ಆ್ಯಪ್ನಗರ

ಜೀವನದಲ್ಲಿ ಸ್ವದೇಶಿತನ ಅಳವಡಿಸಿಕೊಳ್ಳಿ

ಗದಗ: ಪ್ರತಿನಿತ್ಯ ಯೋಗವನ್ನು ಮನೆ ಬಾಗಿಲಿಗೆ ಮುಟ್ಟಿಸುವ ಯೋಗ ಋುಷಿ ಬಾಬಾ ರಾಮದೇವ ಗುರೂಜಿಯವರು ಸನ್ಯಾಸ ದೀಕ್ಷೆ ಪಡೆದ ದಿನ ಅತೀ ಮಹತ್ವದ ದಿನವಾಗಿದೆ ಎಂದು ಭಾರತ ಸ್ವಾಭಿಮಾನ ಟ್ರಸ್ಟ್‌ನ ಜಿಲ್ಲಾ ಪ್ರಭಾರಿಗಳು, ರಾಜ್ಯ ಸಮಿತಿ ಸದಸ್ಯ ಗುದ್ರಣ್ಣ ಗುಳಗುಳೆ ಹೇಳಿದರು.

Vijaya Karnataka 16 Apr 2019, 5:00 am
ಗದಗ: ಪ್ರತಿನಿತ್ಯ ಯೋಗವನ್ನು ಮನೆ ಬಾಗಿಲಿಗೆ ಮುಟ್ಟಿಸುವ ಯೋಗ ಋುಷಿ ಬಾಬಾ ರಾಮದೇವ ಗುರೂಜಿಯವರು ಸನ್ಯಾಸ ದೀಕ್ಷೆ ಪಡೆದ ದಿನ ಅತೀ ಮಹತ್ವದ ದಿನವಾಗಿದೆ ಎಂದು ಭಾರತ ಸ್ವಾಭಿಮಾನ ಟ್ರಸ್ಟ್‌ನ ಜಿಲ್ಲಾ ಪ್ರಭಾರಿಗಳು, ರಾಜ್ಯ ಸಮಿತಿ ಸದಸ್ಯ ಗುದ್ರಣ್ಣ ಗುಳಗುಳೆ ಹೇಳಿದರು.
Vijaya Karnataka Web adopt native country
ಜೀವನದಲ್ಲಿ ಸ್ವದೇಶಿತನ ಅಳವಡಿಸಿಕೊಳ್ಳಿ


ಜಿಲ್ಲಾ ಪತಂಜಲಿ ಯೋಗ ಸಮಿತಿ, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ, ಕಿಸಾನ ಪಂಚಾಯತ ಆಶ್ರಯದಲ್ಲಿ ಶ್ರೀಮಂತಗಡದ ತಾಯಿ ಹೊಳಲಮ್ಮ ದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಬಾ ರಾಮದೇವ ಗುರೂಜಿಯವರು ಯೋಗ ಪೀಠ ಸ್ಥಾಪಿಸಲು ಕಾರಣ ಹಾಗೂ ಪರಿಶ್ರಮವನ್ನು ಸವಿವರವಾಗಿ ಹೇಳುವುದರೊಂದಿಗೆ ಯೋಗ, ಆಯುರ್ವೇದ, ಸ್ವದೇಶಿ ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಜಿಲ್ಲಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಗಂಗಾಧರ ಬಡಿಗಣ್ಣವರ ಮಾತನಾಡಿ, ಬಾಬಾ ರಾಮದೇವ ಗುರೂಜಿಯವರ ಕನಸು ಸದೃಢ ಭಾರತ ನಿರ್ಮಾಣ. ಸದೃಢ ದೇಶವನ್ನು ನಾವು ಕಟ್ಟ ಬೇಕಾದರೆ ಯೋಗ, ಆಯುರ್ವೇದ, ಸ್ವದೇಶಿ ಇವುಗಳನ್ನು ನಮ್ಮ ಜೀವನ ಪದ್ಧತಿಯನ್ನಾಗಿ ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಎಂದರು.

ಕೆ.ಎಸ್‌.ಗುಗ್ಗರಿ, ಸದಾನಂದ ಕಾಮತ, ಶಿವಬಸಪ್ಪ ಯಂಡಿಗೇರಿ, ಆಂಜನೇಶ ಮಾನೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ