ನರೇಗಲ್ಲ: ಸಮಿಪದ ಜಕ್ಕಲಿ ಗ್ರಾಮದ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು.
ಹೂವಿನಿಂದ ಅಲಂಕಾರಗೊಂಡಿದ್ದ ಪಲ್ಲಕ್ಕಿಯಲ್ಲಿಖೇಳಗಿಯ ಶ್ರೀ ಶಿವಲಿಂಗ ಸ್ವಾಮಿಗಳು ಅಲಂಕರಿಸಿ ಸದ್ಭಕ್ತರು ತಂದ ಹಣ್ಣು, ಕಾಯಿ, ಉತ್ತತ್ತಿ ನೀಡಿ ಆಶೀರ್ವದಿಸಿದರು.
ಅನ್ನದಾನೇಶ್ವರ ಮಠದಿಂದ ಸಾಗಿದ ಪಲ್ಲಕ್ಕಿಯನ್ನು ಹೊತ್ತ ಸದ್ಭಕ್ತರು ಮೆರವಣೆಗೆಯಲ್ಲಿಪಾಲ್ಗೊಂಡು ಅಡಕೇಶ್ವರ ಮಡಕೇಶ್ವರ ಮಹಾಂತಮಲ್ಲಯ್ಯ ಉಗೇ..... ಉಗೆ..., ಅನ್ನದಾನೇಶ್ವರ ಮಹಾರಾಜಕೀ ಜೈ. ಎಂಬ ಜಯಘೋಷದೊಂದಿಗೆ ನರೇಗಲ್ಲಪುರವಂತರರು ದೇವರ ವಡಪುಗಳೊಂದಿಗೆ ಸಾಗಿದರು. ಸಂದಿಗವಾಡದ ಭಜನಾ ಮಂಡಳಿ, ಡೊಳ್ಳಿನ ಮೇಳ, ಭಜನೆಗಳು ಪ್ರಮುಖ ರಸ್ತೆಗಳಲ್ಲಿಸಂಚರಿಸಿ ಕಲ್ಮೇಶ್ವರ ದೇವಸ್ಥಾನ ಹತ್ತಿರದ ಅಣ್ಣಯ್ಯ ತಮ್ಮಯ್ಯ ಶಿವಶರಣರ ಗದ್ದುಗೆಗೆ ಪೂಜೆ ಸಲ್ಲಿಸಿ ಮರಳಿ ಮಠ ತಲುಪಿತು.
ಹೂವಿನಿಂದ ಅಲಂಕಾರಗೊಂಡಿದ್ದ ಪಲ್ಲಕ್ಕಿಯಲ್ಲಿಖೇಳಗಿಯ ಶ್ರೀ ಶಿವಲಿಂಗ ಸ್ವಾಮಿಗಳು ಅಲಂಕರಿಸಿ ಸದ್ಭಕ್ತರು ತಂದ ಹಣ್ಣು, ಕಾಯಿ, ಉತ್ತತ್ತಿ ನೀಡಿ ಆಶೀರ್ವದಿಸಿದರು.
ಅನ್ನದಾನೇಶ್ವರ ಮಠದಿಂದ ಸಾಗಿದ ಪಲ್ಲಕ್ಕಿಯನ್ನು ಹೊತ್ತ ಸದ್ಭಕ್ತರು ಮೆರವಣೆಗೆಯಲ್ಲಿಪಾಲ್ಗೊಂಡು ಅಡಕೇಶ್ವರ ಮಡಕೇಶ್ವರ ಮಹಾಂತಮಲ್ಲಯ್ಯ ಉಗೇ..... ಉಗೆ..., ಅನ್ನದಾನೇಶ್ವರ ಮಹಾರಾಜಕೀ ಜೈ. ಎಂಬ ಜಯಘೋಷದೊಂದಿಗೆ ನರೇಗಲ್ಲಪುರವಂತರರು ದೇವರ ವಡಪುಗಳೊಂದಿಗೆ ಸಾಗಿದರು. ಸಂದಿಗವಾಡದ ಭಜನಾ ಮಂಡಳಿ, ಡೊಳ್ಳಿನ ಮೇಳ, ಭಜನೆಗಳು ಪ್ರಮುಖ ರಸ್ತೆಗಳಲ್ಲಿಸಂಚರಿಸಿ ಕಲ್ಮೇಶ್ವರ ದೇವಸ್ಥಾನ ಹತ್ತಿರದ ಅಣ್ಣಯ್ಯ ತಮ್ಮಯ್ಯ ಶಿವಶರಣರ ಗದ್ದುಗೆಗೆ ಪೂಜೆ ಸಲ್ಲಿಸಿ ಮರಳಿ ಮಠ ತಲುಪಿತು.