ಆ್ಯಪ್ನಗರ

ಅಬ್ಬಿಗೇರಿ ಹೋರಾಟಗಾರರಿಗೆ ಪ್ರೇರಕ ಶಕ್ತಿ

ಗಜೇಂದ್ರಗಡ: ಸ್ವಾತಂತ್ರ್ಯ ಸಂಗ್ರಾಮ, ಏಕೀಕರಣ ಚಳವಳಿ, ಸಮಾಜವಾದಿ, ಗೋಕಾಕ, ಹೈದರಾಬಾದ್‌-ಕರ್ನಾಟಕ ವಿಮೋಚನೆ ಮುಂತಾದ ಚಳವಳಿಗಳಲ್ಲಿಸಕ್ರಿಯವಾಗಿ ಪಾಲ್ಗೊಂಡು ಇತರರಿಗೂ ಭಾಗಿಯಾಗುವಂತೆ ಪ್ರೇರಣೆ ನೀಡಿದ ವ್ಯಕ್ತಿತ್ವ ಅಬ್ಬಿಗೇರಿ ವಿರೂಪಾಕ್ಷಪ್ಪರವರದಾಗಿತ್ತು ಎಂದು ಕಸಾಪ ತಾಲೂಕು ಅಧ್ಯಕ್ಷ ಐ.ಎ. ರೇವಡಿ ಹೇಳಿದರು.

Vijaya Karnataka 1 Dec 2020, 5:00 am
ಗಜೇಂದ್ರಗಡ: ಸ್ವಾತಂತ್ರ್ಯ ಸಂಗ್ರಾಮ, ಏಕೀಕರಣ ಚಳವಳಿ, ಸಮಾಜವಾದಿ, ಗೋಕಾಕ, ಹೈದರಾಬಾದ್‌-ಕರ್ನಾಟಕ ವಿಮೋಚನೆ ಮುಂತಾದ ಚಳವಳಿಗಳಲ್ಲಿಸಕ್ರಿಯವಾಗಿ ಪಾಲ್ಗೊಂಡು ಇತರರಿಗೂ ಭಾಗಿಯಾಗುವಂತೆ ಪ್ರೇರಣೆ ನೀಡಿದ ವ್ಯಕ್ತಿತ್ವ ಅಬ್ಬಿಗೇರಿ ವಿರೂಪಾಕ್ಷಪ್ಪರವರದಾಗಿತ್ತು ಎಂದು ಕಸಾಪ ತಾಲೂಕು ಅಧ್ಯಕ್ಷ ಐ.ಎ. ರೇವಡಿ ಹೇಳಿದರು.
Vijaya Karnataka Web 30GJD-1_25
ಗಜೇಂದ್ರಗಡ ಮೈಸೂರು ಮಠದಲ್ಲಿಕಸಾಪದಿಂದ ನಡೆದ 200ನೇ ವಾರದ ಸಾಹಿತ್ಯ ಚಿಂತನಾ ಗೋಷ್ಠಿಯಲ್ಲಿಪರಶುರಾಮ ಗೌಡರ ಮಾತನಾಡಿದರು.


ಸ್ಥಳೀಯ ಮೈಸೂರು ಮಠದಲ್ಲಿನಡೆದ 200ನೇ ವಾರದ ಸಾಹಿತ್ಯ ಚಿಂತನಾ ಗೋಷ್ಠಿ ಹಾಗೂ ರೋಣ, ಗಜೇಂದ್ರಗಡ ತಾಲೂಕಿನ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಬ್ಯಾಂಕಿಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕ ಮಂಡಳಿಗೆ ಗೌರವ ಸಮರ್ಪಣೆ ಮತ್ತು ಎಂಬಿಬಿಎಸ್‌ಗೆ ಅರ್ಹತೆ ಪಡೆದ ಪ್ರತಿಭಾವಂತರ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನ ವೀರಪಾಕ್ಷಪ್ಪನವರ ಧ್ಯೇಯ ಎಲ್ಲರಿಗೂ ದಾರಿ ದೀಪವಾಗಿದೆ.ಲೋಹಿಯಾ ಅವರು ವಿರುಪಾಕ್ಷಪ್ಪ ಅವರನ್ನು ಕಾಣುವುದಕ್ಕಾಗಿ ಸೂಡಿಗೆ ಬಂದು ಚರ್ಚೆ, ಚಿಂತನೆ ನಡೆಸಿದ್ದರು ಎಂದರು. ಪರಶುರಾಮಗೌಡ ಗೌಡರ ಉಪನ್ಯಾಸ ನೀಡಿದರು.ಶರಣಪ್ಪ ಬೇವಿನಕಟ್ಟಿ ಮಾತನಾಡಿದರು.

ಇದೇ ವೇಳೆ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಬ್ಯಾಂಕಿಗೆ ಆಯ್ಕೆಯಾದ ಉಪಾಧ್ಯಕ್ಷ ಎಸ್‌.ಡಿ.ಕುರಿ, ಎಚ್‌.ಆರ್‌ ಭಜಂತ್ರಿ,ಎನ್‌.ಎನ್‌. ಅಂಗಡಿ, ಎಂ.ಆರ್‌. ಎತ್ತಿನಮನಿ, ಆನಂದ ಸೊಪ್ಪಡ್ಲಹಾಗೂ ನೀಟ್‌ ಪರೀಕ್ಷೆ ಮೂಲಕ ಸರಕಾರಿ ವೈದ್ಯಕೀಯ ಕಾಲೇಜಗೆ ನೇರ ಅರ್ಹತೆ ಪಡೆದ ಸುಜಯ್‌ ಪಸಾರದ, ಶಾಹೀನ್ತಾಜ ರೋಣದ, ಎಸ್‌. ಎಂ.ಅಬ್ಬಿಗೇರಿ, ಶ್ರೀನಿವಾಸ್‌ ವನ್ನಾಲ, ಸ್ರಷ್ಠಿ ಶಟ್ಟರ, ಭಾವನಾ ಮ್ಯಾಗೇರಿ ಅವರನ್ನು ಸನ್ಮಾನಿಸಲಾಯಿತು.

ಬಿ.ವಿ.ಮುನವಳ್ಳಿ, ಸಂಗಮೇಶ ಅಬ್ಬಿಗೇರಿ, ಶರಣಮ್ಮ ಅಂಗಡಿ, ಶರಣಪ್ಪ ಬೇವಿನಕಟ್ಟಿ, ಶಂಕರ ಕಲ್ಲಿಗನೂರ, ಹೆಚ್‌.ಆರ್‌.ಭಜಂತ್ರಿ, ಎಸ್‌.ಎಸ್‌. ನರೇಗಲ್ಲ, ಕೆ.ಜಿ.ಸಂಗಟಿ, ಎಂ.ಎಸ್‌. ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ