ಆ್ಯಪ್ನಗರ

ನೀರು ಸಂರಕ್ಷ ಣೆಗೆ ಮುಂದಾಗಿ

ಗದಗ: ಕೇಂದ್ರ ಸರಕಾರವು ಜಲಶಕ್ತಿ ಅಭಿಯಾನ ಆರಂಭಿಸಿದೆ. ಜಿಲ್ಲೆಯಲ್ಲಿ ಕೃಷಿ ಹಾಗೂ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು, ನೀರು ಸಂರಕ್ಷ ಣೆ ಪುನರ್ಜೀವಕರಿಸುವ ನಿಟ್ಟಿನಲ್ಲಿ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಹೇಳಿದರು.

Vijaya Karnataka 25 Jul 2019, 5:00 am
ಗದಗ: ಕೇಂದ್ರ ಸರಕಾರವು ಜಲಶಕ್ತಿ ಅಭಿಯಾನ ಆರಂಭಿಸಿದೆ. ಜಿಲ್ಲೆಯಲ್ಲಿ ಕೃಷಿ ಹಾಗೂ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು, ನೀರು ಸಂರಕ್ಷ ಣೆ ಪುನರ್ಜೀವಕರಿಸುವ ನಿಟ್ಟಿನಲ್ಲಿ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಹೇಳಿದರು.
Vijaya Karnataka Web advance water conservation
ನೀರು ಸಂರಕ್ಷ ಣೆಗೆ ಮುಂದಾಗಿ


ತಾಲೂಕಿನ ಹುಲಕೋಟಿಯ ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಪಂ, ಐಸಿಎಆರ್‌ ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ರಿಲಯನ್ಸ್‌ ಫೌಂಡೇಶನ್‌ ಆಶ್ರಯದಲ್ಲಿ ಹುಲಕೋಟಿಯಲ್ಲಿ ಜಲಶಕ್ತಿ ಅಭಿಯಾನ ಹಾಗೂ ಧ್ವನಿ ಸಂದೇಶ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಂತರ್ಜಲದ ಮೇಲೆ ಹೆಚ್ಚಿನ ಅವಲಂಬನೆ, ಮಳೆ ಕೊರತೆ, ಅಸಮರ್ಪಕ ನೀರಿನ ಬಳಕೆ, ನಗರೀಕರಣ ಹಾಗೂ ಉದ್ಯಮೀಕರಣಗಳಿಂದ ನೀರಿನ ಬೇಡಿಕೆ ಹೆಚ್ಚಾಗಿದ್ದು, ನೀರಿನ ಸಂರಕ್ಷ ಣೆ ಹಾಗೂ ಅದರ ಸಮರ್ಪಕ ಬಳಕೆ ಬಗ್ಗೆ ಜನ ಸಮೂಹಕ್ಕೆ ಅರಿವು ಮೂಡಿಸಬೇಕಾಗಿದೆ ಎಂದರು.

ರಿಲಯನ್ಸ್‌ ಸಂಸ್ಥೆಯ ಮಾಹಿತಿ ತಂತ್ರಜ್ಞ ಡಾ.ಸುರೇಶ ಅಡಿಗ ಮಾತನಾಡಿ, ಈ ವ್ಯವಸ್ಥೆಯಲ್ಲಿ ಜಿಲ್ಲೆಯ ರೈತರಿಗೆ ಕೃಷಿ ಸಂಬಂಧಿತ ಮಾಹಿತಿ, ವಿವಿಧ ಇಲಾಖೆಗಳ ಯೋಜನೆಗಳು, ಕೃಷಿ ಮಾರುಕಟ್ಟೆ ಹಾಗೂ ಹವಾಮಾನ ಮಾಹಿತಿಯನ್ನು ಧ್ವನಿ ಸಂದೇಶದ ಮುಖಾಂತರ ರೈತರ ಮೊಬೈಲ್‌ಗಳಿಗೆ ಕಳುಹಿಸಲಾಗುವುದು. ಜಿಲ್ಲೆಯ ನೋಂದಾಯಿತ 98 ಸಾವಿರ ರೈತರಿಗೆ ಮಾಹಿತಿ ಕಳುಹಿಸಲಾಗುತ್ತದೆ. ಈಗಾಗಲೇ ರಿಲಾಯನ್ಸ್‌ ಫೌಂಡೇಶನ್‌ ಸಂಸ್ಥೆಯು ಕರ್ನಾಟಕ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಲಕ್ಷಾಂತರ ರೈತರಿಗೆ ಧ್ವನಿ ಸಂದೇಶವನ್ನು ಕೊಡಲಾಗುತ್ತಿದ್ದು, ಜಿಲ್ಲೆಯಲ್ಲಿ ಮೊದಲನೆ ಸಲ ಈ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಿಲಯನ್ಸ್‌ ಫೌಂಡೇಶನ್‌ ಹಾಗೂ ಕೆವಿಕೆ ವತಿಯಿಂದ ಧ್ವನಿ ಸಂದೇಶ ಉದ್ಘಾಟಿಸಲಾಯಿತು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಚ್‌.ಎಸ್‌.ಜಿನಗಿ ಮಾತನಾಡಿ, ನೀರು ಸಂರಕ್ಷ ಣೆಯಲ್ಲಿ ರೈತ ಸಮುದಾಯ ಕ್ರಿಯಾಶೀಲರಾಗಿ ಭಾಗವಹಿಸಲು ಹೇಳಿದರು.

ಕುರಿ ಹಾಗೂ ಉಣ್ಣೆ ನಿಗಮದ ಸಹಾಯಕ ನಿರ್ದೇಶಕ ಡಾ.ಆರ್‌.ಎಂ. ನಾಯಕರ, ಡಾ.ಬಿ.ಐ.ಬಿದರಿ, ಎಸ್‌.ಎಚ್‌.ಆದಾಪೂರ, ಬಿ.ಗೋವಿಂದಯ್ಯ, ಶಿವಶರಣಪ್ಪ, ಎಸ್‌.ಕೆ.ಮುದ್ಲಾಪೂರ, 250 ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು, ಶ್ರಮಜೀವಿ ರೈತ ಉತ್ಪಾದಕ ಸಂಸ್ಥೆಯ ಸದಸ್ಯರು ಹಾಗೂ ಕೃಷಿ ವಿದ್ಯಾರ್ಥಿನಿಯರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ