ಆ್ಯಪ್ನಗರ

ಎಸಿಬಿ ಬಲೆಗೆ ಸರ್ವೆಯರ್‌

ಮುಂಡರಗಿ : ಇಲ್ಲಿಯ ಭೂಮಾಪನ ಇಲಾಖೆಯ ಪರವಾನಗಿ ಪಡೆದ ಭೂಮಾಪಕ ಎಸ್‌.ಎಚ್‌.ಹರೀಶ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

Vijaya Karnataka 23 May 2019, 5:00 am
ಮುಂಡರಗಿ : ಇಲ್ಲಿಯ ಭೂಮಾಪನ ಇಲಾಖೆಯ ಪರವಾನಗಿ ಪಡೆದ ಭೂಮಾಪಕ ಎಸ್‌.ಎಚ್‌.ಹರೀಶ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
Vijaya Karnataka Web acb trap serveyar
ಎಸಿಬಿ ಬಲೆಗೆ ಸರ್ವೆಯರ್‌


ಇವರು ನಾಗಹರಳ್ಳಿ ಗ್ರಾಮದ ರೈತ ವೀರಭದ್ರಪ್ಪ ದೇವಪ್ಪ ಹಡಪದ ಎಂಬುವವರ ಜಮೀನು ನಕ್ಷೆ ಮಾಡಿಕೊಡಲು 3 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಮುಂಡರಗಿ ಬಸ್‌ ನಿಲ್ದಾಣ ಬಳಿಯ ಕೋಲ್ಡ್ರಿಂಕ್ಸ್‌ ಮಳಿಗೆಯಲ್ಲಿ ರೈತನಿಂದ 3 ಸಾವಿರ ಹಣ ಪಡೆಯುತ್ತಿದ್ದಾಗ ಹಣ ಸಮೇತ ಆರೋಪಿ ಹರೀಶ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ದಾಳಿಯ ನೇತೃತ್ವ ವಹಿಸಿದ್ದ ಗದಗ ಎಸಿಬಿ ಡಿವೈಎಸ್‌ಪಿ ವಿಜಯಕುಮಾರ ಬಿಸನಳ್ಳಿ ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್‌ ಎ.ಎಸ್‌.ಬೂದಿಕೊಪ್ಪ, ಮೋಹನ ತಾನಪ್ಪಗೋಳ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ