ಆ್ಯಪ್ನಗರ

ನೂತನ ತಳಿ ಅಳವಡಿಸಿಕೊಳ್ಳಿ

ಗದಗ: ತಾಲೂಕಿನ ಬಳಗಾನೂರು ಗ್ರಾಮದ ಆರ್‌.ಎನ್‌. ಪಾಟೀಲ, ಆರ್‌. ಎಸ್‌. ಕುಲಕರ್ಣಿ ಹೊಲದಲ್ಲಿನಡೆದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಹಿಂಗಾರು ಹಂಗಾಮಿನಲ್ಲಿಜೋಳದ ಎಸ್‌ಪಿವಿ-2217, ಸಿಎಸ್‌ವಿ-29 ಆರ್‌ ಹಾಗೂ ಕಡಲೆಯಲ್ಲಿಬಿಜಿಡಿ-111-01 ಎಂಬ ನೂತನ ತಳಿಗಳ ಮುಂಚೂಣಿ ಪ್ರಾತ್ಯಕ್ಷಿಕೆ ಹಾಗೂ ದ್ವೆತ್ರೖಮಾಸಿಕ ಕಾರ್ಯಾಗಾರ ನಡೆಯಿತು.

Vijaya Karnataka 1 Feb 2020, 5:00 am
ಗದಗ: ತಾಲೂಕಿನ ಬಳಗಾನೂರು ಗ್ರಾಮದ ಆರ್‌.ಎನ್‌. ಪಾಟೀಲ, ಆರ್‌. ಎಸ್‌. ಕುಲಕರ್ಣಿ ಹೊಲದಲ್ಲಿನಡೆದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಹಿಂಗಾರು ಹಂಗಾಮಿನಲ್ಲಿಜೋಳದ ಎಸ್‌ಪಿವಿ-2217, ಸಿಎಸ್‌ವಿ-29 ಆರ್‌ ಹಾಗೂ ಕಡಲೆಯಲ್ಲಿಬಿಜಿಡಿ-111-01 ಎಂಬ ನೂತನ ತಳಿಗಳ ಮುಂಚೂಣಿ ಪ್ರಾತ್ಯಕ್ಷಿಕೆ ಹಾಗೂ ದ್ವೆತ್ರೖಮಾಸಿಕ ಕಾರ್ಯಾಗಾರ ನಡೆಯಿತು.
Vijaya Karnataka Web adopt a new breed
ನೂತನ ತಳಿ ಅಳವಡಿಸಿಕೊಳ್ಳಿ


ವಿಜಯಪುರದ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಜಿಲ್ಲೆಯಲ್ಲಿಕಡಲೆ ಬೆಳೆಗೆ ತುಕ್ಕು ರೋಗದ ಬಾಧೆ ಹೆಚ್ಚಾಗಿ ಕಂಡುಬಂದಿದ್ದು ಇದರ ನಿಯಂತ್ರಣಕ್ಕೆ ನೂತನ ಶಿಲೀಂಧ್ರನಾಶಕಗಳಾದ ಟೆಬುಕೋನಾಜೋಲ್‌ (1.00ಮಿಲೀ/ಲೀ ನೀರಿಗೆ) ಅಥವಾ ಸಂಯುಕ್ತ ಶಿಲೀಂಧ್ರನಾಶಕ ಟೆಬುಕೋನಾಜೋಲ್‌ + ಟ್ರೆತ್ರೖಫೊ್ಲೕಕ್ಸಿಸ್ಟೊ್ರೕಬಿನ (0.50 ಗ್ರಾಂ/ 1 ಲೀಟರ್‌ ನೀರಿಗೆ) ಸೂಕ್ತವಾಗಿದೆ ಎಂದರು.

ಕಡಲೆ ಬೆಳೆ ಸಸ್ಯರೋಗ ಶಾಸ್ತ್ರಜ್ಞ ಡಾ.ಬಸಮ್ಮ ಕುಂಬಾರ ಮಾತನಾಡಿ, ತುಕ್ಕು ರೋಗದ ನಿರ್ವಹಣೆಗೆ ಅನೇಕ ಕ್ರಮ ಅನುಸರಿಸುವುದರ ಜತೆಗೆ ಬೆಳೆ ಪರಿವರ್ತನೆ ಸೂಕ್ತ ಕ್ರಮವಾಗಿದೆ ಎಂದರು.

ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ಮಾತನಾಡಿ, ಕ್ಷೇತ್ರದಲ್ಲಿಯಶಸ್ವಿಯಾದ ಇಂತಹ ತಾಂತ್ರಿಕತೆ ಅಳವಡಿಸಿಕೊಳ್ಳಲು ರೈತರು ಕೂಡಲೆ ಮುಂದೆ ಬರಬೇಕೆಂದು ಹೇಳಿದರು.

ಕಡಲೆ ಹಾಗೂ ಜೋಳದ ನೂತನ ತಳಿಗಳನ್ನು ಯಶಸ್ವಿಯಾಗಿ ಬೆಳೆದ ಬಳಗಾನೂರು ಗ್ರಾಮದ ಪ್ರಗತಿಪರ ರೈತ ರಾಜೇಂದ್ರಗೌಡ ಪಾಟೀಲ, ರಾಜು ಕುಲಕರ್ಣಿ, ಕಿರಟಗೇರಿ ಗ್ರಾಮದ ಹಿರೇಮಠ ಮಾತನಾಡಿದರು.

ದ್ವೆತ್ರೖಮಾಸಿಕ ಕಾರ್ಯಾಗಾರದಲ್ಲಿಭಾಗವಹಿಸಿದ್ದ ಜಿಲ್ಲೆಯ ವಿವಿಧ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು, ಆತ್ಮಾ ಹಾಗೂ ಜಡ್‌ಬಿಎನ್‌ಎಫ್‌ನ ಸಿಬ್ಬಂದಿ ಹಿಂಗಾರು ಹಂಗಾಮಿನ ಕೃಷಿ ಸಮಸ್ಯೆ ಚಿರ್ಚಿಸಿ ರೈತರೊಂದಿಗೆ ಸಂವಾದ ನಡೆಸಿದರು.

ಬಸವರಾಜ ನಾವಿ, ಡಾ.ಸಿ.ಎಂ. ರಪಿ, ಉತ್ತಮ ಕಾಳು ಹಾಗೂ ಮೇವು ಕೊಡುವ ಜೋಳದ ತಳಿಗಳು ಹಾಗೂ ಬರಗಾಲದಲ್ಲೂಉತ್ತಮ ಇಳುವರಿ ನೀಡಬಲ್ಲಕಡಲೆಯ ನೂತನ ತಳಿಗಳು ಜಿಲ್ಲೆಯ ರೈತರಿಗೆ ವರದಾನವಾಗಿದೆ ಎಂದು ಸಂತಸ ವ್ಯಸ್ತಪಡಿಸಿದರು.

ಚೆನ್ನಪ್ಪ ಅಂಗಡಿ, ಬೆಟದೂರು, ಜಿಲ್ಲೆಯಾದ್ಯಂತ ಸುಮಾರು 40 ಕೃಷಿ ಡೀಲರ್‌ಗಳು, 150ಕ್ಕೂ ಹೆಚ್ಚು ರೈತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ