ತಮ್ಮ ಮಿತ್ರ ಈರಸಂಗಪ್ಪನಿಗೆ ಎರೆಶೀಗಮ್ಮ ನೆಲೆ ನಿಂತ ಸ್ಥಳದಲ್ಲಿಕೆರೆ ನಿರ್ಮಿಸಲು ಹೇಳಿದರು. ನೂತನ ಕೆರೆ ನಿರ್ಮಾಣ ಮಾಡಿದ ನಂತರ ಕುಂಟಜ್ಜ ಮಾರ್ಗಶಿರ ಮಾಸದ ಮೊದಲ ಸೋಮವಾರ ಸಂಗಮೇಶ್ವರರ ಕಾರ್ತಿಕದ ಮರುದಿನವೇ ಮಂಗಳವಾರ ಕೆರೆ ಪೂಜೆಗೆ ದಿನವನ್ನು ನಿಗದಿಪಡಿಸಿರುತ್ತಾರೆ.

ಅಂದಿನಿಂದ ಇಂದಿನವರೆಗೂ ಎರೆಶಿಗಮ್ಮ ನೆಲೆ ನಿಂತಿರುವ ಸ್ಥಳದಲ್ಲಿಸವಡಿ ಹಾಗೂ ಸುತ್ತಮುತ್ತಲಿನ ಮತ್ತು ನಾಡಿನ ವಿವಿಧ ಗ್ರಾಮದ ಭಕ್ತರು ಕಡಬಿನ ನೈವೇದ್ಯ ಹಾಗೂ ಕಡಬಿನ ಕಾಳಗ ಮತ್ತು ಮಂಗಲದ್ರವ್ಯಗಳಾದ ಅರೀಷಿನ, ಕುಂಕುಮ, ಬಳೆಗಳನ್ನು ಅರ್ಪಿಸಿ ಉಡಿ ತುಂಬುವ ಪರಂಪರೆಯು ಸಾಗುತ್ತಿದೆ.
ಊರಲ್ಲಿಒಬ್ಬರು ಸಿಗಲ್ಲ:
ಬೆಳಗ್ಗೆಯಿಂದ ಸಂಜೆವರೆಗೆ ಊರಲ್ಲಿಒಬ್ಬರೂ ಇರುವುದಿಲ್ಲ. ತಮ್ಮ ಮನೆಗೆ ಬೀಗ ಹಾಕಿಕೊಂಡು ಎಲ್ಲರೂ ದೇವಿ ದರ್ಶನಕ್ಕೆ ಮುಂದಾಗುತ್ತಾರೆ. ಇದು ಹಿಂದಿನಿಂದ ನಡೆದುಕೊಂಡ ಬಂದ ವಿಶಿಷ್ಟ ಆಚರಣೆ. ಈ ದೇವಿಯ ಸನ್ನಿಧಿಗೆ ಬಂದು ಭಕ್ತರು ಏನು ಬೇಡಿಕೊಂಡರೂ ಅವರ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ