ಆ್ಯಪ್ನಗರ

ಸರಳ ಜೀವನ ಶೈಲಿ ಅಳವಡಿಸಿಕೊಳ್ಳಿ

ಲಕ್ಕುಂಡಿ: ಮಾನವೀಯ ಮೌಲ್ಯ ಅಳವಡಿಸಿಕೊಂಡಿದ್ದ ಡಾ ಅಬ್ದುಲ್‌ ಕಲಾಂ ಅವರ ಸರಳ ಸಜ್ಜನಿಕೆ ಗುಣಗಳು ಈ ಸಮಾಜಕ್ಕೆ ಮಾದರಿಯಾಗಿದೆ ಎಂದು ಗದಗ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಹೇಳಿದರು.

Vijaya Karnataka 17 Oct 2019, 5:00 am
ಲಕ್ಕುಂಡಿ: ಮಾನವೀಯ ಮೌಲ್ಯ ಅಳವಡಿಸಿಕೊಂಡಿದ್ದ ಡಾ ಅಬ್ದುಲ್‌ ಕಲಾಂ ಅವರ ಸರಳ ಸಜ್ಜನಿಕೆ ಗುಣಗಳು ಈ ಸಮಾಜಕ್ಕೆ ಮಾದರಿಯಾಗಿದೆ ಎಂದು ಗದಗ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಹೇಳಿದರು.
Vijaya Karnataka Web adopt a simple life style
ಸರಳ ಜೀವನ ಶೈಲಿ ಅಳವಡಿಸಿಕೊಳ್ಳಿ


ಇಲ್ಲಿಯ ವಿರುಪಾಕ್ಷೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಯುಥ್‌ ಫೆæಡರೇಶನ್‌ ಆಫ್‌ ಇಂಡಿಯಾ ಹುಬ್ಬಳ್ಳಿ ಆಶ್ರ¿åದಲ್ಲಿಜರುಗಿದ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಜನ್ಮ ದಿನೋತ್ಸವ ಉದ್ಘಾಟಿಸಿ ಮಾತನಾಡಿದರು. ಕಲಾಂ ಅವರು ಈ ದೇಶದ ರಾಷ್ಟ್ರಪತಿ ಅಥವಾ ವಿಜ್ಞಾನಿ ಮಾತ್ರ ಆಗಿರಲಿಲ್ಲ. ತಮ್ಮ ಜೀವನದುದ್ದಕ್ಕೂ ಯಾವುದೇ ಆಡಂಬರದ ಜೀವನದ ವ್ಯಾಮೋಹಕ್ಕೆ ಬಲಿಯಾಗದೇ ಅತ್ಯಂತ ಸರಳವಾದ ಜೀವನ ಶೈಲಿ ಹೊಂದಿದ ವ್ಯಕ್ತಿಯಾಗಿದ್ದರು.

ಈಗಾಗಲೇ ಬೈಕ್‌ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಲು ಪೆಟ್ರೂೕಲ್‌ ಬಂಕ್‌ಗಳಲ್ಲಿಹೆಲ್ಮೆಟ್‌ ಇದ್ದರೆ ಪೆಟ್ರೋಲ್‌ ಹಾಕಿ ಎಂದು ಆದೇಶ ಹೊರಡಿಸಿದ್ದು ದಯವಿಟ್ಟು ಈ ಕಾನೂನನ್ನು ಪಾಲಿಸಿ. ಅಪಘಾತ ತಡೆಗಟ್ಟಲು ಸಾರ್ವಜನಿಕರು ಸಹಕರಿಸಿ ಎಂದರು.

ಮಾಜಿ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ಅಬ್ದುಲ್‌ ಕಲಾಂ ಅವರು ಮುಸ್ಲಿಮರಾದರೂ ಬಾಲ್ಯದಲ್ಲಿವೈದಿಕ ಪರಿಸರದಲ್ಲಿಬೆಳೆದ ಅವರು ಆದರ್ಶ ರಾಷ್ಟ್ರಪತಿಯಾಗಿ ಅಮರರಾಗಿದ್ದಾರೆ. ಏರೋನಾಟಿಕಲ್‌ ಇಂಜನಿಯರಾಗಿದ್ದ ಅವರು ಈ ದೇಶಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಸರಳ ಜೀವನ ನಮಗೆಲ್ಲದಾರಿ ದೀಪ ಎಂದರು.

2020ಕ್ಕೆ ಭಾರತವು ವಿಶ್ವಗುರು ಆಗಬೇಕೆಂಬ ಅಬ್ದುಲ್‌ ಕಲಾಂ ಅವರ ಕನಸನ್ನು ನನಸು ಮಾಡುವುದು ಈ ಸಂಘದ ಮೂಲ ಉದ್ದೇಶವಾಗಿದೆ.ಇದರ ಜತೆ ಎಲ್ಲರೂ ಕೈಜೋಡಿಸಬೇಕೆಂದು ಅಬ್ದುಲ್‌ ಕಲಾಂ ಯುಥ್‌ ಪೆಡರೇಶನ್‌ ಸಂಸ್ಥಾಪಕ ಅಮೃತ ಮಂಟೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿಭಾಗವಹಿಸಲು ಮಲೇಷಿಯಾಕ್ಕೆ ತೆರಳುತ್ತಿರುವ ಗ್ರಾಮದ ಪ್ರೀತಿ ಹಡಗಲಿ ಅವರನ್ನು ಸನ್ಮಾನಿಸಲಾಯಿತು.

ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಬಾವಿ, ಗ್ರಾಪಂ ಸದಸ್ಯ ಮಹಾಂತೇಶ ಮೆಣಸಿನಕಾಯಿ, ರುದ್ರಪ್ಪ ಮುಸ್ಕಿನಬಾವಿ, ಅಜ್ಜಗಣ್ಣ ಮುಕ್ತಾಯಕ್ಕ ಮಹಿಳಾ ಸಂಘದ ಅಧ್ಯಕ್ಷೆ ನೀಲವ್ವ ವಡ್ಡರ, ಉಪಾಧ್ಯಕ್ಷೆ ಅನ್ನಪೂರ್ಣ ಹಡಗಲಿ ವೇದಿಕೆಯಲ್ಲಿದ್ದರು. ವಿರುಪಾಕ್ಷಿ ಬೆಟಗೇರಿ ಸ್ವಾಗತಿಸಿದರು. ಸಂಗಮೇಶ ತಿಮ್ಮಾಪೂರ ನಿರೂಪಿಸಿದರು. ರಾಘವೇಂದ್ರ ವಿಠೋಜಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ